ಮನೆ, ಜಮೀನು ಸ್ವಾಧೀನ ತೆರವು
Team Udayavani, Sep 15, 2021, 4:16 PM IST
ಗುಡಿಬಂಡೆ: ಹೈಕೋರ್ಟ್ ಆದೇಶದಂತೆ ಹತ್ತಾರು ವರ್ಷಗಳಿಂದ ಗುಂಡ್ಲಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ವಸತಿ ಕಟ್ಟಡ, ಜಮೀನು ಸ್ವಾಧೀನವನ್ನು ಉಪವಿಭಾಗಾ ಕಾರಿ ರಘುನಂದನ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ತಾಲೂಕು ಎಲ್ಲೋಡು ಗ್ರಾಪಂಗೆ ಸೇರಿದ ಗುಂಡ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 203ರಲ್ಲಿನ 1 ಎಕರೆ ಜಮೀನು ತೆರವು ಮಾಡಿ ಸ್ವಾಧೀನ ದಾರರಿಗೆ ನೀಡಬೇಕು ಎಂದು ಹೈಕೋರ್ಟ್ ಎಸಿಗೆ ಸೂಚಿಸಿತ್ತು. ಅದರಂತೆ ವಸತಿ ಮನೆಗಳು ನಿರ್ಮಾಣ ಮಾಡಿಕೊಂಡಿದ್ದ ನಾಲ್ವರಿಗೆ ಮತ್ತು ಉಳಿಕೆ ಜಮೀನಿನ ಹಾಲಿ ಸ್ವಾಧೀನದಾರರಿಗೆ ನೋಟಿಸ್ ನೀಡಲಾಗಿತ್ತು. ಆದರೂ, ತೆರವು ಮಾಡಿರಲಿಲ್ಲ. ಹೀಗಾಗಿ ತಹಶೀಲ್ದಾರ್ ಸಿಗ್ಬತುಲ್ಲಾ, ಸಿಪಿಐ ಲಿಂಗರಾಜು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮನೆ ತೆರವುಗೊಳಿಸುವಂತೆ 4 ದಿನ ಕಾಲಾವಕಾಶ ಕೊಟ್ಟಿದ್ದರು. ಆದರೂ, ತೆರವು ಗೊಳಿಸದ ಕಾರಣ ಮಂಗಳವಾರ ಚಿಕ್ಕಬಳ್ಳಾಪುರ ಎಸಿ ರಘುನಂದನ್ ನೇತೃತ್ವದಲ್ಲಿ, ಪೊಲೀಸ್ ರಕ್ಷಣೆಯಲ್ಲಿ ವಾಸವಿದ್ದ ನಾಲ್ಕು ಮನೆ ಹೊರತು ಪಡಿಸಿ 0-34 ಗುಂಟೆ ಜಮೀನು ಸ್ವತ್ತಿನ ಸ್ವಾಧೀನ ತೆರವುಗೊಳಿಸಿದರು.
ಇದನ್ನೂ ಓದಿ:ಶಿಕ್ಷಣವಿಲ್ಲದೇ ಕಾಡಿನಲ್ಲಿ ಅಲೆಯುತ್ತಿದ್ದ ಹಾಡಿ ಮಕ್ಕಳ ಮನೆ ಬಾಗಿಲಿಗೇ ಬಂತು ಶಾಲೆ!
ಗುಂಡ್ಲಹಳ್ಳಿ ಗ್ರಾಮದ ವೆಂಕಟಶಿವಪ್ಪ ಹಾಗೂ ಅವರ ಮಗ ಸಂತೋಷ ದರಕಾಸ್ತ್ನಲ್ಲಿ ಮಂ ಜೂರಾಗಿದ್ದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದು, ಹಾಲಿ ಸ್ವಾ ಧೀನ ಇರುವವರನ್ನು ತೆರವು ಮಾಡಿಸಲು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ
ಮಾತನಾಡಿದ ಎಸಿ, ಹೈಕೋರ್ಟ್ ಆದೇಶದಂತೆ ಮನೆ ನಿರ್ಮಾಣ ಮಾಡಿಕೊಂಡಿ ರುವ ನಾಲ್ವರಿಗೆ ಮತ್ತು ಜಮೀನು ಸ್ವಾ ಧೀನದಾರರಿಗೆ ನೋಟಿಸ್ ನೀಡಲಾಗಿದ್ದರೂ, ಅವರು ತೆರವು ಗೊಳಿಸಿದ ಕಾರಣ, ಖುದ್ದು ತೆರವು ಮಾಡಲಾಗಿದೆ. ಹಾಲಿ ವಾಸ ಇರುವ ಮನೆಯವರು ತೆರವು ಮಾಡಲು ಕಾಲಾವಕಾಶ ಕೋರಿದ್ದರಿಂದ ಮಾನವೀಯ ದೃಷ್ಟಿಯಿಂದ ಅಂಗೀಕರಿಸಿ, ಈ ಮನವಿಗಳನ್ನು ಹೈಕೋರ್ಟ್ಗೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗಿದೆ.
ಮನೆ ಹೊರತು ಪಡಿಸಿ, ಉಳಿಕೆ ಜಮೀನನ್ನು ವೆಂಕಟಶಿವಪ್ಪಗೆ ವರ್ಗಾಯಿಸಲಾಗುವುದು ಎಂದರು. ಡಿವೈಎಸ್ಪಿ ವಾಸುದೇವ್, ತಹಶೀಲ್ದಾರ್ ಸಿಗ್ಬತುಲ್ಲಾ, ವೃತ್ತ ನಿರೀಕ್ಷಕ ಲಿಂಗರಾಜು, ರಾಜಸ್ವ ನಿರೀಕ್ಷಕ ಅಮರನಾರಾಯಣ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್ ಗುಂಡೂರಾವ್
Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…
Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ
Chikkaballapur: ಸ್ವಂತ ಕಟ್ಟಡ ಇಲ್ಲದೇ ಶಿಕ್ಷಣ ತರಬೇತಿಗೆ ಡಯಟ್ ಪರದಾಟ!
Chikkaballapura; ಎಸ್ಎಫ್ ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.