ಆಟೋ ಹುಲಗಪ್ಪನ ರಾಜ್ಯೋತ್ಸವ ಸಂಭ್ರಮ
Team Udayavani, Nov 1, 2021, 3:54 PM IST
ಹೊಸಪೇಟೆ: ಕನ್ನಡ ರಾಜ್ಯೋತ್ಸವ ಆಚರಣೆ ಬಂತ್ತೆಂದರೆ ನೂತನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಆಟೋ ಚಾಲಕರೊಬ್ಬರಿಗೆ ಸಡಗರ-ಸಂಭ್ರಮ.
ಹೌದು! ನಗರದ ಆಟೋಚಾಲಕ ಗುಜ್ಜಲ ಹುಲಗಪ್ಪ ಎಂಬ ಕನ್ನಡಾಭಿಮಾನಿಗೆ ಕನ್ನಡ ಬಾವುಟ ಹಾರಿಸುವುದು, ಕನ್ನಡ ಗೀತೆಗಳನ್ನು ಕೇಳಿಸುವುದು ಎಂದರೆ ಎಲ್ಲಿಲ್ಲದ ಖುಷಿ.
ಕನ್ನಡ ರಾಜ್ಯೋತ್ಸವ ದಿನ ಅವರು ತಮ್ಮ ಆಟೋ ತುಂಬೆಲ್ಲ ಕನ್ನಡ ಧ್ವಜ ರಾರಾಜಿಸುವಂತೆಅಲಂಕಾರ ಮಾಡುವುದು, ಜತೆಗೆ ಧ್ವನಿವರ್ಧಕದ ಮೂಲಕ ಕನ್ನಡ ಅಭಿಮಾನ ಸಾರುವ ಖ್ಯಾತ ಗಾಯಕರ ಕನ್ನಡ ಗೀತೆಗಳನ್ನು ಜನರಿಗೆ ಕೇಳಿಸುವುದು, ಇಡೀ ದಿನ ನಗರ ಪ್ರದಕ್ಷಣೆ ಮಾಡಿ, ಕನ್ನಡಾಭಿಮಾನ ಮೆರೆಯುತ್ತಾರೆ. ಕುವೆಂಪು, ದ.ರಾ. ಬೇಂದ್ರೆ, ಡಾ| ರಾಜಕುಮಾರ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಮಹಾತ್ಮ ಗಾಂಧೀ ಜಿ, ಸುಭಾಷ್ ಚಂದ್ರಭೋಷ್ ಮುಂತಾದ ಮಹನೀಯರ ಭಾವಚಿತ್ರಗಳನ್ನುಆಟೋದಲ್ಲಿ ಅಳವಡಿಸಿ ಖುಷಿ ಪಡುತ್ತಾರೆ.
ಕಳೆದ 25 ವರ್ಷಗಳಿಂದಲೂ ಕನ್ನಡದ ಮೇಲಿನ ಪ್ರೀತಿಯನ್ನು ಈ ಮೂಲಕ ವ್ಯಕ್ತಪಡಿಸುತ್ತಿರುವ ಆಟೋಚಾಲಕ ಗುಜ್ಜಲ ಹುಲಗಪ್ಪನವರು ಮುಂದಿನ ವರ್ಷ ತಮ್ಮಆಟೋವನ್ನು ಕನ್ನಡ ಧ್ವಜದಿಂದ ಸಿಂಗರಿಸಿಕೊಂಡು ರಾಜಧಾನಿ ಬೆಂಗಳೂರಿನಿಂದ ಹೊಸಪೇಟೆವರೆಗೆಆಗಮಿಸಬೇಕು. ದಾರಿಯುದಕ್ಕೂ ಬರುವ ಗ್ರಾಮ, ಪಟ್ಟಣಗಳಲ್ಲಿ ಕನ್ನಡ ಪ್ರೇಮವನ್ನುಹೊರ ಹಾಕಬೇಕು ಎಂಬುದು ಬಹುದಿನದ ಆಸೆಯಾಗಿದೆ.
ಕನ್ನಡ ರಾಜ್ಯೋತ್ಸವ ಆಚರಣೆ ಮಾತ್ರವಲ್ಲದೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಲ್ಲಿ ಕೂಡ ಅವರ ಆಟೋದ ಮೇಲೆ ತ್ರೀವರ್ಣ ಧ್ವಜ ಹಾರಾಡುತ್ತಿರುತ್ತದೆ. ನಾಡ ದೇವತೆ ಭುವನೇಶ್ವರಿ ದೇವಿ ಹಾಗೂ ಭಾರತಮಾತೆ ಭಾವಚಿತ್ರ ಹೊಂದಿರುವಧ್ವಜ ಹಾರಿಸುವುದು, ದೇಶಭಕ್ತಿ ಗೀತೆಗಳನ್ನು ಕೇಳಿಸುವುದು, ನಗರ ಸುತ್ತುವುದು ಇವರ ಪ್ರತಿವರ್ಷದ ವಾಡಿಕೆ. ಗೆಳೆಯರೊಂದಿಗೆ ಸೇರಿಕೊಂಡು ನಗರದ ಜೋಳದ ರಾಶಿ ಗುಡ್ಡದ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮ ಪಡುತ್ತಾರೆ. ಪ್ರತಿವರ್ಷ ನ.1, ಆ.15 ಹಾಗೂ ಜ. 26ರಂದು ನಗರದ ಮೃತ್ಯುಂಜಯ ನಗರದ 9 ನೇ ಕ್ರಾಸ್ನ ಆಟೋ ಸ್ಟಾಂಡ್ನಲ್ಲಿಧ್ವಜಾರೋಹಣ ನೆರವೇರಿಸಿ ದೇಶಾಭಿಮಾನ ತೋರುತ್ತಾರೆ.
ಉಚಿತ ಸೇವೆ: ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಗರ್ಭಿಣಿ ಹಾಗೂ ವೃದ್ಧರು ಹಾಗೂ ಮಕ್ಕಳಿಗೆ ಹಣ ಪಡೆಯದೇ ತಮ್ಮ ಆಟೋದಲ್ಲಿ ಉಚಿತ ಸೇವೆ ನೀಡುತ್ತಾರೆ.ನ. 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಹುಲಗಪ್ಪನವರುತಮ್ಮ ಆಟೋವನ್ನು ಈ ವರ್ಷ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡುವ ಮೂಲಕ ಕನ್ನಡಪ್ರೇಮವನ್ನು ಮೆರೆಯಬೇಕು. ಈ ಮೂಲಕ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದವಿಶೇಷ ಶುಭಾಶಯಗಳನ್ನು ಪರಸ್ಪರಹಂಚಿಕೊಂಡು ನಾಡಿಗೆ ಮಾದರಿಯಾಗಬೇಕು ಎಂಬುದು ಇವರ ಸಂಕಲ್ಪ.
1998ರಿಂದ ನಾನು ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ನನ್ನ ಆಟೋಕ್ಕೆ ಕನ್ನಡ ಬಾವುಟ ಹಾಗೂ ರಾಷ್ಟ್ರಧ್ವಜದಿಂದ ಸಿಂಗಾರ ಮಾಡುತ್ತೇನೆ. ಜತೆಗೆ ನಾಡಿನ ಖ್ಯಾತ ಗಾಯಕರ ಕನ್ನಡ ಅಭಿಮಾನ ಸೂಸುವ ಗೀತೆ ಹಾಗೂ ದೇಶಭಕ್ತಿಗೀತೆಗಳನ್ನು ಧ್ವನಿವರ್ಧಕದ ಮೂಲಕ ದಾರಿಯುದ್ದಕ್ಕೂ ಕೇಳಿಸುತ್ತೇನೆ. ಈ ಮೂಲಕ ದೇಶಾಭಿಮಾನ, ಕನ್ನಡಾಭಿಮಾನ ಮೆರೆಯುತ್ತೇನೆ.– ಗುಜ್ಜಲ ಹುಲಗಪ್ಪ ಆಟೋಚಾಲಕ, ಹೊಸಪೇಟೆ
-ಪಿ. ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Bellary; ಕಳಪೆ ಆಹಾರ ಪೂರೈಕೆ; ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ
Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್ ದೂರು?
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Ballari: ಕೊನೆಗೂ ನಟ ದರ್ಶನ್ ಸೆಲ್ಗೆ ಟಿವಿ; ಡಿಡಿ ಚಾನೆಲ್ ಮಾತ್ರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ: ಲೋಕಾಯುಕ್ತದಿಂದ ಬಿಎಸ್ವೈ ವಿಚಾರಣೆ
Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ
Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್ ಸೀಮಿತ: ಆರ್. ಅಶೋಕ್
Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ
Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.