ಮಾಲಿನ್ಯ ಮುಕ್ತ ಆರಾಮದಾಯಕ ದೂರ ಪ್ರಯಾಣ ಈಗ ನನಸು…

ಪುಣೆ ಮತ್ತು ಮುಂಬೈ ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ

Team Udayavani, Oct 13, 2021, 10:23 PM IST

ಮಾಲಿನ್ಯಮುಕ್ತ ಆರಾಮದಾಯಕ ದೂರ ಪ್ರಯಾಣ ಈಗ ನನಸು…

ಪುಣೆ: ದೇಶದ ಪ್ರಮುಖ ಎಲೆಕ್ಟ್ರಿಕ್ ಬಸ್ ಸಂಸ್ಥೆ ಮತ್ತು ಎಂಇಐಎಲ್‌ನ ಅಂಗ ಸಂಸ್ಥೆ ಈವಿ ​ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್​ ದೇಶದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ “ಪುರಿ ಬಸ್” ಹೆಸರಿನಲ್ಲಿ ಮುಂಬೈ ಮತ್ತು ಪುಣೆ ನಡುವೆ ಅಂತರ ನಗರ ನಡುವಿನ ಎಲೆಕ್ಟ್ರಿಕ್ ಬಸ್ ಸೇವೆಗಳನ್ನು ಆರಂಭಿಸಿದೆ.

ಇದರಿಂದ ಶಬ್ದ ಮತ್ತು ಪರಿಸರ ಮಾಲಿನ್ಯ ಮುಕ್ತ ಜತೆಗೆ ಆರಾಮದಾಯಕ ದೂರದ ಪ್ರಯಾಣ ನನಸಾಗಿದ್ದು, ವಿಜಯದಶಮಿಯಂತಹ ಸುದಿನದಿಂದ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

“ಪುಣೆಯಲ್ಲಿ ಅಂತರ್ ನಗರ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸುತ್ತಿರುವುದು ಸಂತಸ ತಂದಿದೆ” ಎಂದು ಇದೇ ವೇಳೆ ಪ್ರತಿಕ್ರಿಯಿಸಿದ ಈವಿ ಟ್ರಾನ್ಸ್​​ನ ​ ಕಾರ್ಯಕಾರಿ ವ್ಯವಸ್ಥಾಪಕ ಸಂದೀಪ್ ರೈಜಾದ, “ಪುರಿ ಬಸ್‌ಗಳು ಒಮ್ಮೆಯ ಚಾರ್ಜಿಂಗ್ ನಂತರ ಮಾಲಿನ್ಯ ರಹಿತವಾಗಿ 350 ಕಿ.ಮೀ. ಸಂಚರಿಸಲಿದ್ದು, ಇದರಿಂದ ಅಂತರ್ ನಗರ ಸಂಚಾರ ಸೇವೆ ಸಾಧ್ಯವಾಗಿದೆ. ಇದರಿಂದ ಸಾಕಷ್ಟು ಉಳಿತಾಯ ಆಗಲಿದೆ” ಎಂದು ತಿಳಿಸಿದರು.

12 ಮೀಟರ್ ಉದ್ದದ ಪುರಿ ಬಸ್:
ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕೋಚ್ ಬಸ್‌ಗಳು 45 ಮಂದಿ ಸಾರ್ವಜನಿಕರು ಮತ್ತು ಓರ್ವ ಚಾಲಕ ಮತ್ತೋರ್ವ ಸಹ ಚಾಲಕನನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದ್ದು, ದೂರದ ಪ್ರಯಾಣ ಆರಾಮದಾಯಕವಾಗಿಸುವ ಸಲುವಾಗಿ ಈ ಬಸ್‌ಗಳು ಹವಾನಿಯಂತ್ರಣ ವ್ಯವಸ್ಥೆ ಜತೆಗೆ ಪುಷ್ ಬ್ಯಾಕ್ ಆಸನಗಳನ್ನು ಹೊಂದಿದ್ದು ಆ ಮೂಲಕ ಪ್ರಯಾಣವನ್ನು ಸುಖಕರವಾಗಿಸಲಿವೆ.

ಹೈಟೆಕ್ ತಂತ್ರಜ್ಞಾನ ಅಳವಡಿಕೆ:
ಇಂದಿನ ಅಗತ್ಯತೆಗೆ ತಕ್ಕಂತೆ ವಿನ್ಯಾಸಗೊಂಡಿರುವ ಈವೀ ಟ್ರಾನ್ಸ್ ಎಲೆಕ್ಟ್ರಿಕ್ ಕೋಚ್ ಬಸ್‌ಗಳಲ್ಲಿ ಟೆಲಿವಿಷನ್ ಮತ್ತು ಮಾಹಿತಿ ವ್ಯವಸ್ಥೆ ಇದ್ದು, ಜತೆಗೆ ಪ್ರತಿ ಅಸನದಲ್ಲಿ ಯುಎಸ್‌ಬಿ ಎಲೆಕ್ಟ್ರಿಕಲ್ ಚಾರ್ಜಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಐದು ಕ್ಯೂಬಿಕ್ ಮೀಟರ್‌ನಷ್ಟು ಸರಂಜಾಮು ಇರಿಸಿಕೊಳ್ಳಲು ಸ್ಥಳಾವಕಾಶ ಒದಗಿಸಲಾಗಿದೆ.

ಇದನ್ನೂ ಓದಿ:500 ಕೆ.ಜಿ.ಚಿನ್ನ ಈಗಲೇ ಕರಗಿಸಿದ್ದೇವೆ: ಮದ್ರಾಸ್‌ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ

ಅಗ್ಗದ ಪ್ರಯಾಣ:
ಪ್ರಸ್ತುತ ದೂರದ ಪ್ರಯಾಣಕ್ಕೆ ಬಳಕೆಯಲ್ಲಿರುವ ಡೀಸೆಲ್ ವಾಹನಗಳಿಗೆ ಹೋಲಿಕೆ ಮಾಡಿದಲ್ಲಿ ಈವೀ ಟ್ರಾನ್ಸ್ ಎಲೆಕ್ಟ್ರಿಕ್ ಕೋಚ್ ಬಸ್‌ಗಳು ಅಗ್ಗದ ಪ್ರಯಾಣಕ್ಕೆ ನಾಂದಿ ಹಾಡಿದ್ದು, ಸಂಚಾರ ಮತ್ತು ನಿರ್ವಹಣೆಯಲ್ಲಿ ಮಿತವ್ಯಯಿ ಎನಿಸಿಕೊಂಡಿದೆ. ಲಿಯಾನ್ ಪಾಸ್ಪೇಟ್ ತಂತ್ರಜ್ಞಾನ ಅಳವಡಿತ ಬ್ಯಾಟರಿಯ ಈವೀ ಟ್ರಾನ್ಸ್ ಬಸ್‌ಗಳನ್ನು ಭಾರತದಲ್ಲಿ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ತಯಾರಿಸುತ್ತಿದೆ.

ಕೋಚ್ ಬಸ್‌ಗಳ ತಯಾರಿ ವೇಳೆ ಸುರಕ್ಷತೆಯನ್ನು ಆದ್ಯತೆಯಾಗಿಸಿಕೊಂಡಿದ್ದು, ಇ.ಯು. ಗುಣಮಟ್ಟಕ್ಕೆ ತಕ್ಕಂತೆ ಚಾಲಕ ಸ್ನೇಹಿ ವ್ಯವಸ್ಥೆ ಹೊಂದಿದೆ ಮತ್ತು ಭಾರತೀಯ ನಿಯಂತ್ರಣ ನಿಯಮಾನುಸಾರ ಈವೀ ಟ್ರಾನ್ಸ್ ಬಸ್‌ಗಳು ಸಿದ್ಧಗೊಂಡಿದ್ದು, ಆತಂಕದ ವೇಳೆ ಅಲಾರಾಮ್ ವ್ಯವಸ್ಥೆ, ತುರ್ತು ದೀಪಗಳ ವ್ಯವಸ್ಥೆ ಹೊಂದಿದೆ.

ಈಗಾಗಲೇ ಈವೀ ಟ್ರಾನ್ಸ್ ಕೋಚ್ ಬಸ್‌ಗಳು ಸೂರತ್, ಸಿಲ್ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಗಳಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದ್ದು, ಪುರಿ ಬಸ್ ಸೇವೆ ಎಲೆಕ್ಟ್ರಿಕ್ ಬಸ್ ಸೇವೆಗಳ ವಲಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ.

ಎಂಇಐಎಲ್‌ನ ಶೇ.100ರಷ್ಟು ಪಾಲುದಾರಿಕೆಯ ಸಂಸ್ಥೆಯಾಗಿರುವ ಈವೀ ​ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಸಂಸ್ಥೆಯು ಮಾರಾಟ, ಗುತ್ತಿಗೆ ಸೇರಿದಂತೆ ವಿವಿಧ ಮಾದರಿಗಳಲ್ಲಿ ಬಸ್ ಸೇವೆಗಳನ್ನು ಒದಗಿಸುತ್ತಿದ್ದು, ಪ್ರಸ್ತುತ ದೇಶಾದ್ಯಂತ 400 ಬಸ್‌ಗಳು ಸಂಚರಿಸುತ್ತಿವೆ. ಈವೀ ಟ್ರಾನ್ಸ್ ತನ್ನದೇ ಆದ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ.

ಫೇಮ್ 1 ಮತ್ತು ಫೇಮ್ 2 ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲೆಕ್ಟ್ರಿಕಲ್ ಬಸ್‌ಗಳ ಅಳವಡಿಕೆಗೆ ಮುಂದಡಿ ಇರಿಸಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.