ನ.4, 5: ಕರಾವಳಿಯಲ್ಲಿ ದೀಪಾವಳಿ ಆಚರಣೆ
Team Udayavani, Oct 29, 2021, 6:31 AM IST
ಉಡುಪಿ: ಮುಂದಿನ ತಿಂಗಳ ಮೊದಲ ವಾರ ದೀಪಾವಳಿ ಹಬ್ಬ ಬರುತ್ತಿದೆ. ನಾಡಿನಾದ್ಯಂತ ನ. 3ರ ಸಂಜೆ ನೀರು ತುಂಬಿ ನ. 4ರ ಬೆಳಗ್ಗೆ ಚಂದ್ರೋದಯದ ವೇಳೆ ತೈಲಭ್ಯಂಗ (ಎಣ್ಣೆ ಹಚ್ಚಿ ಸ್ನಾನ) ಮಾಡಲಾಗುತ್ತದೆ.
ಚಂದ್ರೋದಯದ ಸಮಯ ಉಡುಪಿ, ಮಂಗಳೂರು, ಕಾಸರಗೋಡಿನಲ್ಲಿ ಬೆಳಗ್ಗೆ 5.39 ಗಂಟೆ, ಪುತ್ತೂರು 5.38, ಶಿವಮೊಗ್ಗ, ಸುಳ್ಯ, ಬೆಳ್ತಂಗಡಿಯಲ್ಲಿ 5.37, ಬೆಂಗಳೂರು 5.28, ಮೈಸೂರು 5.31 ಗಂಟೆ. ನ. 4ರ ಸಂಜೆ ದೀಪ ಇಡುವುದು, ಬಲೀಂದ್ರ ಪೂಜೆ ನಡೆಯಲಿದೆ.
ನ. 5ರ ಬೆಳಗ್ಗೆ ಗೋಪೂಜೆ ನಡೆಯಲಿದೆ. ಮೂಲ್ಕಿ ಶಾಂಭವಿ ನದಿ ದಕ್ಷಿಣದಲ್ಲಿ ನ. 5ರ ಸಂಜೆ ದೀಪ ಇಡುವುದು, ಬಲೀಂದ್ರ ಪೂಜೆ ನಡೆಯುವುದು ಸಂಪ್ರದಾಯ. ಧನ್ವಂತರಿ ಜಯಂತಿಯನ್ನು ನ. 2ರಂದು ಆಚರಿಸಲಾಗುತ್ತದೆ. ನ. 5ರಿಂದ ತುಳಸೀ ಪೂಜೆ ಆರಂಭವಾಗುತ್ತದೆ.
ಶಾಂಭವೀ ನದಿ ದಕ್ಷಿಣದಲ್ಲಿರುವ ಬಪ್ಪನಾಡು, ಕಟೀಲು ಮೊದಲಾದ ದೇವಸ್ಥಾನಗಳಲ್ಲಿ ನ. 4ರ ಸಂಜೆಯೇ ಬಲೀಂದ್ರ ಪೂಜೆ ನಡೆಯುತ್ತದೆ. ದೇವಸ್ಥಾನಗಳಲ್ಲಿ ಬಲಿ ಹೊರಡುವುದು ಇದೇ ದಿನ. ಇಲ್ಲಿ ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ದಿನವೇ ಬಲೀಂದ್ರ ಪೂಜೆ ನಡೆಯುತ್ತದೆ. ಆದರೆ ಊರಿನಲ್ಲಿ ಗದ್ದೆಗೆ ದೀಪ ಇಡುವುದು ಮಾತ್ರ ನ. 5ರ ಸಂಜೆ. ನ. 4ರ ಸಂಜೆ ಲಕ್ಷ್ಮೀ ಪೂಜೆ ನಡೆದರೆ, ನ. 5ರ ಸಂಜೆ ಕೆಲವೆಡೆಗಳಲ್ಲಿ ಅಂಗಡಿ ಪೂಜೆ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.