ವೈಜ್ಞಾನಿಕ  ಹಂಪ್ಸ್‌ ನಿರ್ಮಿಸುವಂತೆ ಸ್ಥಳೀಯರ ಮನವಿ 


Team Udayavani, Sep 6, 2021, 3:10 AM IST

ವೈಜ್ಞಾನಿಕ  ಹಂಪ್ಸ್‌ ನಿರ್ಮಿಸುವಂತೆ ಸ್ಥಳೀಯರ ಮನವಿ 

ಅಜೆಕಾರು: ಕಾರ್ಕಳ ಹೆಬ್ರಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಜೆಕಾರಿನಲ್ಲಿ ಅವೈಜ್ಞಾನಿಕವಾಗಿ  ಹಂಪ್ಸ್‌ಗಳನ್ನು ಹಾಕಿರುವುದರಿಂದ ಸ್ಥಳೀಯರಿಗೆ ಸಂಕಷ್ಟ ಎದುರಾಗಿದೆ.

ಚಿಕ್ಕ ಚಿಕ್ಕ ಹಂಪ್ಸ್‌ ಹಾಕಿರುವುದರಿಂದ ಬೃಹತ್‌ ವಾಹನಗಳು ಇದರ ಮೇಲೆ ವೇಗ ಕಡಿಮೆ ಮಾಡದೆ ಚಲಾಯಿಸುತ್ತಿದ್ದು ಸ್ಥಳೀಯ ಪ್ರದೇಶ ನಿರಂತರ ಕಂಪನ ಗೊಳ್ಳುತ್ತಿದೆ.

ಪ್ರತೀ ದಿನ ನೂರಾರು ವಾಹನಗಳು ಅಜೆಕಾರಿನ ಮುಖ್ಯ ಜಂಕ್ಷನ್‌ ಮೂಲಕ ಸಂಚಾರ ಮಾಡುವುದರಿಂದ ಸ್ಪೀಡ್‌ ಬ್ರೇಕರ್‌ ಅಗತ್ಯ. ಆದರೆ ಈಗ ಇರುವ ಸ್ಪೀಡ್‌ ಬ್ರೇಕರ್‌ (ಹಂಪ್ಸ್‌)ನಿಂದ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾರ್ಕಳ, ಹೆಬ್ರಿಯ ಎರಡೂ ಬದಿಯಲ್ಲಿಯೂ ರಸ್ತೆಯಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಹಂಪ್ಸ್‌ ಗಳಿಂದ ಅಪಘಾತಗಳು ಪ್ರತಿನಿತ್ಯ ನಡೆಯುವಂತಾಗಿದೆ.

ರಾತ್ರಿ ವೇಳೆಯಲ್ಲಿ ಬೃಹತ್‌ ಟ್ರಕ್‌ಗಳು, ಕಂಟೇನರ್‌ಗಳು, ಟಿಪ್ಪರ್‌ಗಳು ವೇಗ ಕಡಿಮೆ ಮಾಡದೆ ಈ ಹಂಪ್ಸ್‌ಗಳ ಮೇಲೆ ಸಂಚಾರ ಮಾಡುವುದರಿಂದ ಪೇಟೆಯ ಸುತ್ತಲಿನ ಪರಿಸರದಲ್ಲಿ ಕಂಪನ ಸೃಷ್ಟಿಯಾಗಿ ಹಳೆಯ ಕಟ್ಟಡಗಳು ಬಿರುಕು ಬಿಟ್ಟಿವೆ. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ,  ಹಿರಿಯ ನಾಗರಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪೇಟೆ ನಿವಾಸಿಗಳಿಗೆ ನಿದ್ರೆ ಮಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೆಲವೊಂದು ಕಂಟೈನರ್‌ಗಳು ರಾತ್ರಿ ವೇಳೆ ಸಂಚಾರ ಮಾಡುವಾಗ ಮನೆಯೊಳಗಿನ ಪಾತ್ರೆಗಳು ಕಂಪಿಸಿ ನೆಲಕ್ಕುರುಳುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ. ಈಗಾಗಲೇ ಕಾರ್ಕಳ ಲೋಕೋಪಯೋಗಿ ಇಲಾಖೆ ಮನವಿ ಮಾಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೃಹತ್‌ ಗಾತ್ರದ ಹಂಪ್ಸ್‌ ನಿರ್ಮಾಣ ಮಾಡಿದಾಗ ಮಾತ್ರ ವಾಹನಗಳು ವೇಗ ಕಡಿಮೆ ಮಾಡಿ ಸಂಚಾರ ನಡೆಸುತ್ತವೆ. ಆದರಿಂದ ಈ ಎರಡೂ ಭಾಗದಲ್ಲಿ ಬೃಹತ್‌ ಗಾತ್ರದ ಹಂಪ್ಸ್‌ ನಿರ್ಮಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ಹಂಪ್ಸ್‌ ನಿರ್ಮಾಣದಿಂದ ಸ್ಥಳೀಯರಿಗೆ ಸಂಕಷ್ಟ ಒಂದೆಡೆಯಾದರೆ, ವಾಹನ ಅಪಘಾತಗಳು ನಿರಂತರ ನಡೆದು ವಾಹನ ಚಾಲಕರಿಗೂ ಸಮಸ್ಯೆ ಉಂಟಾಗುತ್ತಿದೆ. ಈ ಹಂಪ್ಸ್‌ ತೆರವುಗೊಳಿಸಿ ವೈಜ್ಞಾನಿಕ  ಹಂಪ್ಸ್‌ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯಬೇಕಿದೆ ಎಂದು ಸ್ಥಳೀಯರಾದ ಅರವಿಂದ ನಾಯಕ್‌ ಅಜೆಕಾರು ತಿಳಿಸಿದ್ದಾರೆ.

ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಅಜೆಕಾರು ಪೇಟೆಯಲ್ಲಿರುವ ಹಂಪ್ಸ್‌ನಿಂದ ಸಮಸ್ಯೆಯಾಗುವ ಕುರಿತು ಪಂಚಾಯತ್‌ ಆಡಳಿತ  ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.ಜ್ಯೋತಿ ಪೂಜಾರಿ,  ಅಧ್ಯಕ್ಷರು, ಮರ್ಣೆ ಗ್ರಾ.ಪಂ.

ಅಜೆಕಾರು ಪೇಟೆಯ ಹಂಪ್ಸ್‌ನಿಂದ ಸಮಸ್ಯೆಯಾಗುವ ಬಗ್ಗೆ ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಈ ಭಾಗದಲ್ಲಿ ಕಾಮಗಾರಿ ನಡೆಸುವ ಸಂದರ್ಭ  ವೈಜ್ಞಾನಿಕ  ರೀತಿಯ ಹಂಪ್ಸ್‌ ನಿರ್ಮಾಣ ಮಾಡಲಾಗುವುದು.ಲಾಯ್ಡ, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕಾರ್ಕಳ

 

-ಜಗದೀಶ್‌ ಅಂಡಾರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.