ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’


Team Udayavani, Sep 19, 2021, 3:14 PM IST

hyuty6t

ಸಂವೇದನೆಯೊಂದಿಗಿನ ಅದ್ಭುತ ಕಲೆಯನ್ನು ಗೀರ್ವಾಣಿಯ ಕೃಪಾಕಟಾಕ್ಷದೊಂದಿಗೆ ನುಡಿಸುತ ತನ್ಮಯತೆಯ   ಅನಾವರಣಗೊಳಿಸುವ ಕಲೆಯನ್ನು ನಮ್ಮ ಹಿರಿಯರು ಆಸ್ತಿಯನ್ನಾಗಿ ಅನೇಕ ಯುವ ಪೀಳಿಗೆಯ ಕೋಗಿಲೆಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ಸರಸ್ವತಿಯ ರೂಪ, ಎಲ್ಲರಿಗೂ ಅಷ್ಟು ಬೇಗ  ಒಲಿಯುವಂತದಲ್ಲ ನಿಷ್ಠೆ ಶ್ರದ್ದೆಯಿಂದ ಪದಗಳ  ರುಚಿಯನ್ನು ಅನುಭವಿಸಿಕೊಂಡು ಹಾಡುವ ಹಾಡು ಮನದ ಕದವನ್ನು ತಟ್ಟುತ್ತದೆ.

ಸಂಗೀತವೆಂದರೆ ಜಾತಿ, ಮತಗಳೆಂಬ ಬೇಧ-ಭಾವವಿಲ್ಲದ ಕಲೆ. ಮನಸ್ಸಿನ ಸಂಕಟ ಬೇಸರಗಳ ನಿವಾರಿಸಲು ಕಿವಿಯೊಳಗೆ ಇಳಿದು ನರನಾಡಿಗಳಲ್ಲಿ ಪ್ರವಹಿಸಿ ಚೈತನ್ಯ ತುಂಬುವ ಪ್ರಕಿಯೆ ಸಂಗೀತ.ಇಂತಹ ಅದ್ಭುತ ಕಲಾ ಸರಸ್ವತಿಯನ್ನು ವರಿಸಿಕೊಳ್ಳುವ ಮೂಲಕ ಸಂಗೀತ ಪ್ರಿಯರನ್ನು ರಾಂಜಿಸುತ್ತಿರುವ ಅನೇಕರಲ್ಲಿ ಉಜ್ವಲ ಆಚಾರ್ ಎಂ ಸಹ ಒಬ್ಬರು.

ಇವರು ಮೂಲತಃ  ಬಂಟ್ವಾಳ ತಾಲೂಕಿನ ಮಂಕುಡೆ ಗ್ರಾಮದವರು.ಶ್ರೀನಿವಾಸ್ ಆಚಾರ್ ಮತ್ತು ಮಮತಾ ಆಚಾರ್ ದಂಪತಿಯ ಪುತ್ರಿ. ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವ ಇವರು ಮನದ ವೇದನೆಗೆ ಗೆಜ್ಜೆಯ ಆರೈಕೆ ಬೇಸತ್ತ ಒಡಲಿಗೆ ಪ್ರಶಾಂತತೆಯ ಹಾರೈಕೆಗಳು ನೀಡುವ ಮನರಂಜನೆಯಲ್ಲಿ ಒಂದಾದ ಭರತನಾಟ್ಯವನ್ನು ಸಹ ಮಾಡುತ್ತಾರೆ .

ಈಕೆ ಪ್ರಸ್ತುತ ಕೆ. ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿ ದೇರಳ ಕಟ್ಟೆಯಲ್ಲಿ ಡಾಕ್ಟರ್ ಆಫ್ ಫಾರ್ಮಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಧುರವಾದ ಕಂಠಗಳಿಂದ ಹಾಡುವ ಮೂಲಕ ಸಂಗೀತದ ಕಡೆ ಒಲವನ್ನು ಬೆಳೆಸಿಕೊಂಡಿದ್ದಾರೆ. ಗುರುಗಳಾದ ವಿಧೂಷಿ ಅರುಣ ಪಡೀಲ್ ಇವರಿಂದ ಸಂಗೀತ ಕಲೆಯನ್ನು ಕರಗತ ಮಾಡಿಕೊಂಡು ಹಾಡುವ ಜೊತೆಗೆ ಭರತನಾಟ್ಯ ವನ್ನು  ಕೂಡ ಇವರು ನೃತ್ಯ ಗುರುಗಳಾದ ಶಿವರಾಜ್ ಭಟ್ ವಿಟ್ಲ, ಸುರೇಶ್ ಕಾರಂತ್ ಬಿ.ಸಿ ರೋಡ್ ಹಾಗೂ ದೀಪಕ್ ಕುಮಾರ್ ಪುತ್ತೂರು ಇವರ ಮೂಲಕ ಕಲಿತಿದ್ದಾರೆ.

ಇವರು ಸಿಕ್ಕ ಅವಕಾಶವನ್ನು ಕಳೆದುಕೊಳ್ಳದೆ ಪ್ರತಿಭಾಕಾರಂಜಿಗಳಂತಹ ಕಾರ್ಯಕರ್ಮದಲ್ಲಿ, ಹಬ್ಬಗಳ ನಿಮಿತ್ತ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹಾಡುತ್ತಾರೆ. ರಾಜ್ಯಮಟ್ಟದ ಜಾನಪದ ಹಾಡು ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿ ಹಾಗೂ ಲಯನ್ಸ್  ಕ್ಲಬ್ ನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಂಗೀತ ಲೋಕದಲ್ಲಿ ಹಿರಿಯ ಸಾಧನೆ ಮಾಡಬೇಕೆನ್ನುವ ಹಂಬಲ ಹೊಂದಿರುವ ಈಕೆ ಕನ್ನಡದ ರಾಬರ್ಟ್ ಚಿತ್ರದ ಕಣ್ಣು ಹೊಡಿಯ್ಯಾಕ್  ಕವರ್ ಸಾಂಗ್ ಹಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಸುಕನ್ಯಾ ಎನ್. ಆರ್

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.