ಆ.30ರಂದು ಫೋಸಿಲ್ ಜೆನ್ 6 ಅನಾವರಣ
ಕೇವಲ 30 ನಿಮಿಷಗಳಲ್ಲಿ ಶೇ. 80 ಚಾರ್ಜ್ ಆಗಬಲ್ಲದು ಎನ್ನಲಾಗಿದೆ.
Team Udayavani, Aug 30, 2021, 12:55 PM IST
ನವದೆಹಲಿ:2019ರಲ್ಲಿ ಜೆನ್ 5 ಸ್ಮಾರ್ಟ್ವಾಚ್ಗಳನ್ನು ಬಿಡುಗಡೆ ಮಾಡಿದ್ದ ಫೋಸಿಲ್ ಸಂಸ್ಥೆ ಇದೀಗ ಜೆನ್6 ಸ್ಮಾರ್ಟ್ವಾಚ್ನ್ನು ಅನಾವರಣಗೊಳಿ ಸಲು ಸಿದ್ಧವಾಗಿದೆ. ಆ.30ರಂದು ಈ ಸ್ಮಾರ್ಟ್ವಾಚ್ ಅನಾವರಣಗೊಳ್ಳಲಿದೆ. 42 ಮಿಮೀ ಮತ್ತು 44ಮಿಮೀ ಗಾತ್ರದಲ್ಲಿ ವಾಚ್ಲಭ್ಯವಾಗಲಿದೆ.
1ಜಿಬಿರ್ಯಾಮ್ ಮತ್ತು 6 ಜಿಬಿ ಇಂಟರ್ನಲ್ ಸ್ಟೋರೇಜ್, ಸ್ನ್ಯಾಪ್ಡ್ರಾಗನ್ 4100+ ಪ್ರೊಸೆಸರ್,1.28 ಇಂಚಿನ ಒಎಲ್ಇಡಿ ಸ್ಕ್ರೀನ್ ಇದರಲ್ಲಿರಲಿದೆ. ಒಮ್ಮೆ ಚಾರ್ಜ್ ಮಾಡಿದರೆ24 ಗಂಟೆಗಳ ಕಾಲ ಬಳಸಬಹುದು. ಕೇವಲ 30 ನಿಮಿಷಗಳಲ್ಲಿ ಶೇ. 80 ಚಾರ್ಜ್ ಆಗಬಲ್ಲದು ಎನ್ನಲಾಗಿದೆ. ಈ ಸ್ಮಾರ್ಟ್ವಾಚ್ನ ಬೆಲೆ 26,000 ರೂ.ನಿಂದ 28,500 ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
ನೌಕೆ ತಯಾರಿಕಾ ಹಬ್ ಆಗುತ್ತೆ ಭಾರತ
ಇಡೀ ವಿಶ್ವದಲ್ಲೇ ಒಂದು ಅತ್ಯು ತ್ತಮ ಸಮರ ನೌಕೆ ನಿರ್ಮಾಣ ಕೇಂದ್ರವಾಗುವ ಅದ್ಭುತ ಅವಕಾಶಗಳನ್ನು ಭಾರತ ಹೊಂದಿದೆ. ಅದಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ನಮ್ಮ ಸರ್ಕಾರ ಈಗಾಗಲೇ ಕಲ್ಪಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ದೇಶೀಯವಾಗಿ ತಯಾರಿಸಲಾಗಿರುವ “ವಿಗ್ರಹ’ ಗಸ್ತು ನೌಕೆಯನ್ನು ಭಾರತೀಯ ಕರಾವಳಿ ರಕ್ಷಕ ಪಡೆಯ (ಐಸಿಜಿಎಸ್) ಸೇವೆಗೆ ನಿಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿ ದರು. “ಇಡೀ ವಿಶ್ವದಲ್ಲಿ ಎಲ್ಲಾ ದೇಶಗಳೂ ತಮ್ಮ ರಕ್ಷಣಾ ವೆಚ್ಚವನ್ನು ಅಗಾಧವಾಗಿ ಹೆಚ್ಚಿಸಿಕೊಂಡಿವೆ.
ಮುಂದಿನ ಎರಡು ವರ್ಷದಲ್ಲಿ ವಿಶ್ವದ ಒಟ್ಟಾರೆ ರಕ್ಷಣಾ ವೆಚ್ಚ 15 ಸಾವಿರ ಕೋಟಿ ರೂ.ಗಳನ್ನು ಮೀರುತ್ತದೆ.ಇದನ್ನುಮನಗಂಡು ನಮ್ಮ ಸರ್ಕಾರ, ಭಾರತವನ್ನು ವಿಶ್ವದ ದೊಡ್ಡ ಸಮರ ನೌಕೆಗಳ ನಿರ್ಮಾಣ ತಾಣವನ್ನಾಗಿಸಲು ಅಗತ್ಯವಾದ ಎಲ್ಲಾ ನಿಯಮಗಳನ್ನು ಜಾರಿಗೊಳಿಸಿದೆ” ಎಂದಿದ್ದಾರೆ.ಕರಾವಳಿ ರಕ್ಷಕ ಪಡೆಗೆ ಸೇರಿಸಲಾದ “ವಿಗ್ರಹ’ ಗಸ್ತು ನೌಕೆಯನ್ನು ಲಾರ್ಸೆನ್ ಆ್ಯಂಡ್ ಟಬ್ರೋ ಕಂಪನಿಯು ಪೂರೈಸಿದೆ.
ಐಸಿಜಿಎಸ್ಗೆ ಸೇರ್ಪಡೆ ಯಾದ ಒಟ್ಟು 7 ನೌಕೆಗಳ ಪೈಕಿ ಕೊನೆಯ ನೌಕೆ ಇದಾಗಿದೆ. ಸುಧಾರಿತ ಟೆಕ್ನಾಲಜಿ ರೇಡಾರ್ಗಳು, ನೇವಿಗೇಷನ್ ಮತ್ತು ಸಂವಹನ ಉಪಕರಣಗಳು, ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ ಸೆನ್ಸರ್ಗಳು ಮತ್ತು ಯಂತ್ರಗಳು ಇದರಲ್ಲಿವೆ. ಸಮುದ್ರದಲ್ಲಿ ತೈಲ ಸೋರಿಕೆಯನ್ನು ನಿಯಂತ್ರಣಕ್ಕೆ ತರುವ ಸಾನವನ್ನೂ ಇದರಲ್ಲಿ ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
MG Motor: ನೂತನ ಇವಿ ಕಾರು ಸಿಯುವಿ ಝಿಎಸ್ ವಿಂಡ್ಸರ್ ಮಾರುಕಟ್ಟೆಗೆ
Ranveer Allahbadia: ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬ್ ಖಾತೆ ಹ್ಯಾಕ್
Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.