ಸೋರುತಿಹುದು ನಾಡಕಚೇರಿ ಮಾಳಿಗೆ
Team Udayavani, Nov 21, 2021, 5:15 PM IST
ಮಾಲೂರು: ಕಳೆದ ಎರಡು ದಿನಗಳಿಂದ ಟೇಕಲ್ ಸುತ್ತಮುತ್ತ ಮಳೆ ಆಗುತ್ತಿದ್ದು, ಕೆರೆ ಕುಂಟೆಗಳು ತುಂಬಿ ನೀರು ಹರಿಯುತ್ತಿದೆ. ಟೇಕಲ್ ನಾಡಕಚೇರಿಯು ಮಳೆಯಿಂದ ಶಿಥಿಲವಾಗಿದ್ದು, ಚಾವಣಿ ಕಿತ್ತುಹೋಗಿ ನೀರು ಸೋರಿಕೆ ಆಗುತ್ತಿದೆ. ಕಡತಗಳು ಸಂಗ್ರಹಿಸಿ ಇಡುತ್ತಿದ್ದ ಅಬಿಲೇಖಾಲಯದ ಎಲ್ಲಾ ಗೋಡೆ ನೀರು ಹಿಡಿದಿದೆ.
ಇಡೀ ಕಚೇರಿ ಜಲಾವೃತ ಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ರೂಂನಿಂದ ಪಹಣಿ, ಇತರೆ ದಾಖಲೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಡಕಚೇರಿ ಉಪತಹಶೀಲ್ದಾರ್ ಕಚೇರಿ ಬಳಿ ಮಳೆಯಿಂದ ಕಚೇರಿ ಶಿಥಿಲಗೊಂಡಿದ್ದು, ನ.20ರಂದು ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸೂಚನಾ ಫಲಕವನ್ನು ಲಗತ್ತಿಸಿ, ಕಚೇರಿಗೆ ಬೀಗ ಹಾಕಲಾಗಿದೆ. ರೈತರು ತಮ್ಮ ದಾಖಲೆಗಳು ಸಿಗದೆ ವಾಪಸ್ಸಾದರು.
ಇದನ್ನೂ ಓದಿ:- ಬೇಡಿಕೆ ಈಡೇರಿಕೆಗೆ ರೈತರ ಒತ್ತಾಯ
ಕಳೆದ ಎರಡು ತಿಂಗಳಿಂದಲೇ ಟೇಕಲ್ ನಾಡಕಚೇರಿಯು ಬಹುತೇಕ ಶಿಥಿಲಗೊಂಡಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿಯಾದ ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿ ಇಡೀ ಕಟ್ಟಡ ನೀರು ಹಿಡಿದಿದೆ. ಕಂಪ್ಯೂಟರ್ ರೂಂನಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ, ತಕ್ಷಣ ಕಾರ್ಯ ಸ್ಥಗಿತಗೊಳಿಸಲಾಯಿತು.
ಕಚೇರಿಯ ಎಲ್ಲಾ ಕೊಠಡಿಗಳು ಮಳೆಯಿಂದ ನೆನೆಯುತ್ತಿದ್ದು, ಅಧಿ ಕಾರಿಗಳು ಕುಳಿತು ಕೆಲಸ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ನಾಡಕಚೇರಿ ಉಪತಹಶೀಲ್ದಾರ್ ಜಗನ್ನಾಥರೆಡ್ಡಿ ಮಾತನಾಡಿ, ನಿರಂತರ ಮಳೆಗೆ ರೆಕಾರ್ಡ್ ರೂಮ್ ಸೋರಿಕೆ ಆಗುತ್ತಿದ್ದು, ಕಡತಗಳನ್ನು ಸಂರಕ್ಷಿಸಲು ಟಾರ್ಪಲ್ ಹಾಕಲಾಗಿದೆ.
ಕಂಪ್ಯೂಟರ್ ರೂಂನಲ್ಲಿ ನೀರು ಸುರಿಯುತ್ತಿರುವ ಕಾರಣ ಕರೆಂಟ್ ಶಾಕ್ ಹೊಡೆಯುತ್ತಿದ್ದು, ನಾಡಕ ಚೇರಿಯ ಕಾರ್ಯಚಟುವಟಿಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದು ಹೇಳಿದರು. ಮಳೆ ನಿಲ್ಲುವ ಸೂಚನೆ ನೋಡಿಕೊಂಡು ಶಿಥಿಲವಾದ ಕಡೆ ಸ್ವಲ್ಪಮಟ್ಟಿಗೆ ರೀಪೇರಿ ಮಾಡಿಕೊಂಡು ಮುಂದು ವರಿಸಲಾಗುತ್ತದೆ. ಕೆ.ಜಿ.ಹಳ್ಳಿ ಸರ್ವೆ ನಂ.10ರಲ್ಲಿ 20 ಗುಂಟೆ ಸ್ಥಳ ನಾಡಕಚೇರಿಗೆ ಮಂಜೂರು ಆಗಿದ್ದು, ಡೀಸಿ ಆದೇಶದಂತೆ ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.