ಪಾಕ್ಗೆ ಬಿಡುವಿಲ್ಲ; ಇಂದು ಕಿವೀಸ್ ಕದನ
Team Udayavani, Oct 25, 2021, 5:40 AM IST
ಶಾರ್ಜಾ: ವಿಶ್ವಕಪ್ ಚರಿತ್ರೆಯಲ್ಲೇ ಭಾರತ ವನ್ನು ಮೊದಲ ಸಲ ಸೋಲಿಸಿದ ಮಹಾಸಂಭ್ರಮದಲ್ಲಿರುವ ಪಾಕಿಸ್ಥಾನಕ್ಕೆ ಈ ಖುಷಿಯನ್ನು ಆಚರಿಸಲಿಕ್ಕೂ ಸಮಯವಿಲ್ಲ. ಒಂದೇ ದಿನದ ವಿರಾಮದ ಬಳಿಕ ಅದು ಮತ್ತೊಂದು ಮಹತ್ವದ ಪಂದ್ಯಕ್ಕೆ ಅಣಿಯಾಗಬೇಕಿದೆ.
ಮಂಗಳವಾರ ರಾತ್ರಿ ಶಾರ್ಜಾದಲ್ಲಿ ಬ್ಲ್ಯಾಕ್ ಕ್ಯಾಪ್ಸ್ ನ್ಯೂಜಿಲ್ಯಾಂಡ್ ಸವಾಲಿಗೆ ಉತ್ತರಿಸಬೇಕಿದೆ. ಇದನ್ನು ಪಾಕ್ ಸೇಡಿನ ಪಂದ್ಯವಾಗಿ ಪರಿಗಣಿಸಬ ಹುದು. ಇತ್ತೀಚೆಗಷ್ಟೇ ಪಾಕಿಸ್ಥಾನಕ್ಕೆ ಆಗಮಿಸಿ, ಇನ್ನೇನು ಐತಿಹಾಸಿಕ ಸರಣಿ ಆರಂಭಗೊಳ್ಳಬೇಕೆನ್ನುವಾಗಲೇ ನ್ಯೂಜಿಲ್ಯಾಂಡ್ ತಂಡ ಭದ್ರತೆಯ ನೆಪವೊಡ್ಡಿ ತವರಿಗೆ ವಿಮಾನ ಏರಿತ್ತು. ಪಾಕ್ ಕ್ರಿಕೆಟ್ ಮಂಡಳಿಗೆ ಇದರಿಂದ ಭಾರೀ ಪ್ರಮಾಣದ ನಷ್ಟ ಸಂಭವಿಸಿತ್ತು. ಇದನ್ನು ಬಡ್ಡಿ ಸಮೇತ ತೀರಿಸಿಕೊಳ್ಳುವುದು ಬಾಬರ್ ಪಡೆಯ ಯೋಜನೆ ಆಗಿದ್ದರೆ ಅಚ್ಚರಿ ಇಲ್ಲ.
ಕಳೆದ ರಾತ್ರಿ ಭಾರತದ ವಿರುದ್ಧ ತೋರ್ಪಡಿಸಿದ ಶಿಸ್ತಿನ ಹಾಗೂ ಯೋಜನಾಬದ್ಧ ಆಟವನ್ನು ಗಮನಿಸಿದಾಗ ಪಾಕಿಸ್ಥಾನ ಯಾವ ತಂಡವನ್ನೂ ಬಗ್ಗುಬಡಿಯುವ ಜೋಶ್ನಲ್ಲಿರುವುದು ಸುಳ್ಳಲ್ಲ. ಆದರೆ ಭಾರತವನ್ನು ಮಣಿಸಿದೊಡನೆ ವಿಶ್ವಕಪ್ ಗೆದ್ದಾಯಿತು ಎಂಬ ರೀತಿ ವರ್ತಿಸಿದರೆ ಪಾಕ್ಗೆ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ನಾಯಕ ಬಾಬರ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಆನ್ಲೈನ್ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ
ವಿಲಿಯಮ್ಸನ್ ಫಿಟ್ನೆಸ್ ಚಿಂತೆ
ವಿಶ್ವಕಪ್ಗೆ ನ್ಯೂಜಿಲ್ಯಾಂಡ್ ದೊಡ್ಡ ಮಟ್ಟದಲ್ಲೇನೂ ತಯಾರಿ ನಡೆಸಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ಗಳೆರಡಕ್ಕೂ ಸೋತಿದೆ. ನಾಯಕ ಕೇನ್ ವಿಲಿಯಮ್ಸನ್ ಫಿಟ್ನೆಸ್ ಬಗ್ಗೆ ಸಾಕಷ್ಟು ಅನುಮಾನವಿದೆ. ಅವರು ಮೊಣಕೈ ನೋವಿನ ವಿರುದ್ಧಹೋರಾಡುತ್ತಿದ್ದಾರೆ. ಆಸ್ಟ್ರೇಲಿಯ ಎದುರಿನ ಅಭ್ಯಾಸ ಪಂದ್ಯದ ವೇಳೆ ಇದು ಕಾಡಿತ್ತು. ಇಂಗ್ಲೆಂಡ್ ಎದುರು ವಿಲಿಯಮ್ಸನ್ ಬ್ಯಾಟಿಂಗ್ ಮಾಡಿರಲಿಲ್ಲ. ಮೊದಲೇ ಸಾಮಾನ್ಯ ಮಟ್ಟದ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಕಿವೀಸ್ ಪಾಲಿಗೆ ಇದೊಂದು ಗಂಭೀರ ಸಮಸ್ಯೆಯೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.