ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ


Team Udayavani, Oct 24, 2021, 12:05 PM IST

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ ಸರ್ಕಾರದ ಸಾಧನೆಗಳೇ ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿ ಆಗಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿ ಮೂಲಕವೇ ನಿಮ್ಮ ಮುಂದೆ ಬಂದು ನಿಲ್ಲಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು

ಭಾನುವಾರ ಸಿಂದಗಿ ಕ್ಷೇತ್ರದ ಕನ್ನೋಳಿ ಗ್ರಾಮದಲ್ಲಿ ರೋಡ್ ಶೋ  ನಂತರದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮನಗೂಳಿ ಕಾಕಾ ಅನುಕಂಪದ ಅಲೆಯಲ್ಲಿ ಗೆದ್ದಿದ್ದರು. ಈಗ ಅನುಕಂಪವೂ ಇಲ್ಲ, ಹಿರಿಯರೂ ಇಲ್ಲ. ಹೀಗಾಗಿ ಬಿಜೆಪಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದರು.

ನಾನು ಅಧಿಕಾರ ಸ್ವೀಕರಿಸುತ್ತಲೇ ರೈತರ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ 20 ಲಕ್ಷ  ಫಲಾನುಭವಿ 1 ಸಾವಿರ‌ ಕೋಟಿ ರೂ. ಯೋಜನೆ ಘೋಷಿಸಿದ್ದೇನೆ ಎಂದರು.

ಕೋರವಾರ ಏತ ನೀರಾವರಿಗೆ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಇಂಡಿ ಶಾಖಾ ಕಾಲುವೆ ಕೊನೆ ಭಾಗದ ರೈತರಿಗೆ ನೀರು ಕೊಡುವುದು ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

5000 ಸಿಂದಗಿ ಕ್ಷೇತ್ರಕ್ಕೆ ಮನೆ ಮಂಜೂರು ಮಾಡಲಾಗಿದೆ. ಭವಿಷ್ಯದಲ್ಲಿ ಸಿಂದಗಿ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

ಕಾಂಗ್ರೆಸ್ ನವರು ಏನೂ ಕೆಲಸ ಮಾಡದ ಕಾರಣ ಹೇಳಲು ಏನೂ ವಿಷಯ ಇಲ್ಲದ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ ಪಕ್ಷದವರು ಅಧಿಕಾರ ಸಿಕ್ಕಾಗ ಸ್ವಾರ್ಥ ರಾಜಕಾರ ಮಾಡಿದ್ದೇ ಹೆಚ್ಚು ಎಂದು ದೂರಿದರು.

ಇದನ್ನೂ ಓದಿ: ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗನಂಜನಗೂಡು, ಕುಂದಗೋಳ ಉಪ ಚುನಾವಣೆಯಲ್ಲಿ ಗೋಣಿ ಚೀಲದಲ್ಲಿ ಹಣ ತಂದು ಹಂಚಿ ಗೆದ್ದಿದ್ದರು. ತಮ್ಮ ಅನುಭವವನ್ನೇ ಇದೀಗ ಕಾಂಗ್ರೆಸ್ ನಾಯಕರು ಗೋಣಿ ಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ ಎಂದು ಹಪಾಹಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಹಿಂದಿನ ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ ನಾಯಕರು ಸೋತ ಬಳಿಕ ಬಿಜೆಪಿ ಹಣಬಲ, ತೋಳಬಲ, ಅಧಿಕಾರ ಬಲದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಆರೋಪಿಸುತ್ತಿದ್ದರು.

ಆದರೆ ಸಿಂದಗಿ, ಹಾನಗಲ್ ಚುನಾವಣೆ ಪೂರ್ವದಲ್ಲೇ ಹಣಬಲ, ತೋಳ್ಬಲದ ಕುರಿತು ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕರು ಸೋಲುವ ಭೀತಿಯ ಹತಾಶ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಸಿ.ಸಿ.ಪಾಟೀಲ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇತರರು ರೋಡ ಶೋನಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

palaniswami

AIADMK; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ

prahlad-joshji

ಕೇಂದ್ರದಿಂದ ಅಕ್ಕಿ ಕೊಡಲು ಸಿದ್ಧವಿದ್ದರೂ ರಾಜ್ಯ ಸರಕಾರ ಖರೀದಿಸುತ್ತಿಲ್ಲ: ಪ್ರಹ್ಲಾದ ಜೋಶಿ

Land-Survey

ಹೈಕೋರ್ಟ್‌ ಗರಂ ಬೆನ್ನಲ್ಲೇ ಎಚ್‌ಡಿಕೆ, ಸಂಬಂಧಿಯ ಜಮೀನು ಸರ್ವೆ ಕಾರ್ಯ

yamuna-river

Editorial: ಯಮುನೆ ಪಾಲಿಗೆ ವರದಾನವಾಗಿ ಪರಿಣಮಿಸಿದ ರಾಜಕೀಯ ತಿಕ್ಕಾಟ

BJP Symbol

Delhi; ಫೆ.20ಕ್ಕೆ ಸಿಎಂ, ಸಚಿವರ ಪ್ರಮಾಣ, ನಾಳೆ ಸಿಎಂ ಆಯ್ಕೆ?

CTD-Fruad

Fruad: ಚಿತ್ರದುರ್ಗದ ವ್ಯಕ್ತಿಗೆ 34 ಲಕ್ಷ ರೂ. ವಂಚಿಸಿದ್ದ ಮೂವರ ಬಂಧನ

Siddaramaiah

ಇ-ಖಾತಾ ಸಮಸ್ಯೆ: ಇಂದು ಸಿಎಂ ವೀಡಿಯೋ ಸಂವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad-joshji

ಕೇಂದ್ರದಿಂದ ಅಕ್ಕಿ ಕೊಡಲು ಸಿದ್ಧವಿದ್ದರೂ ರಾಜ್ಯ ಸರಕಾರ ಖರೀದಿಸುತ್ತಿಲ್ಲ: ಪ್ರಹ್ಲಾದ ಜೋಶಿ

Land-Survey

ಹೈಕೋರ್ಟ್‌ ಗರಂ ಬೆನ್ನಲ್ಲೇ ಎಚ್‌ಡಿಕೆ, ಸಂಬಂಧಿಯ ಜಮೀನು ಸರ್ವೆ ಕಾರ್ಯ

Siddaramaiah

ಇ-ಖಾತಾ ಸಮಸ್ಯೆ: ಇಂದು ಸಿಎಂ ವೀಡಿಯೋ ಸಂವಾದ

Vinay-kulkarni1

Dharawad: ಜಲ ಜೀವನ್ ಮಿಷನ್‌ ಕಳಪೆ ಕಾಮಗಾರಿಗೆ ಗರಂ; ಕೆಟ್ಟ ಯೋಜನೆ ಎಂದ ವಿನಯ್ ಕುಲಕರ್ಣಿ

1-w-w-we

GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

palaniswami

AIADMK; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ

prahlad-joshji

ಕೇಂದ್ರದಿಂದ ಅಕ್ಕಿ ಕೊಡಲು ಸಿದ್ಧವಿದ್ದರೂ ರಾಜ್ಯ ಸರಕಾರ ಖರೀದಿಸುತ್ತಿಲ್ಲ: ಪ್ರಹ್ಲಾದ ಜೋಶಿ

Land-Survey

ಹೈಕೋರ್ಟ್‌ ಗರಂ ಬೆನ್ನಲ್ಲೇ ಎಚ್‌ಡಿಕೆ, ಸಂಬಂಧಿಯ ಜಮೀನು ಸರ್ವೆ ಕಾರ್ಯ

yamuna-river

Editorial: ಯಮುನೆ ಪಾಲಿಗೆ ವರದಾನವಾಗಿ ಪರಿಣಮಿಸಿದ ರಾಜಕೀಯ ತಿಕ್ಕಾಟ

BJP Symbol

Delhi; ಫೆ.20ಕ್ಕೆ ಸಿಎಂ, ಸಚಿವರ ಪ್ರಮಾಣ, ನಾಳೆ ಸಿಎಂ ಆಯ್ಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.