ರೈತರಿಗೆ ಡೀಸೆಲ್‌ ಸಬ್ಸಿಡಿಗೆ ಸಿಎಂ ಬಳಿ ಪ್ರಸ್ತಾಪ


Team Udayavani, Oct 15, 2021, 4:49 PM IST

Diesel subsidy

ಚಿತ್ರದುರ್ಗ: ನನ್ನ ಬಹು ದಿನಗಳಕನಸಾಗಿರುವ ರೈತರಿಗೆ ಡೀಸೆಲ್‌ ಸಬ್ಸಿಡಿನೀಡುವ ವಿಚಾರ ಮುಖ್ಯಮಂತ್ರಿಗಳಗಮನಕ್ಕೆ ತಂದಿದ್ದು, ಮುಂದಿನ ಬಜೆಟ್‌ವೇಳೆಗೆ ಅಂತಿಮ ಸ್ಪರ್ಶ ಪಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ಹೇಳಿದರು.

ಮುರುಘಾ ಮಠದ ಅನುಭವಮಂಟಪದಲ್ಲಿ ಬುಧವಾರ ಶರಣ ಸಂಸ್ಕೃತಿಉತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯಲ್ಲಿ ಮೀನುಗಾರರ ಬೋಟ್‌ಗಳಿಗೆ ಡೀಸೆಲ್‌ ಸಬ್ಸಿಡಿ ಇದೆ. ಇಂದುರೈತರು ಯಂತ್ರಾಧರಿತ ಕೃಷಿ ಮಾಡುತ್ತಿದ್ದು,ರೈತರಿಗೂ ಡೀಸೆಲ್‌ ಸಬ್ಸಿಡಿ ನೀಡಬೇಕುಎನ್ನುವುದು ನನ್ನ ಆಶಯವಾಗಿದೆ ಎಂದರು.

ಮುಂದಿನ ಬಜೆಟ್‌ನಲ್ಲಿ 175 ಕೋಟಿರೂ. ಬಜೆಟ್‌ನಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿಕೋಲ್ಡ್‌ ಸ್ಟೋರೇಜ್‌ ಸ್ಥಾಪಿಸಲಾಗುವುದು.ಕೇಂದ್ರ ಸರ್ಕಾರ ಕೃಷಿ ಮೂಲ ಸೌಕರ್ಯಕಲ್ಪಿಸಲು 1 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಇದರಲ್ಲಿ 10 ಸಾವಿರ ಕೋಟಿ ರೂ.ಗಳನ್ನುಬೆಳೆ ಸಂಸ್ಕರಣೆಗೆ ಮೀಸಲಿಡಲಾಗಿದೆಎಂದು ಹೇಳಿದರು.

2014-15ರಲ್ಲಿ ರಾಜ್ಯದಲ್ಲಿ ಹೆಚ್ಚುರೈತರ ಆತ್ಮಹತ್ಯೆಯಾದಾಗ ಒಂದುಅಧ್ಯಯನ ನಡೆಸಲಾಗಿತ್ತು. ಅದರಲ್ಲಿಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರೈತರುಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ,ಬರವಿರುವ ಕೋಲಾರ ಜಿಲ್ಲೆಯಲ್ಲಿ ಈಸಂಖ್ಯೆ ಕಡಿಮೆ ಇದೆ. ಮಂಡ್ಯ ರೈತರುಭತ್ತ, ಕಬ್ಬು ಬೆಳೆಗಳಿಗೆ ಸೀಮಿತರಾಗಿದ್ದಾರೆ.

ಆದರೆ, ಕೋಲಾರ ರೈತರು ಬಹುಬೆಳೆಪದ್ಧತಿ ಅನುಸರಿಸುತ್ತಿದ್ದಾರೆ. ಇಲ್ಲಿ ಒಂದುಬೆಳೆ ವಿಫಲವಾದರೂ ಮತ್ತೂಂದುಬೆಳೆ ಕೈ ಹಿಡಿಯುತ್ತದೆ. ಭತ್ತ ಬೆಳೆದುಶ್ರೀಮಂತರಾದವರನ್ನು ನಾನು ನೋಡಿಲ್ಲ.ಆದ್ದರಿಂದ ರೈತರು ಇಸ್ರೇಲ್‌ ಮಾದರಿಎನ್ನುವುದಕ್ಕಿಂತ ನಮ್ಮ ಕೋಲಾರಮಾದರಿಯಲ್ಲೇ ಬಹುಬೆಳೆ ಪದ್ಧತಿಅನುಸರಿಸಿ ಎಂದು ತಿಳಿಸಿದರು.

ಕೇಂದ್ರ ರಸಗೊಬ್ಬರ ಖಾತೆ ರಾಜ್ಯಸಚಿವ ಭಗವಂತ ಖೂಬಾ ಮಾತನಾಡಿ,ರಸಗೊಬ್ಬರ ಮತ್ತು ಕೀಟನಾಶಕಗಳಹೆಚ್ಚು ಬಳಕೆಯಿಂದ ಭೂಮಿ ತನ್ನಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ನಮ್ಮದೇಹದಂತೆ ಭೂಮಿಯ ಆರೋಗ್ಯವನ್ನು ಕಾಪಾಡಬೇಕು.

ಇಲ್ಲವಾದರೆ ಅದರಆರೋಗ್ಯ ಕೆಟ್ಟು ನಾವು ಸೇವಿಸುವಆಹಾರ ವಿಷವಾಗುತ್ತದೆ. ಆದ್ದರಿಂದರಸಗೊಬ್ಬರ, ಕೀಟನಾಶಕಗಳನ್ನುಸರಿಯಾದ ಪ್ರಮಾಣದಲ್ಲಿ ಬಳಸುವುದನ್ನುಕಲಿಯಬೇಕು ಎಂದರು.ಈ ಹಿಂದಿನ ಎಲ್ಲ ಸರ್ಕಾರಗಳುರೈತರನ್ನು ಸಾಲಮನ್ನಾದ ಹೆಸರಲ್ಲಿ ಅವರನ್ನುಅವಮಾನಗೊಳಿಸಿವೆ. ಕಳೆದ ಹತ್ತುವರ್ಷಗಳಲ್ಲಿ 20ರಿಂದ 30 ಸಾವಿರ ಕೋಟಿರೂ. ರೈತರ ಸಾಲಮನ್ನಾ ಆಗಿದೆ. ಆದರೆ,ಪ್ರಧಾನಿ ನರೇಂದ್ರ ಮೋದಿ ಸರ್ಕಾರಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಖಾತೆಗೆ ನೇರವಾಗಿ ಪ್ರತಿ ವರ್ಷ 6 ಸಾವಿರರೂ. ನೀಡುತ್ತಿದೆ.

ಇದರಿಂದ 12 ಕೋಟಿರೈತ ಕುಟುಂಬಗಳಿಗೆ ಅನುಕೂಲವಾಗಲಿದೆ.ಇಲ್ಲೀವರೆಗೆ 1.25 ಲಕ್ಷ ಕೋಟಿ ರೂ.ರೈತರಿಗೆ ಸಂದಾಯವಾಗಿದೆ ಎಂದರು.ಫಸಲ್‌ ವಿಮೆ ಕುರಿತು ಮಾತನಾಡಿದಅವರು, ಇಲಾಖೆ ಹಾಗೂ ರೈತರಸಹಕಾರವಿದ್ದರೆ ಬೆಳೆವಿಮೆಯನ್ನುಸರಿಯಾಗಿ ಪಡೆದುಕೊಳ್ಳಬಹುದುಎಂಬುದಕ್ಕೆ ಬೀದರ್‌ ಉತ್ತಮಉದಾಹರಣೆ. 2016-17ರಿಂದ ಈವರೆಗೆಇಡೀ ದೇಶದಲ್ಲೇ 500 ಕೋಟಿ ರೂ.ಗೂಹೆಚ್ಚು ವಿಮೆ ತೆಗೆದುಕೊಂಡಿದ್ದಾರೆ. ಈಮೂಲಕ ನಂ.1 ಸ್ಥಾನಗಳಿಸಿದೆ. ಈ ಸಾಧನೆಪ್ರತಿ ಜಿಲ್ಲೆಗೂ ಸಾಧ್ಯವಿದೆ ಎಂದರು

.ಹುಲಿಕೆರೆ ಆದರ್ಶ ಕೃಷಿಕ ವಿಶ್ವೇಶ್ವರ ಸಜ್ಜನಅವರನ್ನು ಸನ್ಮಾನಿಸಲಾಯಿತು. ಭಗೀರಥಪೀಠದ ಶ್ರೀ ಪುರಷೋತ್ತಮಾನಂದಪುರಿಸ್ವಾಮೀಜಿ, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ,ಕೃಷಿ ವಿವಿ ಕೃಷಿ ಆರ್ಥಿಕ ತಜ್ಞ ಪ್ರೊ| ಟಿ.ಎಂ.ವೆಂಕಟರೆಡ್ಡಿ, ಬಾಬು ಜಗಜೀವನರಾಮ್‌ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಅಧ್ಯಕ್ಷ ಪ್ರೊ|ಎನ್‌.ಲಿಂಗಣ್ಣ, ಉತ್ಸವದಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿಮಾದಾರ ಚನ್ನಯ್ಯ ಸ್ವಾಮೀಜಿ,ಕಾರ್ಯಧ್ಯಕ್ಷ ಕೆ.ಎಸ್‌. ನವೀನ್‌ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chi-narabalui

Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!

CTD-Nagasadhu-Died

Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!

ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ

BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.