![1-lok-sabha](https://www.udayavani.com/wp-content/uploads/2024/12/1-lok-sabha-415x241.jpg)
ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಂದುಬೆಟ್ಟು ಮುಖ್ಯ ರಸ್ತೆ ಮಧ್ಯೆಯ ಹೊಂಡ!
ವಾಹನ ಸಂಚಾರಕ್ಕೆ ಅಡ್ಡಿ; ಸೂಕ್ತ ಸ್ಪಂದನೆಗೆ ಸಾರ್ವಜನಿಕರಿಂದ ಆಗ್ರಹ
Team Udayavani, Sep 4, 2021, 5:46 AM IST
![ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಂದುಬೆಟ್ಟು ಮುಖ್ಯ ರಸ್ತೆ ಮಧ್ಯೆಯ ಹೊಂಡ!](https://www.udayavani.com/wp-content/uploads/2021/09/ADI-UDUPI-620x465.jpg)
ಮಲ್ಪೆ: ಆದಿವುಡುಪಿ-ಮಲ್ಪೆ ಮುಖ್ಯರಸ್ತೆಯ ಪಂದುಬೆಟ್ಟು ಬಳಿ ರಸ್ತೆ ಮಧ್ಯೆ ಭಾರಿ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ರಸ್ತೆ ಮಧ್ಯೆ ಸುಮಾರು 5 ಅಡಿಗಳಷ್ಟು ವಿಸ್ತಾರದಲ್ಲಿ ಹೊಂಡವಾಗಿದ್ದು, ದ್ವಿಚಕ್ರ ಸವಾರರು ಸೇರಿದಂತೆ ವಾಹನ ಸಾವರರಿಗೆ ಅಪಾಯ ಎದುರಾಗಲಿದೆ.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಪ್ರಮುಖವಾಗಿ ಮೀನುಗಾರಿಕೆ ಬಂದರು ಮಲ್ಪೆಗೆ ಹೊಂದಿಕೊಂಡಿರುವ ರಸ್ತೆಯಾದ್ದರಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತದೆ.
ಈ ರಸ್ತೆಯಲ್ಲಿರುವ ಗುಂಡಿಯ ಪಕ್ಕದಲ್ಲಿಯೇ ವಾಹನ ಸವಾರರು ಗುಂಡಿ ತಪ್ಪಿಸಲು ಒಮ್ಮೆಲೆ ಬದಿಗೆ ಸರಿದಾಗ ಎದುರು ಅಥವಾ ಹಿಂದಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆದು ಅನಾಹುತಗಳನ್ನು ತಂದುಕೊಳ್ಳುವ ಪ್ರಮೇಯಗಳು ಸಾಕಷ್ಟು ಬಾರಿ ನಡೆದಿದೆ. ಈ ಹಿಂದೆ ಸ್ಥಳೀಯರು ಒಂದೆರಡು ಸಲ ಸಿಮೆಂಟ್ ಮಿಶ್ರಿತ ಜಲ್ಲಿಹಾಕಿ ಹೊಂಡ ಮುಚ್ಚುವ ಕೆಲಸವನ್ನು ಮಾಡಿದ್ದರೂ ಮತ್ತೆ ಅದು ಯಥಾಸ್ಥಿಗೆ ತಲುಪಿದೆ.
ಇದನ್ನೂ ಓದಿ:ಮಲ್ಪೆ-ತೊಟ್ಟಂ: ಕೈರಂಪಣಿ ಬಲೆಗೆ ಬಿತ್ತು ರಾಶಿ ರಾಶಿ ಪಾಂಪ್ರಟ್ ಮೀನು!
ಇಂತಹದೇ ಮತ್ತೊಂದು ಹೊಂಡ ಪಂದುಬೆಟ್ಟು ವಿಲೇಜ್ ಇನ್ ಬಾರ್ ಸಮೀಪವೂ ನಿರ್ಮಾಣಗೊಂಡಿದೆ.
ಮಳೆಗಾಲವಾದ್ದರಿಂದ ಈ ಹೊಂಡದಲ್ಲಿ ನೀರು ನಿಂತು ದ್ವಿಚಕ್ರ ಸವಾರರು ಹೊಂಡದ ಅರಿವಿಲ್ಲದೆ ತೆರಳುವುದರಿಂದ ಬೈಕಿನೊಂದಿಗೆ ಹೊಂಡಕ್ಕೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ದಿನಂಪ್ರತಿ ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ ಹೆದ್ದಾರಿ ಇಲಾಖೆಯಾಗಲಿ, ಸ್ಥಳೀಯಾಡಳಿತವಾಗಿಲಿ ಸುಮ್ಮನಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಟಾಪ್ ನ್ಯೂಸ್
![1-lok-sabha](https://www.udayavani.com/wp-content/uploads/2024/12/1-lok-sabha-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![rape](https://www.udayavani.com/wp-content/uploads/2024/12/rape-1-150x100.jpg)
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
![1-lok-sabha](https://www.udayavani.com/wp-content/uploads/2024/12/1-lok-sabha-150x87.jpg)
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
![CT Ravi](https://www.udayavani.com/wp-content/uploads/2024/12/CT-Ravi-1-150x97.jpg)
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
![Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು](https://www.udayavani.com/wp-content/uploads/2024/12/10-23-150x90.jpg)
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
![dhankar (2)](https://www.udayavani.com/wp-content/uploads/2024/12/dhankar-2-1-150x91.jpg)
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.