ತಾಕತ್ತಿದ್ದರೆ ರಫೇಲ್ ಹಗರಣದ ಸಮಗ್ರ ತನಿಖೆ ನಡೆಸಿ: ಕೇಂದ್ರಕ್ಕೆ ಅಲ್ಕಾ ಸವಾಲು
Team Udayavani, Nov 12, 2021, 12:09 PM IST
ಪಣಜಿ: ಕೇಂದ್ರ ಸರಕಾರವು ತಾಕತ್ತಿದ್ದರೆ ರಫೇಲ್ ಹಗರಣದ ಸಮಗ್ರ ತನಿಖೆಯನ್ನು ಸಂಯುಕ್ತ ಸಂಸದೀಯ ಸಮಿತಿಯ ಮೂಲಕ ನಡೆಸಬೇಕು ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಸವಾಲು ಹಾಕಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರವು ರಫೇಲ್ ಯುದ್ಧ ವಿಮಾನ ಖರೀದಿಯ ಕರಾರು ಮಾಡಿಕೊಳ್ಳುವ ಸಂದರ್ಭದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆಸಿದ್ದು, ಒಂದಾದ ಮೇಲೊಂದು ಪುರಾವೆಗಳು ಹೊರಬೀಳುತ್ತಿದೆ. ಈ ಅವ್ಯವಹಾರವನ್ನು ಮುಚ್ಚಿಡಲು ಬಿಜೆಪಿಯು ಹಲವು ಉಪಾಯ ಮಾಡಿದರೂ ಕೂಡ ಭ್ರಷ್ಟಾಚಾರ ಮತ್ತು ಇದರಲ್ಲಿ ಶಾಮೀಲಾಗಿರುವ ದಲಾಲರ ಕೃತ್ಯ ಹೊರಬೀಳುತ್ತಿದೆ ಎಂದರು.
ದೇಶದ ಅರ್ಥವ್ಯವಸ್ಥೆ ಮತ್ತು ಸುರಕ್ಷತೆ ಆತಂಕದ ಸ್ಥಿತಿಯಲ್ಲಿದೆ. ರಫೇಲ್ ಡೀಲ್ನಲ್ಲಿನ ಭ್ರಷ್ಟಾಚಾರ ಮುಚ್ಚಿಡಲು ಪ್ರಧಾನಿ ನರೇಂದ್ರ ಮೋದಿ ಸರಕಾರ ನಡೆಸಿರುವ ಆಪರೇಶನ್ ಕವರ್ ಅಪ್ ಪುನಃ ಬೆಳಕಿಗೆ ಬಂದಿದೆ. ಬಿಜೆಪಿ ಸರಾಕಾರವು ರಾಷ್ಟ್ರೀಯ ಸುರಕ್ಷತೆಯನ್ನು ಬಲಿ ನೀಡಿದೆ. ಭಾರತೀಯ ನೌಕಾದಳವನ್ನು ಆತಂಕಕ್ಕೆ ತಳ್ಳಿದೆ. ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಠ ಮಾಡಿದೆ ಎಂದು ಅಲ್ಕಾ ಲಾಂಬಾ ಆರೋಪಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗ 126 ರಫೆಲ್ ಯುದ್ಧ ವಿಮಾನ ಖರೀದಿಗೆ ಕರಾರು ಮಾಡಿಕೊಂಡಿತ್ತು. ಪ್ರತಿ ವಿಮಾನಕ್ಕೆ 526 ಕೋಟಿ ದರ ನಿಗದಿಯಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 36 ವಿಮಾನ ಖರೀದಿಗೆ ಕರಾರು ಮಾಡಿಕೊಂಡಿತು. ಪ್ರತಿ ವಿಮಾನಕ್ಕೆ 1670 ಕೋಟಿ ರೂ ದರ ನಿಗದಿ ಮಾಡಿಕೊಂಡಿತು. ಇದರಿಂದಾಗಿ ದೇಶಕ್ಕೆ 41,000 ಕೋಟಿ ರೂ ನಷ್ಠವಾಗಿದೆ ಎಂದು ಅಲ್ಕಾ ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಸಂಕಲ್ಪ ಅಮೋಣಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.