ದೀಪಾವಳಿ ಸಡಗರ: ಸಾಂಪ್ರದಾಯಿಕ ಗೂಡುದೀಪಗಳ ಮೆರುಗು


Team Udayavani, Nov 3, 2021, 6:15 AM IST

ದೀಪಾವಳಿ ಸಡಗರ: ಸಾಂಪ್ರದಾಯಿಕ ಗೂಡುದೀಪಗಳ ಮೆರುಗು

ಸಾಂಪ್ರದಾಯಿಕ ಗೂಡುದೀಪವೆಂದ ಮೇಲೆ ಅದರಲ್ಲಿ ಇರಬೇಕಾದ ದೀಪವೂ ಸಾಂಪ್ರದಾಯಿಕ ಆಗಿರಬೇಕಲ್ಲವೆ? ಈಗಂತೂ ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದೆ. ಹೀಗಾಗಿ ಗೂಡುದೀಪಗಳಲ್ಲಿ ಹಣತೆಯಲ್ಲಿ ದೀಪವನ್ನು ಉರಿಸಿದರೆ ಸಾಂಪ್ರದಾಯಿಕ ಗೂಡುದೀಪವೆಂಬ ಹೆಸರು ಅನ್ವರ್ಥವಾಗುತ್ತದೆ.

ಉಡುಪಿ: ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ಬುಧವಾರದಿಂದ ಸಡಗರ ಎಲ್ಲರ ಮನೆಗಳಲ್ಲಿ ಮನೆಮಾಡಲಿದೆ.
ಬೆಳಕಿನ ಹಬ್ಬಕ್ಕೆ ಮಾರುಕಟ್ಟೆ ತುಂಬಾ ಗೂಡುದೀಪಗಳು ಕಾಣಸಿಗುತ್ತಿದೆ. ಈ ಬಾರಿಯೂ ಗೂಡುದೀಪಗಳು ಮೈಕೊಡವಿಕೊಂಡು ಹೊಸತನಕ್ಕೆ ಅಣಿಯಾಗಿವೆ. ಅದನ್ನು ನೋಡುವುದೇ ಚೆಂದ. ಅಲ್ಲೊಂದು ಬಣ್ಣ, ಇಲ್ಲೊಂದುಬಣ್ಣ ಸೇರಿಸಿ, ಮೇಲಿಂದ ಮುತ್ತುಗಳನ್ನೂ ಪೋಣಿಸಿ ಚೆಂದಾಗುವ ಅವುಗಳಿಗೆ ದೀಪದ ಮೆರುಗು ಸಿಕ್ಕರಂತೂ ಕಣ್ಣುಗಳಿಗೆ ಹಬ್ಬ ನೀಡುತ್ತವೆ.

ಚೀನ ಗೂಡುದೀಪಕ್ಕೆ ಬೇಡಿಕೆ ಕುಸಿತ!
ಸಿಂಥೆಟಿಕ್‌ ಬಟ್ಟೆಯಿಂದ ತಯಾರಿಸಿದ ಚೀನದ ಬಣ್ಣ -ಬಣ್ಣದ ವಿವಿಧ ವಿನ್ಯಾಸಗಳಲ್ಲಿ ಸಿಗುವ ಗೂಡುದೀಪಗಳ ಸಂಖ್ಯೆ ಈ ಬಾರಿ ಕಡಿಮೆ ಇದೆ. ಸ್ಥಳೀಯವಾಗಿ ಮಾಡಲ್ಪಟ್ಟ ಗೂಡು ದೀಪಗಳು ಹೆಚ್ಚಿನ ಅಂಗಡಿಯಲ್ಲಿ ಕಾಣ ಸಿಗುತ್ತಿದೆ. ನಗರದ ಮೂಲೆ ಮೂಲೆಗಳಲ್ಲಿ ಸ್ಥಳೀಯರು ಗೂಡುದೀಪಗಳನ್ನು ನಿರ್ಮಿಸಿ, ಅಂಗಡಿಗಳಿಗೆ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.

200ರಿಂದ 650 ರೂ.
ದೀಪಾವಳಿ ಹಬ್ಬಕ್ಕೆ ಈ ಬಾರಿಯ ಗೂಡುದೀಪಗಳು ತುಸು ದುಬಾರಿ ಎನ್ನಿಸಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಲ್ಪಟ್ಟ ಗೂಡದೀಪಗಳು 250 ರೂ.ನಿಂದ 1,000 ರೂ. ಬೆಲೆ ನಿಗದಿಪಡಿಸಲಾಗಿದೆ. ಇವುಗಳು ಒಂದೊಂದೂ ವಿಭಿನ್ನ ವಿನ್ಯಾಸದಿಂದ ಮನ ಸೆಳೆಯುತ್ತವೆ. ಕಸೂತಿ, ಸ್ಟೋನ್‌ ವರ್ಕ್‌, ಕುಂದನ್‌ ವಿಶಿಷ್ಟ ಕುಸುರಿಗಳು ಗೂಡುದೀಪಗಳಿಗೆ ಮತ್ತಷ್ಟು ಮೆರುಗು ನೀಡುವಂತಿವೆ.

ಗೂಡುದೀಪ ತಯಾರಿಕೆ
ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿ, ಕೆಎಂ ಮಾರ್ಗ, ನಗರದ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳ ಹಾಗೂ ಅಂಗಡಿ ಮಾಲ್‌ಗ‌ಳಲ್ಲಿ ಗೂಡು ದೀಪಗಳ ಖರೀದಿ ಜೋರಾಗಿದೆ. ಇನ್ನೊಂದು ಕಡೆಯಲ್ಲಿ ಮನೆಯಲ್ಲಿ ಗೂಡುದೀಪಗಳ ತಯಾರಿಗೆ ಅಗತ್ಯವಿರುವ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಮಕ್ಕಳು ಹಾಗೂ ಯುವ ಜನರಲ್ಲಿ ಗೂಡುದೀಪ ನಿರ್ಮಿಸಲು ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಗೂಡುದೀಪದೊಳಗೆ ಬಲ್ಬ್ ತೂಗುಹಾಕುವ ಮುನ್ನ…
– ಬಲ್ಬ್ ಸ್ಥಿರವಾಗಿರಬೇಕು.
– ವಿದ್ಯುತ್‌ ಸಂಪರ್ಕ ಕಲ್ಪಿಸುವ ವೈರ್‌ ನೇತಾಡಬಾರದು.
– ಹೆಚ್ಚು ಗಾಳಿ ಬೀಸುವ ಕಡೆ ಆಕಾಶಬುಟ್ಟಿ ತೂಗಿಹಾಕಬೇಡಿ.
– ಬ ಲ್ಬ್ ಬಣ್ಣದ ಕಾಗದಕ್ಕೆ ತಾಗದಂತೆ ಎಚ್ಚರ ವಹಿಸಿ.
– ಮಕ್ಕಳಿಗೆ ಮೊದಲೇಸುರಕ್ಷಾ ನಿಯಮ ತಿಳಿಸಿರಿ.

ಬೆಲೆ ಏರಿಕೆ
ಹಿಂದೆ 100 ರೂ.ಗೆ ಸಿಗುತ್ತಿದ್ದ ಗೂಡುದೀಪಗಳ ಬೆಲೆ ಈಗ 200 ರೂ.ಗೆ ಏರಿಕೆಯಾಗಿದೆ. ಮಕ್ಕಳು ಅಂಗಡಿ ಗೂಡುದೀಪಗಳ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೂಡುದೀಪ ನಿರ್ಮಾಣಕ್ಕೆ ಅಗತ್ಯವಿರುವ ವಸ್ತು ಖರೀದಿಸಲಾಗಿದೆ. ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಗೂಡುದೀಪಗಳನ್ನು ನಿರ್ಮಿಸುತ್ತೇವೆ.
-ಶೈಲಜಾ ಆರ್‌.ಎಸ್‌., ಹಿರಿಯಡಕ

ಖರೀದಿ ತುಸು ಜೋರು
ಈ ಬಾರಿ ಗೂಡುದೀಪಗಳ ಖರೀದಿ ತುಸು ಜೋರಾಗಿದೆ. ಜನರು ಹೆಚ್ಚು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳನ್ನು ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗೂಡುದೀಪಗಳ ಬೆಲೆ ಏರಿಕೆಯಾಗಿದೆ. ಗ್ರಾಹಕರು ಮಾರುಕಟ್ಟೆಯ ಬೆಲೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ವೆಂಕಟೇಶ್‌, ಗೂಡುದೀಪದ ವ್ಯಾಪಾರಿ

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.