ಕೋವಿಡ್‌ ನೆಗೆಟಿವ್‌: ಪಾಸಿಟಿವ್‌ ಮೂಡ್‌ ನಲ್ಲಿ ಸಿನಿಮಾ ರಂಗ


Team Udayavani, Sep 24, 2021, 12:42 PM IST

ಕೋವಿಡ್‌ ನೆಗೆಟಿವ್‌: ಪಾಸಿಟಿವ್‌ ಮೂಡ್‌ ನಲ್ಲಿ ಸಿನಿಮಾ ರಂಗ

ಹಬ್ಬಗಳ ಸೀಸನ್‌ ಬಂದಾಗಿದೆ, ನಿಧಾನವಾಗಿ ಕೋವಿಡ್‌ ಇಳಿಕೆಯಾಗುತ್ತಿದೆ, ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ರೆಡಿಯಾಗುತ್ತಿವೆ, ಸ್ಟಾರ್‌ ಡೈರೆಕ್ಟರ್‌ಗಳು ತಮ್ಮ ಹೊಸ ಸಿನಿಮಾಗಳ ಟೈಟಲ್‌ ಲಾಂಚ್‌ ಮಾಡುತ್ತಿದ್ದಾರೆ…. ಇವೆಲ್ಲದರ ಒಟ್ಟು ಪರಿಣಾಮ ಕನ್ನಡ ಚಿತ್ರರಂಗದಲ್ಲಿ ಪಾಸಿಟಿವ್‌ ಫೀಲಿಂಗ್‌.

ಹೌದು, ಕೋವಿಡ್‌ ನೆಗೆಟಿವ್‌ ಹೆಚ್ಚಾಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಪಾಸಿಟಿವ್‌ ಫೀಲಿಂಗ್‌ ಹೆಚ್ಚಾಗುತ್ತಿದೆ. ಚಿತ್ರರಂಗದ ಪ್ರತಿಯೊಂದು ವಿಭಾಗ ಕೂಡಾ ಮತ್ತೆ ಹಳೆಯ ಜೋಶ್‌ನೊಂದಿಗೆ ಮುನ್ನುಗ್ಗಲು ರೆಡಿಯಾಗಿವೆ. ಇದಕ್ಕೆ ಮುಖ್ಯಕಾರಣ, ಚಿತ್ರಮಂದಿರಗಳಿಗೆ ಶೀಘ್ರದಲ್ಲಿ ಪೂರ್ಣ ಪ್ರವೇಶಾತಿ ನೀಡುವ ನಿರೀಕ್ಷೆ. ಈ ಒಂದು ನಿರೀಕ್ಷೆ ಕನ್ನಡ ಚಿತ್ರರಂಗದಲ್ಲಿ ಟಾನಿಕ್‌ನಂತೆ ಕೆಲಸ ಮಾಡಲಾರಂಭಿಸಿದೆ.

ಈಗಾಗಲೇ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆಯಾದರೂ ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶಾತಿ ಇಲ್ಲದ ಕಾರಣ, ಎಲ್ಲವೂ ಇದ್ದು, ಏನೋ ಕೊರತೆಯಂತೆ ಸಿನಿಮಾ ಮಂದಿಯಲ್ಲೊಂದು ಕೊರಗಿತ್ತು. ಆದರೆ, ಈಗ ಸರ್ಕಾರ ಶೀಘ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಗುಡ್‌ನ್ಯೂಸ್‌ ನೀಡುವುದಾಗಿ ಹೇಳಿದೆ. ಈಗಾಗಲೇ ಶೇ 50 ಪ್ರವೇಶಾತಿಯಲ್ಲಿ ಒಂದಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾದರೂ ಕನ್ನಡ ಚಿತ್ರರಂಗ ಇನ್ನೂ ರಂಗೇರಿಲ್ಲ. ಚಿತ್ರರಂಗದಲ್ಲಿ ನಿಜವಾದ ಸಂಭ್ರಮ ಕಾಣಬೇಕಾದರೆ ಸ್ಟಾರ್‌ ಸಿನಿಮಾಗಳು ಅದ್ಧೂರಿಯಾಗಿ ಬಿಡುಗಡೆಯಾಗಬೇಕು. ಅಭಿಮಾನಿಗಳ ಜೈಕಾರ, ಚಿತ್ರಮಂದಿರ ಮುಂದೆ, ಕಟೌಟ್‌, ಪಟಾಕಿಯ ಸದ್ದು ಕೇಳಿದಾಗಲೇ ಚಿತ್ರಪ್ರೇಮಿಗಳಿಗೆ ಸಂಭ್ರಮ.

ಪೂರ್ವ ತಯಾರಿ ಜೋರು:  ಅಕ್ಟೋಬರ್‌ನಿಂದ ಸಿನಿಮಾ ಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವ ನಿರೀಕ್ಷೆ ಇರುವುದರಿಂದ ಸಿನಿಮಾ ತಂಡಗಳು ಕೂಡಾ ತಮ ಬಿಡುಗಡೆಯ ಕುರಿತು ಪ್ಲ್ರಾನ್‌ ಮಾಡಿಕೊಳ್ಳುತ್ತಿದೆ. ಮುಖ್ಯವಾಗಿ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಈಗಾಗಲೇ ಸಭೆ ಸೇರಿ ಚರ್ಚಿಸಲಾರಂಭಿಸಿದ್ದಾರೆ. ಏಕೆಂದರೆ ಇವರೆಲ್ಲರೂ ಸಿನಿಮಾ ರೆಡಿ ಮಾಡಿಟ್ಟುಕೊಂಡು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಲೇ ಇದ್ದಾರೆ. ಜೊತೆಗೆ ಕೋಟಿಗಟ್ಟಲೇ ಬಂಡವಾಳ ಕೂಡಾ ಹೂಡಿದ್ದಾರೆ. ಆ ಬಂಡವಾಳ ವಾಪಾಸ್‌ ಬರಬೇಕಾದರೆ ಸಿನಿಮಾ ರಿಲೀಸ್‌ ಆಗಿ ಹಿಟ್‌ ಆಗಲೇಬೇಕು. ಅದೇ ಕಾರಣದಿಂದ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಈಗ ತಮ್ಮ ಸಿನಿಮಾಗಳ ಪ್ರಮೋಶನ್‌ ಜೊತೆಗೆ ಚಿತ್ರ ಬಿಡುಗಡೆ ಕುರಿತು ಚರ್ಚಿಸುತ್ತಿದ್ದಾರೆ. ಮೂರ್‍ನಾಲ್ಕು ಸ್ಟಾರ್‌ ಸಿನಿಮಾಗಳಂತೂ ಪೂರ್ಣ ಪ್ರವೇಶಾತಿ ಸಿಕ್ಕ ಬೆನ್ನಿಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ:‘ಸುಕನ್ಯ ದ್ವೀಪ’ದಲ್ಲಿ ಫ್ಯಾಮಿಲಿ ಡ್ರಾಮಾ

“ಕೋಟಿಗೊಬ್ಬ-3′, “ಭಜರಂಗಿ-2′ ಹಾಗೂ “ಸಲಗ’ ಚಿತ್ರಗಳು ಮೊದಲ ಹಂತವಾಗಿ ಬಿಡುಗಡೆಯಾಗಲಿದೆ. ಹಾಗಾದರೆ ಯಾವ ಸಿನಿಮಾ ಮೊದಲು ಬಿಡುಗಡೆ ಯಾಗುತ್ತದೆ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಗೆ ಈಗಲೇ ಉತ್ತರಿಸೋದು ಕಷ್ಟ. ಏಕೆಂದರೆ ಯಾವ ಸ್ಟಾರ್‌ ಸಿನಿಮಾಗಳು ಕೂಡಾ ಡೇಟ್‌ ಅನೌನ್ಸ್‌ ಮಾಡಿಲ್ಲ.

ಈ ಬಗ್ಗೆ ಮಾತನಾಡುವ “ಕೋಟಿಗೊಬ್ಬ-3′ ನಿರ್ಮಾಪಕ ಸೂರಪ್ಪ ಬಾಬು, “ನಾನು ರಿಲೀಸ್‌ ಡೇಟ್‌ ಬಗ್ಗೆ ಈಗಲೇ ಹೇಳ್ಳೋದು ಕಷ್ಟ. ಚಿತ್ರಮಂದಿರ ಪೂರ್ಣ ಪ್ರವೇಶದ ಕುರಿತು ಸರ್ಕಾರ ಅನುಮತಿ ನೀಡದೇ ನಾವು ಈಗಲೇ ಹೇಳಿದರೆ ತಪ್ಪಾದೀತು. ಅನುಮತಿ ಸಿಕ್ಕ ಕೂಡಲೇ ನಾವು ಮೂವರು ನಿರ್ಮಾಪಕರು ಜೊತೆಯಾಗಿ ಬಂದು ನಮ್ಮ ಸಿನಿಮಾಗಳ ಡೇಟ್‌ ಅನೌನ್ಸ್‌ ಮಾಡುತ್ತೇವೆ. ಈ ಬಾರಿಯೂ ಯಾವುದೇ ಗೊಂದಲವಿಲ್ಲ ದಂತೆ ಪ್ಲ್ರಾನ್‌ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ. ಅದೇನೇ ಆದರೂ ಅಕ್ಟೋಬರ್‌ನಿಂದ ಸ್ಟಾರ್‌ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ, ಜೈಕಾರ ಹಾಕುವ ಅವಕಾಶ ಸಿಗೋದು ಬಹುತೇಕ ಪಕ್ಕಾ.

ಟೈಟಲ್‌, ಪೋಸ್ಟರ್‌ ತಂದ ಸಂಭ್ರಮ:  ಒಂದು ಕಡೆ ಸಿನಿಮಾ ಬಿಡುಗಡೆ ಕುರಿತಾದ ಸಂಭ್ರಮವಾದರೆ, ಒಂದಷ್ಟು ಸ್ಟಾರ್‌ ಸಿನಿಮಾಗಳ ಟೈಟಲ್‌, ಫ‌ಸ್ಟ್‌ಲುಕ್‌, ಮೋಶನ್‌ ಪೋಸ್ಟರಗಳು ಸದ್ದು ಮಾಡುವ ಮೂಲಕ ಚಿತ್ರರಂಗವನ್ನು ಚಟುವಟಿಕೆ ಯಲ್ಲಿಟ್ಟಿವೆ. ಮುಖ್ಯವಾಗಿ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಟೈಟಲ್‌ ಲಾಂಚ್‌ ಆಗಿರೋದು ಕೂಡಾ ಚಿತ್ರರಂಗದಲ್ಲಿ ಪಾಸಿಟಿವ್‌ ಫೀಲಿಂಗ್‌ ಹೆಚ್ಚಾಗಲು ಕಾರಣ. ಏಕೆಂದರೆ ಉಪೇಂದ್ರ ನಿರ್ದೇಶನ ಮಾಡದೇ ತುಂಬಾ ಗ್ಯಾಪ್‌ ಆಗಿತ್ತು. ಈಗ ಮತ್ತೆ ನಿರ್ದೇಶನಕ್ಕೆ ಮರಳುತ್ತಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಹೊಂಬಾಳೆ ಸೇರಿದಂತೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸತತವಾಗಿ ಸಿನಿಮಾ ಅನೌನ್ಸ್‌ ಮಾಡುತ್ತಿವೆ. ಇದೆಲ್ಲದರ ಪರಿಣಾಮ ಕನ್ನಡ ಚಿತ್ರರಂಗ ಮತ್ತೆ ಬ್ಯಾಕ್‌ ಟು ನಾರ್ಮಲ್‌.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.