![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 19, 2021, 5:27 AM IST
ಉಡುಪಿ: ಪ್ರಾದೇಶಿಕ ಸಾರಿಗೆ ಇಲಾಖೆ ಯಿಂದ ಈ ವರ್ಷದ ಸೆಪ್ಟಂಬರ್ ತಿಂಗಳಿನ ಮಾಸದಲ್ಲಿ 13,70,97,192ರೂ. ರಾಜಸ್ವ ಸಂಗ್ರಹ ಮಾಡುವ ಮೂಲಕ ಶೇ.108.56 ಸಾಧನೆ ಮಾಡಲಾಗಿದೆ.
ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಕುಂಠಿತ ಗೊಂಡಿದ್ದ ರಾಜಸ್ವ ಸಂಗ್ರಹ ಅನಂತರದ ದಿನಗಳಲ್ಲಿ ವಿಪರೀತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದೆ. ಈ ವರ್ಷದ ಎಪ್ರಿಲ್ನಿಂದ ಸೆಪ್ಟಂಬರ್ ತಿಂಗಳವರೆಗೆ 57,03,40,298ರೂ. ರಾಜಸ್ವ ಸಂಗ್ರಹಿಸಲಾಗಿದೆ.
ತೆರಿಗೆ ವಸೂಲಾತಿಯೂ ಪ್ರಗತಿ
ವಾಹನಗಳ ತನಿಖೆಯಿಂದ ಮೂರು ವಾಹನಗಳ ಮುಟ್ಟುಗೋಲು ಸಹಿತ ಒಟ್ಟು 206 ವಾಹನಗಳಿಗೆ ತನಿಖಾ ವರದಿ ನೀಡಿ 7,97,900 ರೂ. ದಂಡ ವಸೂಲಿ ರೂಪದಲ್ಲಿ ಹಾಗೂ 10,31,628ರೂ. ತೆರಿಗೆ ವಸೂಲಿ ಮಾಡಲಾಗಿದೆ.
ಸರೆಂಡರ್ನಲ್ಲಿ 511 ವಾಹನ
ಒಟ್ಟು 511 ವಾಹನಗಳು ಸರೆಂಡರ್ನಲ್ಲಿವೆ. ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಹನಗಳಲ್ಲಿ 3,58,401 ದ್ವಿಚಕ್ರ ವಾಹನ, 67,941 ಕಾರು, 1,102 ಬಸ್, 147 ಪ್ರವಾಸಿ ವಾಹನಗಳು, 21,954 ಆಟೋ ರಿಕ್ಷಾ, 20,473 ಸರಕು ವಾಹನಗಳು, 188 ಆಸ್ಪತ್ರೆ ವಾಹನ, 958 ಶಾಲಾ ವಾಹನಗಳಿವೆ.
ಇದನ್ನೂ ಓದಿ:ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?
ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಕೊರತೆಯಿಂದಾಗಿ ಆರ್ಟಿಒ ಕಚೇರಿಯಲ್ಲಿ ಡಿಎಲ್, ಆರ್ಸಿ ಪಡೆಯಲು ಕೆಲವು ತಿಂಗಳಿನಿಂದ ಸಮಸ್ಯೆ ಎದುರಾಗಿತ್ತು. ಈಗ ಈ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿದಿದ್ದು, ಬಾಕಿ ಇರಿಸಿಕೊಂಡವರಿಗೆ ಡಿಎಲ್ ಹಾಗೂ ಆರ್ಸಿ ನೀಡಲಾಗುತ್ತಿದೆ. ಆದರೂ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ ಈ ಸಮಸ್ಯೆ ಇತ್ಯರ್ಥವಾದರೆ ತ್ವರಿತಗತಿಯಲ್ಲಿ ಪರವಾನಿಗೆ ನೀಡಲು ಸಾಧ್ಯವಾಗಲಿದೆ ಎಂದು ಆರ್ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
5 ಲಕ್ಷಕ್ಕೂ ಅಧಿಕ ಮಂದಿಗೆ ಚಾಲನಾ ಪರವಾನಿಗೆ
3,501 ಮಂದಿಗೆ ಸೆಪ್ಟಂಬರ್ ತಿಂಗಳಿನಲ್ಲಿ ಚಾಲನಾ ಪರವಾನಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 5,71,632 ಮಂದಿ ಚಾಲನಾ ಪರವಾನಿಗೆಯನ್ನು ಹೊಂದಿದ್ದಾರೆ. ದಿನಂಪ್ರತಿ 300ಕ್ಕೂ ಅಧಿಕ ಮಂದಿಗೆ ಹೊಸದಾಗಿ ಪರವಾನಿಗೆ ಪಡೆ ಯಲು ಆರ್ಟಿಒ ಕಚೇರಿಗೆ ಬರುತ್ತಿದ್ದಾರೆ.
ಉತ್ತಮ ಪ್ರಗತಿ
ರಾಜಸ್ವ ಸಂಗ್ರಹ ಹಾಗೂ ಡಿಎಲ್ ಪಡೆದುಕೊಳ್ಳುವವರ ಸಂಖ್ಯೆ ದಿನಂಪ್ರತಿ ಹೆಚ್ಚಳವಾಗುತ್ತಿದೆ. ಸೆಪ್ಟಂಬರ್ ತಿಂಗಳೊಂದರಲ್ಲಿ 13 ಕೋ.ರೂ.ಗೂ ಅಧಿಕ ರಾಜಸ್ವ ಸಂಗ್ರಹಿಸಲಾಗಿದೆ.
-ಜೆ.ಪಿ. ಗಂಗಾಧರ, ಪ್ರಾದೇಶಿಕ ಸಾರಿಗೆ ಅಧಿಕಾರಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.