ಅಭಿವೃದ್ಧಿ ಕಾಣದ ಅಶೋಕನ ಕುರುಹು; ಕುರಿದೊಡ್ಡಿಯಾದ ಸನ್ನತಿಬೌದ್ಧ ಶಿಲಾಶಾಸನ ತಾಣ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೌದ್ಧ ಪರಂಪರೆಯ ನಾಶಕ್ಕೆ ಮುನ್ನುಡಿ ಬರೆದಿವೆ

Team Udayavani, Sep 2, 2021, 6:01 PM IST

ಅಭಿವೃದ್ಧಿ ಕಾಣದ ಅಶೋಕನ ಕುರುಹು

ವಾಡಿ: 1994ರಿಂದ 2004ರ ವರೆಗೆ ಚಿತ್ತಾಪುರ ತಾಲೂಕಿನ ಸನ್ನತಿ ಪ್ರದೇಶದ ಕನಗನಹಳ್ಳಿಯಲ್ಲಿಭಾರತೀಯ ಸರ್ವೇಕ್ಷಣಾ ಇಲಾಖೆ ಕೈಗೊಂಡ ಉತVನನದಲ್ಲಿ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್‌ ಅಶೋಕನ ಕಾಲಘಟ್ಟದ ಬೌದ್ಧ ಪರಂಪರೆಯ ಶಿಲಾ ಶಾಸನ ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದು, ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಈ ಐತಿಹಾಸಿಕ ತಾಣವೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.

ಕಳೆದ ಎರಡು ದಶಕಗಳ ಹಿಂದೆ ಬೆಳಕಿಗೆ ಬಂದ ಬೌದ್ಧ ಮಹಾಸ್ತೂಪ ಸಮುಚ್ಚಯದ ಅವಶೇಷಗಳು,ಪ್ರಗತಿಯಹಿನ್ನಡೆಯಿಂದಾಗಿ ನೆಲದಡಿ ಹರಡಿಕೊಂಡು ಪುನಃ ಮಣ್ಣಿಗೆ ಸೇರಿಕೊಳ್ಳುತ್ತಿವೆ. ಇಲ್ಲಿ ದೊರೆತ ಬೃಹತ್‌ ಬೌದ್ಧ ಸ್ತೂಪವು 22ಮೀ. ವಿಸ್ತೀರ್ಣ ಮತ್ತು 17ಮೀ. ಎತ್ತರವಾಗಿತ್ತು ಎನ್ನಲಾಗಿದೆ.

ಮೌರ್ಯರ ಆರಂಭ ಹಾಗೂ ಶಾತವಾಹನರ ಅಂತ್ಯದ ಕಾಲಘಟ್ಟದಲ್ಲಿ ಮೂರು ಹಂತದಲ್ಲಿ ಸ್ತೂಪ ನಿರ್ಮಾಣವಾಗಿದೆ. ಅದೀಗ ಸಂಪೂರ್ಣ ನೆಲಸಮದ ರೀತಿಯಲ್ಲಿ ಪತ್ತೆಯಾಗಿದ್ದು, ಸಾವಿರಾರು ಶಿಲೆಗಳು ಮತ್ತು ಬುದ್ಧನ ಮೂರ್ತಿಗಳು ಉತ್ಖನನದ ವೇಳೆ ಪ್ರಾಚ್ಯವಸ್ತು ಇಲಾಖೆ ಕೈಸೇರಿವೆ. ಹೀಗೆ ಬೆಳಕಿಗೆ ಬಂದ ಐತಿಹಾಸಿಕ ಬೌದ್ಧ ಕುರುಹುಗಳನ್ನು ರಕ್ಷಣೆ ಮಾಡಲಾಗದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೌದ್ಧ ಪರಂಪರೆಯ ನಾಶಕ್ಕೆ ಮುನ್ನುಡಿ ಬರೆದಿವೆ ಎಂಬುದು ಅಂಬೇಡ್ಕರ್‌ವಾದಿಗಳ ಆರೋಪವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಉಪನ್ಯಾಸಕರು, ಸಂಶೋಧಕರು, ಪದವಿ ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ, ಸನ್ನತಿ ಬೌದ್ಧ ತಾಣ ವೀಕ್ಷಿಸಿ ಅಧ್ಯಯನ ಮಾಡುತ್ತಾರೆ. ವಿದೇಶಗಳಿಂದಲೂ ಪ್ರವಾಸಿ ಗರು ಬಂದು ಹೋಗುತ್ತಾರೆ. ಭೀಮಾ ನದಿ ದಂಡೆಯಲ್ಲಿರುವ ಈ ಬೌದ್ಧ ನೆಲೆ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ದುರಂತವೆಂದರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಇದರ ಅಭಿವೃದ್ಧಿ ಕೈಗೊಳ್ಳುವುದನ್ನೇ ಮರೆತಿದೆ. ಶಿಲಾ ಶಾಸನಗಳು ಬೆಳಕಿಗೆ ಬಂದು 26 ವರ್ಷಗಳೇ ಉರುಳಿದರೂ ಬುದ್ಧನ ಮೂರ್ತಿಗಳಿಗೆ ಸುರಕ್ಷಿತ ಗೌರವ ದೊರೆತಿಲ್ಲ. ಭದ್ರತಾ ಸಿಬ್ಬಂದಿ ನೇಮಿಸಲಾಗಿದ್ದರೂ ಕುರಿಗಳು ಮತ್ತು ದನ ಕರುಗಳು ಪ್ರವೇಶಿಸಿ ಬೌದ್ಧ ಕುರುಹುಗಳನ್ನು ತುಳಿದು ಹಾಕುತ್ತಿವೆ. ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಅದೆಷ್ಟೋ ಶಿಲೆಗಳು ಕಾಣೆಯಾಗಿವೆ.

ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ, ಉದ್ಯಾನವನ, ಉಪಹಾರ ತಾಣಗಳಂತಹ ಸೌಲಭ್ಯಗಳು ಇಲ್ಲಿ ಕಾಣುವುದಿಲ್ಲ. ಪ್ರವಾಸೋದ್ಯಮ ಇಲಾಖೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನೂ ಒದಗಿಸಿಲ್ಲ. ಸನ್ನತಿಬೌದ್ಧ ಸ್ತೂಪ ತಾಣವೀಗ ಅಕ್ಷರಶಃ ಕುರಿ ದೊಡ್ಡಿಯಾಗಿ ಪರಿವರ್ತನೆ ಆಗಿರುವುದು ಮಾತ್ರ ವಿಪರ್ಯಾಸದ ಸಂಗತಿ.

ಸನ್ನತಿಯಲ್ಲಿ ದೊರೆತಿರುವ ಕ್ರಿ.ಪೂ. 3ನೇ ಶತಮಾನದ ಬೌದ್ಧ ಸಮುಚ್ಚಯ ಅವಶೇಷಗಳು, ನಾಗಾ ಜನಾಂಗದ ಮೂಲ ನಿವಾಸಿಗಳಾದ ದಲಿತರ ಸ್ವಾಭಿಮಾನ ಹೆಚ್ಚಿಸಿವೆ. ಸುರಕ್ಷತೆ ಕಾಪಾಡಬೇಕಾದ ಕೇಂದ್ರ ಸರ್ಕಾರ ಸುದೀರ್ಘ‌ ಬೇವಾಬ್ದಾರಿ ವಹಿಸಿದೆ. ದನ, ಕರು ,ಕುರಿಗಳು ಶಿಲೆಗಳ ಮೇಲೆ ಓಡಾಡಿಹುಲ್ಲು ಮೇಯುತ್ತಿವೆ. ಶಿಲೆಗಳು ಮತ್ತು ಶಾಸನಗಳು ಮುರಿಯುತ್ತಿವೆ. ಈಗಾಗಲೇ ಬಹುತೇಕ ಶಿಲಾಕಲೆಗಳು, ವಿವಿಧ ಮೂರ್ತಿಗಳುಕಣ್ಮರೆಯಾಗಿವೆ. ಭದ್ರತೆ ಎನ್ನುವುದು ಇಲ್ಲಿ ನಾಮಕೇವಾಸ್ತೆ ಎಂಬಂತಾಗಿದೆ. ಸರ್ಕಾರಕಿಂಚಿತ್ತೂ ಅಭಿವೃದ್ಧಿ ಮಾಡಿಲ್ಲ. ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಇದು ದಲಿತರ ಸ್ವಾಭಿಮಾನಕೆರಳಿಸಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಹೋರಾಟ ರೂಪಿಸಲಾಗುವುದು.
ಸಂದೀಪ ಎಸ್‌. ಕಟ್ಟಿ, ಬೌದ್ಧ ಅನುಯಾಯಿ

*ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.