ಜಡಿ ಮಳೆಗೆ ನೆಲಕಚ್ಚಿದ ಗಣಿನಾಡಿನ ಬೆಳೆ
Team Udayavani, Nov 20, 2021, 10:18 AM IST
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದುದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, 24 ಗಂಟೆಯಲ್ಲಿ14405 ಹೆಕ್ಟೇರ್ ವಿವಿಧ ಬೆಳೆಗಳು ಹಾನಿಯಾಗಿದೆ.ಅಂದಾಜು 20 ಕೋಟಿ ರೂಗಳಷ್ಟು ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದಮೋಡ ಕವಿದ ವಾತಾವರಣದೊಂದಿಗೆ ಆಗಾಗ ಜಿಟಿಜಿಟಿಮಳೆಯಾಗುತ್ತಿತ್ತು. ಆದರೆ, ಗುರುವಾರ ರಾತ್ರಿಯಿಂದನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಳ್ಳಾರಿ,ಸಿರುಗುಪ್ಪ, ಸಂಡೂರು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿಕಟಾವಿಗೆ ಬಂದಿದ್ದ ಭತ್ತ, ಮೆಣಸಿನಕಾಯಿ ಇನ್ನಿತರೆಬೆಳೆಗಳು ನೆಲಕಚ್ಚಿವೆ.
ತಾಲೂಕಿನ ಕಪ್ಪಗಲ್ಲು, ಕೊಳಗಲ್ಲು,ಶ್ರೀಧರಗಡ್ಡೆ, ಕೊರ್ಲಗುಂದಿ ಗ್ರಾಮಗಳಲ್ಲಿ ಒಣಗಲು ಹಾಕಿದ್ದಮೆಣಸಿನಕಾಯಿ ಸಹ ಮಳೆನೀರಿಗೆ ಕೊಚ್ಚಿಕೊಂಡು ಹೋಗಿವೆ.ಹೊಲಗಳಲೆಲ್ಲಾ ನೀರು ನಿಂತು ಬೆಳದು ನಿಂತಿರುವ ಬೆಳೆ ಕೈಗೆಬಾರದಂತಾಗಿದೆ. ಮಳೆಯಿಂದಾಗಿ ಕೆಲವೇ ದಿನಗಳಲ್ಲಿ ಕಟಾವುಮಾಡಬೇಕೆಂದಿದ್ದ ಮೆಣಸಿನಕಾಯಿ ಬೆಳೆಯೂ ಕೊಳೆಯುವಪರಿಸ್ಥಿತಿ ಬಂದಿದ್ದು, ಲಕ್ಷಾಂತರ ರೂ. ವೆಚ್ಚ ಮಾಡಿದ್ದ ರೈತರಕಣ್ಣಲ್ಲಿ ಕಣ್ಣೀರು ತರಿಸಿದೆ.
ಬೆಳೆ ಹಾನಿಯಿಂದ ರೈತರನ್ನು ನಷ್ಟದಸುಳಿಗೆ ಸಿಲುಕುವಂತೆ ಮಾಡಿದೆ.ತಾಲೂಕಿನ ಕೊಳಗಲ್ಲು, ಕೊರ್ಲಗುಂದಿ, ಮೋಕಾ, ಎರ್ರಗುಡಿ,ಕಪ್ಪಗಲ್ಲು, ಸೋಮಸಮುದ್ರ, ಹಂದಿಹಾಳ್, ಜಾಲಿಬೆಂಚಿ,ಸಂಜೀವರಾಯನಕೋಟೆ, ಮಿಂಚೇರಿ, ಶ್ರೀಧರಗಡ್ಡೆ,ತಾಳೂರು, ಹಡ್ಲಿಗಿ, ಬಸರಕೋಡು ಸೇರಿ ಇನ್ನಿತರೆ ಗ್ರಾಮಗಳಿಗೆಕೃಷಿ ಮತ್ತು ತೋಟಗಾರಿಕೆ ಅಧಿ ಕಾರಿಗಳು ಭೇಟಿ ನೀಡಿ ಮಳೆಗೆನೆಲಕಚ್ಚಿರುವ ಬೆಳೆಯನ್ನು ನೋಡಿ ಸಮೀಕ್ಷೆ ಆರಂಭಿಸಿದ್ದಾರೆ.
ಆದರೆ, ನಿರಂತರವಾಗಿ ಮಳೆ ಸುರಿದರೂ, ಜನ, ಜಾನುವಾರುಸೇರಿ ಯಾವುದೇ ಪ್ರಾಣ ಹಾನಿಯಾಗದಿರುವುದು ಸಮಾಧಾನಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan ಭೇಟಿಗೆ ಮಾಹಿತಿ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು
Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ
Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು
LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್ ಪಟ್ಟು, ಪ್ರತಿಭಟನೆ
Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ
MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್
MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್
Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.