ಬದಲಾವಣೆಗೆ ತಕ್ಕಂತೆ ಸ್ವಂತಿಕೆ ಉಳಿಸಿಕೊಳ್ಳಿ: ಕಾಗೋಡು
Team Udayavani, Nov 4, 2021, 6:41 PM IST
ಸಾಗರ: ನೆಲ ಮೂಲದ ಕಲೆ,ಸಂಸ್ಕೃತಿಗಳಿಂದ ನಾವು ದೂರವಾಗುತ್ತಿರುವ ಬಗ್ಗೆ ಆತ್ಮಾವಲೋಕನಮಾಡಿಕೊಳ್ಳಬೇಕಿದೆ. ಬದಲಾದಪರಿಸ್ಥಿತಿಯಲ್ಲಿ ಕರಕುಶಲ ನಮ್ಮ ಮೂಲಕಸುಬುಗಳನ್ನು ಮರೆತಿರುವುದು ಅತ್ಯಂತ ನೋವಿನ ಸಂಗತಿ.ಬದಲಾವಣೆಗೆ ತಕ್ಕಂತೆ ನಮ್ಮತನವನ್ನುಉಳಿಸಿಕೊಳ್ಳುವ ಮಾರ್ಗಗಳನ್ನು ನಾವುಹುಡುಕಿಕೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಹೆಗ್ಗೊàಡು ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿಆಶ್ರಮದಲ್ಲಿ ಚರಕ ಸಂಸ್ಥೆಯ ವಿನ್ಯಾಸಕೇಂದ್ರ ಏರ್ಪಡಿಸಿದ್ದ ತರಬೇತಿಕಾರ್ಯಾಗಾರದಲ್ಲಿ ಮಾತನಾಡಿದಅವರು, ಮೂಲ ಕಸುಬುಗಳನ್ನುಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರಕ ಸಂಸ್ಥೆಕೆಲಸ ಗಮನಾರ್ಹ. ಈ ನಿಟ್ಟಿನಲ್ಲಿಸಮಾಜ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದರೂಅದನ್ನು ಲೆಕ್ಕಿಸದೆ ಸಮಾಜಕ್ಕೆ ಹೊಸದಾರಿ ತೋರುವ ಕಾಯಕವನ್ನು ಚರಕಮಾಡುತ್ತಿದೆ ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿದಟೈಟಾನ್ ಸಂಸ್ಥೆ ಅ ಧಿಕಾರಿ ಶ್ರೀಧರ್ ಎನ್.ಎ., ಸುಸ್ಥಿರ, ಪರಿಸ್ನೇಹಿ ಉತ್ಪನ್ನಗಳಿಗೆಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿಬೇಡಿಕೆ ಹೆಚ್ಚುತ್ತಿದೆ. ಒಂದು ಉತ್ಪನ್ನಎಲ್ಲಿಂದ ಬಂದಿದೆ, ಯಾರುತಯಾರಿಸಿದ್ದಾರೆ, ಯಾವ ವಿಧಾನದಲ್ಲಿತಯಾರಿಸಲಾಗಿದೆ ಎಂಬುದನ್ನುವಿಚಾರಿಸಿ ನಂತರ ಅದನ್ನು ಖರೀದಿಸುವಪ್ರವೃತ್ತಿ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಚರಕ ಸಂಸ್ಥೆಯ ಪ್ರಸನ್ನ, ಕೈಮಗ್ಗಹಾಗೂ ಇತರ ಕರಕುಶಲ ಕಲೆಗಳ ಸುಸ್ಥಿರಪ್ರಕೃತಿಗೆ ಹತ್ತಿರವಾದ ಪ್ರಕ್ರಿಯೆಗಳನ್ನುಪುನರುಜ್ಜೀವನಗೊಳಿಸುವುದು ವಿನ್ಯಾಸಕೇಂದ್ರದ ಉದ್ದೇಶವಾಗಿದೆ. ಆಧುನಿಕತಂತ್ರಜ್ಞಾನವನ್ನು ಸಂಪೂರ್ಣವಾಗಿತಿರಸ್ಕರಿಸದೆ ಪಾರಂಪರಿಕ ತಂತ್ರಜ್ಞಾನಕ್ಕೆಆದ್ಯತೆ ನೀಡುತ್ತ ಕೆಲಸ ಮಾಡುವಉದ್ದೇಶವನ್ನು ಈ ಕೇಂದ್ರ ಹೊಂದಿದೆಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ
Nervous Disease: ಕರಾವಳಿಯಲ್ಲೂ ಬ್ರೈನ್ ಹೆಲ್ತ್ ಕ್ಲಿನಿಕ್ ಕಾರ್ಯಾರಂಭ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್ ಆಧಾರಿತ ಹಾಜರಾತಿ?
Kundapura: ಮುಳುಗುತ್ತಿದ್ದ ಬೋಟ್ ರಕ್ಷಣೆ: 6 ಮೀನುಗಾರರು ಪಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.