ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

ಕಲಾ ಶಿಕ್ಷಕರು ತಿಂಗಳಿಗೊಂದು ಸಭೆ ನಡೆಸುವುದಕ್ಕೆ ಈ ಹಿಂದೆ ಇಲಾಖೆಯೇ ಆದೇಶ ಹೊರಡಿಸಿತ್ತು.

Team Udayavani, Sep 24, 2021, 6:15 PM IST

ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

ಸಿಂಧನೂರು: ಸರಕಾರಿ ಶಾಲೆಗಳು ಬರೀ ಸುಣ್ಣ-ಬಣ್ಣ ಅಷ್ಟೇ ಅಲ್ಲ; ಇದೀಗ ಗ್ರಾಮೀಣ ಜೀವನ ಶೈಲಿ ಬಿಂಬಿಸುವ ಚಿತ್ರಗಳೊಂದಿಗೆ ಮಕ್ಕಳನ್ನು ಆಕರ್ಷಿಸಲಾರಂಭಿಸಿವೆ. ತಾಲೂಕಿನ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಂಡು ಹೊಸ ಮೆರಗು ನೀಡಲಾಗುತ್ತಿದೆ. ಚಿತ್ರಕಲಾ ಶಿಕ್ಷಕರು ತಮ್ಮ ದೈನಂದಿನ ಕೆಲಸದೊಟ್ಟಿಗೆ ಶಾಲೆಗಳನ್ನು ಅಂದ-ಚೆಂದಗೊಳಿಸಲು ಶ್ರಮಿಸುತ್ತಿದ್ದಾರೆ. ಆಯಾ ಶಾಲೆಯ ಮುಖ್ಯಗುರುಗಳ ಬೇಡಿಕೆಯನ್ವಯ ಬಿಇಒಗಳಿಂದ ಆದೇಶ ಪಡೆದು ಶಾಲೆಗಳಿಗೆ ಹಾಜರಾಗಿ, ಚಿತ್ರಕಲೆ ಅರಳಿಸುತ್ತಿದ್ದಾರೆ.

ರೌಡಕುಂದಾ ಶಾಲೆಗೆ ಹೊಸ ಕಳೆ:
ಮುಖ್ಯಗುರು ಶೇಷಗಿರಿರಾವ್‌ ಅವರು ಸುಣ್ಣ-ಬಣ್ಣ ಕಂಡ ಶಾಲೆಗೆ ಚಿತ್ರಕಲಾ ಶಿಕ್ಷಕರನ್ನು ಕೇಳಿದ ಹಿನ್ನೆಲೆಯಲ್ಲಿ ಬಿಇಒ ಶರಣಪ್ಪ ವಟಗಲ್‌ ತಂಡ ಕಳುಹಿಸಿದ್ದರು. ಹತ್ತು ಜನರನ್ನೊಳಗೊಂಡ ತಂಡ ಒಂದೇ ದಿನದಲ್ಲಿ ಶಾಲೆಯ ಗೋಡೆಗಳ ರಂಗು ಹೆಚ್ಚಿಸಿದೆ. ಗ್ರಾಮೀಣ ಜೀವನ ಶೈಲಿ ಸಾರುವ ಚಿತ್ರಗಳು, ಎತ್ತಿನ ಬಂಡಿ, ನೀರು ತರುವ ಚಿತ್ರ, ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿದ್ದಾರೆ. ಗಿಡಮರ-ಗುಡಿಸಲು ಗಮನ ಸೆಳೆಯುತ್ತಿವೆ.

ಪರಿಸರ ಕಾಳಜಿ, ಸಾಂಸ್ಕೃತಿಕ ನೃತ್ಯ, ಭರತನಾಟ್ಯ, ಯಕ್ಷಗಾನ, ಬಯಲಾಟ, ವಾದ್ಯಮೇಳ ಸೇರಿದಂತೆ ಎಲ್ಲ ಜನಪದ ಕಲೆಗಳನ್ನು ಗೋಡೆಗಳಲ್ಲಿ ಚಿತ್ರಿಕರಿಸಲಾಗಿದೆ. ರೈತಾಪಿ ಜನರ ಬದುಕಿನ ನೋಟ, ಜನಪದ ಕಲೆಯ ಎಲ್ಲ ಪ್ರಕಾರಗಳನ್ನು ಇಲ್ಲಿ ಕಾಣಬಹುದಾಗಿದೆ.

19 ಶಾಲೆಗಳು ಪೂರ್ಣ: ಇದುವರೆಗೆ ಚಿತ್ರಕಲಾ ಶಿಕ್ಷಕರಿಂದಲೇ ತಾಲೂಕಿನ 19 ಶಾಲೆಗಳು ಹೊಸ ರೂಪ ಪಡೆದಿವೆ. ಸಿದ್ರಾಂಪುರ, ವಳಬಳ್ಳಾರಿ, ತುರುವಿಹಾಳ, ಹಾರಾಪುರ, ಅಲಬನೂರು, ಜವಳಗೇರಾ, ಗೋರೆಬಾಳ, ಆದರ್ಶ ವಿದ್ಯಾಲಯ, ವೆಂಕಟೇಶ್ವರ ಸ್ಕೂಲ್‌, ಹೊಸಳ್ಳಿ ಕ್ಯಾಂಪ್‌, ಹಂಚಿನಾಳ, ರೌಡಕುಂದಾ, ಉದಾಳ(ಇಜೆ) ಮೂಡಲಗಿರಿ ಕ್ಯಾಂಪ್‌, ಅಂಬಾನಗರ ಶಾಲೆಯ ಗೋಡೆಗಳುಕಲಾವಿದರಕೈ ಚಳಕಕ್ಕೆ ಸಾಕ್ಷಿಯಾಗಿವೆ. ಬಿಡುವಿನ ದಿನ ಭಾನುವಾರ
ಕೂಡ ಚಿತ್ರಕಲಾ ಶಿಕ್ಷಕರು ಕೊಪ್ಪಳ ಜಿಲ್ಲೆಯ ಅರಸನಕೇರಿಗೆ ತೆರಳಿ ಅಲ್ಲಿನ ಶಾಲೆಯನ್ನು ಅಂದ- ಚೆಂದಗೊಳಿಸಿದ್ದಾರೆ.

ಬಿಇಒ ಸೂಚನೆ ಬೇಕು: ಕಲಾ ಶಿಕ್ಷಕರು ತಿಂಗಳಿಗೊಂದು ಸಭೆ ನಡೆಸುವುದಕ್ಕೆ ಈ ಹಿಂದೆ ಇಲಾಖೆಯೇ ಆದೇಶ ಹೊರಡಿಸಿತ್ತು. ಈ ಸಂದರ್ಭ ಬರೀ ಆಯಾ ಶಾಲೆಗೆ ಹೋಗಿ ಚರ್ಚೆ ಮಾಡಿ ಬರುವ ಬದಲು ಕಲಾವಿದರು ಬಂದು ಹೋಗಿದ್ದರೆಂಬ ನೆನಪು ಉಳಿಸಲು ಚಿತ್ರ ಬಿಡಿಸುವ ಮಾರ್ಗ ಅನುಸರಿಸಲಾಯಿತು. ಸಭೆ ನಡೆಸಬೇಕೆಂಬ ಆದೇಶ ರದ್ದಾಗಿದ್ದರೂ ಆಯಾ ಶಾಲೆ ಮುಖ್ಯಗುರುಗಳು ಬೇಡಿಕೆ ಸಲ್ಲಿಸಿದರೆ ಬಿಇಒ ಅನುಮತಿ ಪಡೆದು ಶಾಲೆಗೆ ಹೋಗುವ ಪದ್ಧತಿಯನ್ನು ತಾಲೂಕಿನಲ್ಲಿ ಮುಂದುವರಿಸಲಾಗಿದೆ.

ಇದರೊಟ್ಟಿಗೆ ಖಾಸಗಿ ಶಿಕ್ಷಕರು ಕೂಡ ಕಲಾವಿದರ ಸಂಘ ಕಟ್ಟಿಕೊಂಡು ಸರಕಾರಿ ಶಾಲೆಗಳನ್ನು ಅಂದಗೊಳಿಸುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಶಾಲೆಯನ್ನುಮಕ್ಕಳಆಕರ್ಷಣೀಯ ಕೇಂದ್ರವಾಗಿಸಬೇಕೆಂಬ ಉದ್ದೇಶದೊಂದಿಗೆ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಕಲಾವಿದರ ಆಯಾ ದಿನ ಊಟದ ವ್ಯವಸ್ಥೆ ಕಲ್ಪಿಸಿ, ಬಣ್ಣ, ಬ್ರಷ್‌ಗಳನ್ನು ಕೊಡಿಸಿದರಷ್ಟೇ ಸಾಕು; ತಮ್ಮ ಕೆಲಸ ನಿಭಾಯಿಸಿ ಅಲ್ಲಿಂದ ಮರಳುತ್ತಿರುವುದು ಗಮನಾರ್ಹ.

ಪ್ರತಿ ತಿಂಗಳು 3ನೇ ಶನಿವಾರ ಸಭೆ ನಡೆಸಲು ಇಲಾಖೆ ನಿರ್ದೇಶಕರು ಆದೇಶವಾಗಿತ್ತು. ಬರೀ ಮೀಟಿಂಗ್‌ ಮಾಡಿ ಬರುವ ಬದಲು ಅಲ್ಲೊಂದು ನೆನಪು ಉಳಿಯುವ ರೀತಿ ಮಾಡಬೇಕೆಂದು ಚಿತ್ರ ಬಿಡಿಸಲಾಯಿತು. ಇಲ್ಲಿನ ಪ್ರಯತ್ನಕ್ಕೆ ಪ್ರೋತ್ಸಾಹ ದೊರೆತು ರಾಜ್ಯದ ಇತರೆಕಡೆಯೂ ಅನುಕರಿಸಲಾಗಿದೆ.
ಪಿ.ಎಲ್‌.ಪತ್ರೋಟಿ, ಜಿಲ್ಲಾಧ್ಯಕ್ಷರು,
ಚಿತ್ರಕಲಾ ಶಿಕ್ಷಕರ ಸಂಘ, ರಾಯಚೂರು

ಮಕ್ಕಳ ದಾಖಲಾತಿ ಹೆಚ್ಚಳವಾಗಬೇಕು. ಆ ನಿಟ್ಟಿನಲ್ಲಿ ಮಕ್ಕಳು ಸರಕಾರಿ ಶಾಲೆ ನೋಡಿದಾಗ ಇಲ್ಲಿಯೇ ಕಲಿಯಬೇಕೆಂಬ ಆಸಕ್ತಿ ಹೊಂದಬೇಕು. ಅವರಿಗೆ ಪರಿಸರ, ಸಾಮಾಜಿಕ ಮೌಲ್ಯಗಳನ್ನುಕಲೆಯ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಶಿವಾನಂದ ಸಾತಿಹಾಳ್‌, ಅಧ್ಯಕ್ಷರು,
ಚಿತ್ರಕಲಾ ಶಿಕ್ಷಕರ ಸಂಘ, ಸಿಂಧನೂರ

ಯಮನಪ್ಪ ಪವಾರ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.