ನೋವಿನ ಕಥೆ; ಪತ್ನಿ ಚಿತೆ ಉರಿಯುವಾಗಲೇ ಪದ್ಮಶ್ರೀ ಸ್ವೀಕಾರ
ಕೇರಳ ಲೇಖಕ ಬಾಲನ್ ಪುಥೇರಿಯವರ ನೋವಿನ ಕಥೆ
Team Udayavani, Nov 11, 2021, 11:00 AM IST
ನವದೆಹಲಿ: ಅತ್ತ, ದೂರದ ದೆಹಲಿಯಲ್ಲಿ ಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ, ಅದೇ ಹೊತ್ತಿಗೆ ಸರಿಯಾಗಿ, ಕೇರಳದಲ್ಲಿ ಕ್ಯಾನ್ಸರ್ನಿಂದ ಸಾವಿಗೀಡಾದ ಪತ್ನಿಯ ಅಂತ್ಯಸಂಸ್ಕಾರ!
ಒಂದು ಜೀವನದ ಉತ್ತುಂಗದ ಖುಷಿ, ಮತ್ತೊಂದು ಹೃದಯ ವಿದ್ರಾವಕ ದುಃಖ. ಇವೆರಡನ್ನೂ ಏಕಕಾಲದಲ್ಲಿ ಅನುಭವಿಸಿದ ಸ್ಥಿತಿ ಕೇರಳದ ಲೇಖಕರಾದ ಬಾಲನ್ ಪುಥೇರಿಯವರದ್ದು.
ಕಣ್ಣಿನ ದೃಷ್ಟಿ ಇರದ ಬಾಲನ್ ನೂರಾರು ಪುಸ್ತಕಗಳನ್ನು ಬರೆದಿದ್ದು, ಅವರಿಗೆ ಅವರ ಪತ್ನಿ ಶಾಂತಾ ಬೆನ್ನೆಲುಬಾಗಿದ್ದರು. ಅವರ ಜೊತೆಯಲ್ಲೇ ನವದೆಹಲಿಗೆ ಬಂದು ಪದ್ಮಶ್ರೀ ಸ್ವೀಕರಿಸಬೇಕೆಂಬ ಕನಸು ಬಾಲನ್ ಅವರಿಗಿತ್ತಂತೆ. ಆದರೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಾಂತಾ, ಆಸ್ಪತ್ರೆಗೆ ಸೇರಿದ್ದರಿಂದ ದೆಹಲಿಯಲ್ಲಿ ಬಾಲನ್ ಅವರು ಪ್ರಶಸ್ತಿ ಸ್ವೀಕರಿಸಲು ಕೆಲ ಸಮಯವಿದ್ದಾಗ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಲವ್ಲಿನಾರನ್ನು ನೇರವಾಗಿ ವಿಶ್ವಕೂಟಕ್ಕೆ ಆಯ್ಕೆ ಮಾಡಿದ್ದೇಕೆ?
ಅಷ್ಟರಲ್ಲಾಗಲೇ ರಾಷ್ಟ್ರಪತಿ ಭವನದಲ್ಲಿದ್ದ ಬಾಲನ್ ಪ್ರಶಸ್ತಿ ಪಡೆದೇ ಕೇರಳಕ್ಕೆ ವಾಪಸಾಗಲು ನಿರ್ಧರಿಸಿದ್ದಾರೆ.ಭಾರವಾದ ಹೃದಯದಿಂದ ನಡುಗುವ ಕೈಯ್ಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಅದೇ ಸಮಯಕ್ಕೆ ಸರಿಯಾಗಿ ಮಲಪ್ಪುರಂನ ಕೊಂಡೊಟ್ಟಿಯಲ್ಲಿ ಪತ್ನಿಯ ಚಿತೆಗೆ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇತ್ತ ಚಿತೆ ಉರಿಯುತ್ತಿದ್ದಾಗಲೇ ಅತ್ತ ಅವರು ಪ್ರಶಸ್ತಿ ಸ್ವೀಕರಿಸುವಂತಾಗಿದ್ದು ದುರ್ದೈವದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.