‘ಮತ್ತೆ ಬರುತ್ತೇನೆಂದ ಅಪ್ಪು ಬರಲೇ ಇಲ್ಲ..’ ಕಣ್ಣೀರಾದ ಕಲಬುರಗಿ ಜನತೆ!
Team Udayavani, Oct 29, 2021, 3:31 PM IST
ಕಲಬುರಗಿ: ಮುಂದಿನ ಹೊಸ ಸಿನೇಮಾದ ಚಿತ್ರೀಕರಣ ಕಲಬುರಗಿಯಲ್ಲಿ ಮಾಡುವುದಾಗಿ ಈ ಹಿಂದೆ ನಟ ಪುನೀತ್ ರಾಜಕುಮಾರ ಹೇಳಿದ್ದರು. ಆದರೆ ಇದೀಗ ಅಪ್ಪು ಮರಳಿ ಬಾರದ ಊರಿಗೆ ತೆರಳಿದ್ದಾರೆ!
ಕಳೆದ ಮಾರ್ಚ್ 21ರಂದು ಯುವರತ್ನ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆಯಲ್ಲಿ ಮುಂದಿನ ಚಿತ್ರದ ಚಿತ್ರೀಕರಣ ಬಿಸಿಲೂರು ಕಲಬುರಗಿಯಲ್ಲಿ ನಡೆಸುವುದಾಗಿ ಹೇಳಿದ್ದರು. ಕಲಬುರಗಿ ಜನ ಇಂದಲ್ಲ ನಾಳೆ ಕಲಬುರಗಿ ಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವರು ಎಂದು ಜನ ನಿರೀಕ್ಷೆ ಹೊಂದಿದ್ದರು. ಆದರೆ ವಿಧಿಯಾಟ ಅವಕಾಶ ನೀಡದಂತೆ ಮಾಡಿದೆ.
ಇದನ್ನೂ ಓದಿ:ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು
ಶುಕ್ರವಾರ ನಿಧನರಾದ ಕನ್ನಡ ನಾಡಿನ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್ ಕಲಬುರಗಿಯೊಂದಿಗೆ ಅನ್ಯೋನ್ಯತೆ ಹಾಗೂ ಪ್ರೀತಿಯನ್ನು ಹೊಂದಿದ್ದರು. ಈಚೆಗಿನ ಸಂದರ್ಶನವೊಂದರಲ್ಲಿ ಕಲಬುರಗಿ ಜನ ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ತೋರಿದ 12 ಜೆಸಿಬಿಗಳ ಮೂಲಕ ಪುಷ್ಪಾರ್ಚನೆ ಮಾಡಿರುವುದು ಹಾಗೂ ಊಟದ ಕುರಿತಾಗಿ ಪ್ರಸ್ತಾಪಿಸಿರುವುದೇ ಇದಕ್ಕೆ ಸಾಕ್ಷಿ.
ಪುನೀತ್ ರಾಜಕುಮಾರ ಕಳೆದುಕೊಂಡಿರುವುದು ಕಲಬುರಗಿಯಲ್ಲೂ ದು;ಖದ ಛಾಯೆ ಎಲ್ಲೆಡೆ ಆಚರಿಸಿದೆ. ಪುನೀತ್ ರಾಜಕುಮಾರ ಅವರ ಕಲಬುರಗಿ ಯಲ್ಲಿನ ಚಿತ್ರೀಕರಣ ನೋಡಬೇಕೆಂದು ಲಕ್ಷಾಂತರ ಕಣ್ಣುಗಳು ತದೇಕ ಚಿತ್ತದಿಂದ ಕಾಯುತ್ತಿದ್ದವು. ಈಗ ಈ ಕಣ್ಣುಗಳಲ್ಲಿ ಕಣ್ಣೀರು ಸುರಿಯಲಾರಂಭಿಸಿರುವುದು ಒಂದು ವಿಧಿಯೇ ಸರಿ.
ಮಾರ್ಚ್ 21ರಂದು ಇಲ್ಲಿನ ಐತಿಹಾಸಿಕ ಶರಣಬಸವೇಶ್ವರರ ದರ್ಶನವನ್ನು ತಂಡದೊಂದಿಗೆ ಪಡೆದಿದ್ದ ಪುನೀತ್ ರಾಜಕುಮಾರ ಮುಂದಿನ ಸಲ ಕಲಬುರಗಿಗೆ ಬಂದಾಗ ದೇವಲ ಗಾಣಗಾಪುರ ದತ್ತಾತ್ರೇಯ ದರ್ಶನ ಸಹ ಪಡೆಯುವುದಾಗಿ ಹೇಳಿದ್ದರು.
ಇದನ್ನೂ ಓದಿ:ಮಗುವಾಗಿ ಚಿತ್ರರಂಗಕ್ಕೆ ಕಾಲಿಟ್ಟ ”ಅಪ್ಪು” ಅರಸಾಗಿ ಮೆರೆದಿದ್ದರು!
ಅಭಿಮಾನಿಗಳು 12 ಜೆಸಿಬಿಗಳ ಮೂಲಕ ಪುಷ್ಪಾರ್ಚನೆ ಮಾಡಿದ್ದನ್ನು ಕಂಡು ಪುಳಕಿತರಾಗಿದ್ದ ಪುನೀತ್ ರಾಜ್ಕುಮಾರ್ ಕಲಬುರಗಿ ಜಿಲ್ಲೆ ಹಾಗೂ ಅಭಿಮಾನಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದೇನೆ ಎಂದು ಹೇಳಿದ್ದರು. ಇದಲ್ಲದೆ ಈಚೆಗೆ ಸಂದರ್ಶನವೊಂದರಲ್ಲಿ ಕಲಬುರಗಿ ಜನರ ಪ್ರೀತಿ ಹಾಗೂ ಊಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಗುತ್ತೇದಾರ ಮನೆಯಲ್ಲಿ ಊಟ ಸವಿದಿದ್ದ ಅಪ್ಪು: ಯುವರತ್ನ ಚಿತ್ರದ ಪ್ರಚಾರ ಮುಗಿದ ನಂತರ ನಟ ಅಪ್ಪು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಮನೆಯಲ್ಲಿ ಸೇಂಗಾದ ಹೊಳಿಗೆ, ರೊಟ್ಟಿ ಹಾಗೂ ಪುಂಡಿಪಲ್ಯೆ ಸವಿದಿದ್ದರು. ಊಟದ ಬಗ್ಗೆ ಅವಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಪುನೀತ್ ರಾಜಕುಮಾರ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದರು.
ಈಗ ಅಪ್ಪು ಬಾರದ ದಾರಿಗೆ ಪ್ರಯಾಣ ಬೆಳೆಸಿದ್ದಾರೆ. ಇದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎನ್ನುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…
Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.