ಮಳೆಗೆ ಬೆದರಿ ಉದುರುತ್ತಿರುವ ಶಂಕರಪುರ ಮಲ್ಲಿಗೆ : ಬೆಳೆಗಾರರು ತತ್ತರ
Team Udayavani, Nov 18, 2021, 3:28 PM IST
ಕಟಪಾಡಿ: ಅಕಾಲಿಕ ಮಳೆಯಿಂದ ಪ್ರಾಪಂಚಿಕವಾಗಿ ಗುರುತಿಸಲ್ಪಟ್ಟ ಶಂಕರಪುರ ಮಲ್ಲಿಗೆ ಬೆಳೆಗಾರರು ತತ್ತರಿಸಿದ್ದು, ಮಲ್ಲಿಗೆ ಗಿಡಗಳು ಸರಿಯಾಗಿ ಮೊಗ್ಗು ಬಿಡದೆ ಇಳುವರಿ ಕಡಿಮೆಯಾಗಿ ಪರಿತಪಿಸುವಂತಾಗಿದೆ. ಮಳೆಗೆ ಬೆದರಿ ಉದುರುತ್ತಿರುವ ಶಂಕರಪುರ ಮಲ್ಲಿಗೆ ಬೆಳೆಗಾರರನ್ನು ತತ್ತರಿಸುವಂತೆ ಮಾಡಿದೆ.
ಮಲ್ಲಿಗೆ ಗಿಡದಲ್ಲಿ ಹೂವಿನ ಮೊಗ್ಗು ಸಣ್ಣದಾಗಿ ಬೆಳೆಯುತ್ತಿದ್ದು, ಸರಿಯಾಗಿ ಬೆಳೆಯದೆ ಅರಳುತ್ತಿಲ್ಲ. ಉದುರಿ ಹೋಗುತ್ತಿದೆ. ಕಾಂಡಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಎಲೆಗಳು ಕರಟಿ ಹೋದಂತೆ ಕಂಡು ಬರುತ್ತಿದ್ದು, ಮಲ್ಲಿಗೆ ಮೊಗ್ಗು ಸಹಿತವಾದ ಮಲ್ಲಿಗೆ ಗಿಡಗಳ ಗೆಲ್ಲುಗಳು ತುಂಡಾಗಿ ಮಣ್ಣು ಪಾಲಾಗುತ್ತಿದೆ. ಒಣಗಿದಂತೆ ಗೆಲ್ಲುಗಳು, ಎಲೆಗಳು, ಹೂವಿನ ಮೊಗ್ಗುಗಳು ಉದುರಿ ಹೋಗುತ್ತಿದೆ. ಮಲ್ಲಿಗೆ ಹೂವು ಸಹಜವಾದ ಮಟ್ಟಕ್ಕೆ ಬೆಳೆದು ನಿಲ್ಲದೆ ಇದ್ದು, ಇಳುವರಿ ಕುಂಠಿತವಾಗಿದೆ. ಸುಮಾರು 8-10 ಚೆಂಡುಗಳಷ್ಟು ಶಂಕರಪುರ ಮಲ್ಲಿಗೆ ಹೂವನ್ನು ಪಡೆಯುತ್ತಿದ್ದ ಬೆಳೆಗಾರರು ಇದೀಗ ಕೇವಲ 300-400 ಬಿಡಿ ಹೂವುಗಳನ್ನು ಪಡೆಯುವಲ್ಲಿ ಸಂತೃಪ್ತಿ ಕಾಣಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಮೂಲಿಗಿಂತ ಅರ್ಧಕ್ಕರ್ಧ ಶಂಕರಪುರ ಮಲ್ಲಿಗೆ ಮಾರುಕಟ್ಟೆಗೆ ಬರುತ್ತಿದೆ ಎಂದು ಶಂಕರಪುರ ಮಲ್ಲಿಗೆ ಹೂವಿನ ವ್ಯಾಪಾರಿ ವಿನ್ಸೆಂಟ್ ರಾಡ್ರಿಗಸ್ ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಲ್ಲಿಗೆ ಬೆಳೆಗಾರರಾದ ಶಂಕರಪುರದ ಬಿಬಿಯಾನ್ ಹಿಲ್ಡಾ ಲೋಬೋ ಹೇಳುವಂತೆ ವಿಪರೀತ ಮಳೆಯಿಂದ ಶಂಕರಪುರ ಮಲ್ಲಿಗೆ ಕೊಳೆತು ಹೋಗಿದೆ. ಗಿಡಗಳು ರೋಗ ಬಾತವಾಗಿದೆ. ಫಂಗಸ್ ಬಂದಿದ್ದು, ಚಿಗುರು ಬರುವುದಿಲ್ಲ. ಸುಮಾರು 8 -10 ಚೆಂಡು ಹೂವು ಪಡೆಯುತ್ತಿದ್ದು ಇದೀಗ ಕೇವಲ 300, 400 ಬಿಡಿ ಹೂವು ಮಾತ್ರ ಸಿಗುತ್ತದೆ.ಮೊಗ್ಗು ಸರಿಯಾಗಿ ಅರಳುತ್ತಿಲ್ಲ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.
ಕುರ್ಕಾಲು ಸುಭಾಸ್ ನಗರದ ಶಂಕರಪುರ ಮಲ್ಲಿಗೆ ಬೆಳೆಗಾರರಾದ ಭವಾನಿ ಅವರು ಕುಟುಂಬ ನಿರ್ವಹಣೆಗೆ ಮಲ್ಲಿಗೆ ಹೂವನ್ನೇ ನೆಚ್ಚಿಕೊಂಡಿದ್ದು ಮಲ್ಲಿಗೆ ಹೂವಿನ ಬೆಳೆಯು ಕೈಕೊಡುತ್ತಿದ್ದು, ಸಮಸ್ಯೆ ಆಗಿದೆ. ಸಿರಿ ತುಂಡಾಗಿ ಕೆಳಗೆ ಬೀಳುತ್ತಿದೆ. ಕೆಲ ಗಿಡಗಳು, ಮಲ್ಲಿಗೆ ಮೊಗ್ಗು ಸತ್ತಿದೆ. ಸುಮಾರು 6 ಚೆಂಡು ನಿತ್ಯ ಲಭಿಸುತ್ತಿದ್ದ ಮಲ್ಲಿಗೆ ಹೂವು ಇದೀಗ 200ರಷ್ಟು ಬಿಡಿ ಹೂವು ಮಾತ್ರ ಕೈ ಸೇರುತ್ತಿದೆ ದಿಕ್ಕೇ ತೋಚುತ್ತಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮಲ್ಲಿಗೆ ಬೆಳೆಗಾರರ ಸಂಕಟಕ್ಕೆ ಕೈ ಜೋಡಿಸುವಂತೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂಗೆ ರಾಜೀನಾಮೆಯ ಅನಿವಾರ್ಯತೆ ಸೃಷ್ಟಿಯಾಗಿದೆ: ಬಿ.ವೈ.ವಿಜಯೇಂದ್ರ
IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್
MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್ ಖರ್ಬೀಕರ್ ನೇಮಕ
Yeah, Yes; ಕೋರ್ಟ್ನಲ್ಲಿ ಯಾ.. ಅನ್ನಬೇಡಿ, ಎಸ್ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್!
BJP Leader: ಯತ್ನಾಳ್ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.