ಮೃತ್ಯುಕೂಪದಂತೆ ಬಾಯ್ತೆರೆದಿರುವ ಕೊಳವೆ ಬಾವಿ

ಶಾಲಾ ಮಕ್ಕಳು ಹೋಗುವ ಹಾದಿಯಲ್ಲೇ ಮೃತ್ಯುಬಾವಿ; ಅನಾಹುತ ತಡೆಗೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಿ

Team Udayavani, Sep 16, 2021, 4:30 PM IST

ಮೃತ್ಯುಕೂಪದಂತೆ ಬಾಯ್ತೆರೆದಿರುವ ಕೊಳವೆ ಬಾವಿ

ಕುದೂರು: ಬಾಯ್ತೆರೆದಿರುವ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನವಿದ್ದರೂ ಅಂಥ ಬಾವಿಗಳು ಅಲ್ಲಲ್ಲಿ ಕಾಣುತ್ತಿವೆ. ಕುದೂರು ಹೋಬಳಿಯ ಅರಿಶಿನಕುಂಟೆ ಗ್ರಾಮದ ರಸ್ತೆಯ ಬದಿಯಲ್ಲಿ ವಿಫಲವಾಗಿರುವ ಕೊಳವೆಬಾವಿ ಮೃತ್ಯುಬಾವಿಯಂತೆ ಕಾದು ಕುಳಿತಿದೆ.

ಅರಿಶಿನಕುಂಟೆಯಿಂದ ವೀರಾಪುರ ಮಾರ್ಗಕ್ಕೆ ಹೋಗುವ ವೃತ್ತದ ಎಡಬದಿಯಲ್ಲಿರುವ ಇಂಥ ಬಾವಿ ಇದ್ದು, ಸಂಬಂಧಿಸಿದವರು ಇತ್ತ ಕಡೆ ಗಮನ
ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸುಮಾರು ವರ್ಷಗಳ ಹಿಂದೆ ಈ ಕೊಳವೆ ಬಾವಿ ಕೊರೆಸಿದ್ದು ಈವರೆಗೂ ಅದಕ್ಕೆ ಸೂಕ್ತ ಮುಚ್ಚಳಿಕೆ ಅಳವಡಿಸಿದೇ ಬೇಜವಾಬ್ದಾರಿತನ ತೋರಿದ್ದಾರೆ.

ತೆರೆದ ಕೊಳವೆ ಬಾವಿ ಪೈಪ್‌: ಅರಿಶಿನಕುಂಟೆ ಗ್ರಾಮದ ರಸ್ತೆಯ ಪಕ್ಕದಲ್ಲಿ ಕೊಳವೆ ಬಾವಿ ತೆರದಿದ್ದು, ವಿಫಲರಾಗಿರುವ ಹಿನ್ನೆಲೆ ಕೇಸಿಂಗ್‌
ಪೈಪ್‌ ಬಾಯೆ¤ರೆದು ನಿಂತಿದೆ. ಇದೇ ರಸ್ತೆಯಲ್ಲಿ ಶಾಲೆಯಿದ್ದು ಪ್ರತಿ ನಿತ್ಯ ವಿದ್ಯಾರ್ಥಿಗಳು ಕೊಳವೆ ಬಾವಿ ಪಕ್ಕದಲ್ಲೇ ಹಾದುಹೋಗುತ್ತಾರೆ. ಆಕಸ್ಮಾತ್‌ ಚಿಕ್ಕಮಕ್ಕಳು ಬಗ್ಗಿ ನೋಡಲು ಹೋಗಿ ಏನಾದರೂ ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಎಂಬ ಪ್ರಶ್ನೆ ತಲೆದೂರಿದೆ.

ತೆರವುಗೊಳಿಸಿ: ರಸ್ತೆಯ ಬದಿಯಲ್ಲೇ ಬಾಯ್ತೆರೆದಿರುವ ಕೊಳವೆ ಬಾವಿ ಕೇಸಿಂಗ್‌ ಪೈಪ್‌ಗೆ ಸಂಬಂಧ ಪಟ್ಟವರು ಮುಚ್ಚಳ ಹಾಕುವುದನ್ನು
ಮರೆತಿದ್ದಾರೆ. ಗ್ರಾಪಂ ಈ ಕೇಸಿಂಗ್‌ ಪೈಪ್‌ ಮುಚ್ಚುವ ಕೆಲಸಕ್ಕೂ ಮುಂದಾಗಿಲ್ಲ. ರಾತ್ರಿ ವೇಳೆ ಪಾದಾಚಾರಿಗಳು ಎಡವಿಬಿದ್ದಿರುವ ನಿದರ್ಶನ ಗಳು ಇವೆ. ಇಂತಹ ಪರಿಸ್ಥಿತಿ ಇರುವ ಈ ಕೇಸಿಂಗ್‌ ಪೈಪ ಮುಚ್ಚುವ ಗೋಜಿಗೆ ಮುಂದಾಗದಿರುವುದು ಜನರ ಅತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಗುಜರಾತ್: 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಹಲವರಿಗೆ ಕೊಕ್

ಅವಘಡ: ಈಗಾಗಲೇ ರಾಜ್ಯದಲ್ಲಿ ಹಲವಾರು ಕಡೆ ಇಂತಹ ಅನೇಕ ಕೊರೆಸಿದ ಕೊಳವೆ ಬಾವಿಗಳಲ್ಲಿ ಬಿದ್ದು ಅದೆಷ್ಟೋ ಮಕ್ಕಳು ಪ್ರಾಣ ತೆತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಕೂಡ ಕೋಟಿ ಗಟ್ಟಲೆ ಹಣ ವ್ಯಯಿಸಿದರೂ ಮಕ್ಕಳನ್ನು ಬದುಕಿಸಿಕೊಳ್ಳಲಾಗಿಲ್ಲ. ಮಾದಿಗೊಂಡನಹಳ್ಳಿ ಗ್ರಾಪಂ ಅಧಿಕಾರಿಗಳು ಬಾಯ್ತೆರೆದಿರುವ ಕೊಳವೆ ಬಾವಿ ಕೇಸಿಂಗ್‌ ಪೈಪ್‌ ಮುಚ್ಚುವ ಮೂಲಕ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕಿದೆ.

ಬಲಿಗೆ ಕಾದಿವೆ ತೆರೆದ ಕೊಳವೆ ಬಾವಿ:
ಜಿಲ್ಲೆಯಾದ್ಯಂತ ಬಲಿ ಪಡೆಯಲೆಂದೇ ಅಲ್ಲಲ್ಲಿ ಕೊಳವೆ ಬಾವಿಗಳು ಬಾಯಿ ತೆರದು ಕುಳಿತಿವೆ. ಸರ್ಕಾರವೇ ಕೊರೆಸಿದ ಬೋರ ವೆಲ್‌ಗ‌ಳೇ
ಬಾಯ್ತೆರೆದು ಕುಳಿತಿವೆ ಎಂದರೆ ಇಲ್ಲಿನ ಆಡಳಿತ ಪರಿಸ್ಥಿತಿ ಹೇಗಿರಬೇಡ ? ಕೊಳವೆಬಾವಿಗೆ ಮಕ್ಕಳು ಬಿದ್ದು ಸುದ್ದಿಯಾದಾಗ ಜಿಲ್ಲಾಡಳಿತ ಸುತ್ತೂಲೆ ಹೊರಡಿಸಿ ಮೈಮರೆಯುತ್ತದೆ. ಅನೇಕ ಕೊಳವೆ ಬಾವಿ ಇಂದಿಗೂ ಮುಚ್ಚಿಲ್ಲ. ಜಿಲ್ಲಾಡಳಿತ, ಜಿ.ಪಂ ಸುತ್ತೂಲೆ ಹೊರಡಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸುತ್ತದೆ. ಇದರ ಪ್ರತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ತಮ್ಮ ಕೆಲಸವಾಯಿತೆಂದು ಭಾವಿಸುತ್ತದೆ. ತೆರೆ‌ದ ಕೊಳವೆ ಬಾವಿ ಮುಚ್ಚಿಸುವಂತೆ ಸೂಚಿಸುವ ಕನಿಷ್ಠ ಪ್ರಯತ್ನ ಮಾಡುತ್ತಿಲ್ಲ

ಅರಿಶಿನಕುಂಟೆ ಗ್ರಾಮದಲ್ಲಿ ವಿಫಲರಾಗಿರುವ ಕೊಳವೆ ಬಾಯಿಕೇ ಸಿಂಗ್‌ ಪೈಪ್‌ ಬಾಯ್ತರೆದಿದ್ದು ಅದನ್ನು ಮುಚ್ಚುವ ಗೋಜಿಗೆ ಗ್ರಾಪಂ ಮುಂದಾಗಿಲ್ಲ. ರಾತ್ರಿ ವೇಳೆಕತ್ತಲು ಅವರಿಸುತ್ತದೆ. ಅದೆಷ್ಟೋ ಮಂದಿ ಪಾದಚಾರಿಗಳು ಎಡವಿ ಬಿದ್ದಿರುವ ಘಟನೆ ನೆಡೆದಿದೆ. ಗ್ರಾಪಂ ಆಡಳಿತಕೂಡಲೇ ಬಾಯ್ತರೆದಕೊಳವೆ ಬಾವಿ ಮುಚ್ಚಬೇಕಿದೆ.
-ವೀರಭದ್ರಪ್ಪ, ಅರಿಶಿನಕುಂಟೆ ಗ್ರಾಮಸ್ಥ

-ಕೆ.ಎಸ್‌.ಮಂಜುನಾಥ್‌, ಕುದೂರು

 

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cmNandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramnagar: ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ಎಸ್‌ಟಿಆರ್‌ಆರ್‌ ರಸ್ತೆ

Ramnagar: ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ಎಸ್‌ಟಿಆರ್‌ಆರ್‌ ರಸ್ತೆ

Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ

Ramanagar: ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಬಿಜೆಪಿಗನಿಂದ ಲೈಂಗಿಕ ಕಿರುಕುಳ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.