
ಬೆಳೆಹಾನಿ ಪರಿಹಾರಕ್ಕೆ ರೈತರ ಒತ್ತಾಯ
ಮನೆ ಬಿದ್ದು ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೂ ಸರಕಾರ ಕೂಡಲೇ ಸ್ಪಂದಿಸುವುದು ಅವಶ್ಯ
Team Udayavani, Dec 1, 2021, 6:12 PM IST

ಲಕ್ಷ್ಮೇಶ್ವರ: ಅಕಾಲಿಕ, ಅತಿವೃಷ್ಟಿಯಿಂದ ರೈತರಿಗಾಗಿರುವ ಎಲ್ಲ ಬೆಳೆಗಳ ನಷ್ಟದ ಪರಿಹಾರವನ್ನು ಆದಷ್ಟು ಶೀಘ್ರ ರೈತರ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಬಾಲೆಹೊಸೂರು ಗ್ರಾಮ ಘಟಕದಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಲೋಕೇಶ್ ಜಾಲವಾಡಗಿ ಮಾತನಾಡಿ, ಅತಿವೃಷ್ಟಿಯಿಂದ ರೈತರ ಹೊಲದಲ್ಲಿ ಬೆಳೆದು ನಿಂತ ಮುಂಗಾರಿನ ಫಸಲು ನೆಲಕ್ಕೆ ಬಿದ್ದು ಹಾಳಾಗಿದೆ. ಹಿಂಗಾರಿನ ಸಣ್ಣ ಬೆಳೆ ಮಳೆಯ ಹೊಡೆತಕ್ಕೆ ಸಿಲುಕಿದೆ. ಪ್ರತಿವರ್ಷ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ರೈತರು ಹಾನಿ ಅನುಭವಿಸುವುದು ತಪ್ಪದಂತಾಗಿದೆ. ಶೇಂಗಾ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗೆ ಮಾತ್ರ ಪರಿಹಾರ ಕೊಡುವರೆಂಬ ಆತಂಕದಲ್ಲಿ ರೈತರಿದ್ದಾರೆ. ಆದ್ದರಿಂದ ಗೋವಿನಜೋಳ,
ತೊಗರಿ ಸೇರಿ ಎಲ್ಲ ಬೆಳೆಗಳ ಹಾನಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ವರ್ಷಗಳ ಹಿಂದೆಯೇ ಬಾಲೆಹೊಸೂರ ಗ್ರಾಮದ ಅನೇಕ ರೈತರ ಜಮೀನುಗಳಿಗೆ ವರದಾ ನದಿಯ ನೀರು ಹರಿದು ಬೆಳೆಹಾನಿಯಾದದ ಬಗ್ಗೆ ಪರಿಹಾರ ಗಗನ ಕುಸುಮವಾಗಿದೆ. ಬೆಳೆಹಾನಿಯ ಜತೆಗೆ ಮನೆ ಬಿದ್ದು ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೂ ಸರಕಾರ ಕೂಡಲೇ ಸ್ಪಂದಿಸುವುದು ಅವಶ್ಯವಾಗಿದೆ.
ರೈತರ ಜಮೀನುಗಳಿಗೆ ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ಸಮೀಕ್ಷೆ ಪೂರ್ಣಗೊಳಿಸಿದರೆ ರೈತರು ಜಮೀನು ಹಸನು ಮಾಡಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ ರೇಣುಕಾ ಮನವಿ ಸ್ವೀಕರಿಸಿದರು. ರೈತ ಸಂಘದ ಕಾರ್ಯದರ್ಶಿ ಕೇಶವ ಕಟ್ಟಿಮನಿ, ಸಂಘದ ಸದಸ್ಯರಾದ ಮಂಜುನಾಥ ಸುಣಗಾರ, ವೆಂಕಟೇಶ ಕಾಗನೂರ, ಹನುಮಂತಪ್ಪ ನಾವ್ಹಿ, ಬಸವರಡ್ಡಿ ಚನ್ನಳ್ಳಿ, ತಿರಕಪ್ಪ ಶಿಗ್ಲಿ, ಮಲ್ಲೇಶಪ್ಪ ತಿರಕಣ್ಣವರ, ಪ್ರಸನ್ನ ಲೋಹಾರ, ಹೊನಕೇರಪ್ಪ ಒಂಟಿ, ದರಿಯಪ್ಪ ಪಶುಪತಿಹಾಳ ಇತರರಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.