![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 10, 2021, 12:04 PM IST
ಹೊಳೆಹೊನ್ನೂರು: ಆತನಿಗೆ 60 ವರ್ಷ. 7 ತಿಂಗಳ ಹಿಂದೆ ಪತ್ನಿ ಮೃತಪಟ್ಟಿದ್ದಳು. ಇದರಿಂದ ಒಂಟಿತನ ಕಾಡ್ತಿತ್ತು. ಹೀಗಾಗಿ ಎರಡನೇ ಮದುವೆ ಆಸೆಯಿಂದ ಕನ್ನಡ ಮ್ಯಾಟ್ರಿಮೋನಿಯಲ್ಲಿ ವಧುವನ್ನು ಹುಡುಕಿ ಮದುವೆ ಸಿದ್ಧತೆಯೂ ಆಗಿತ್ತು. ಆದರೆ ತಾಳಿ ಕಟ್ಟಿಸಿಕೊಳ್ಳ ಬೇಕಿದ್ದ ಮಹಿಳೆ ಇದೀಗ ಅದೇ ತಾಳಿಯೊಂದಿಗೆ ಎಸ್ಕೇಪ್ ಆಗಿದ್ದಾಳೆ.
ಹೊಳೆಹೊನ್ನೂರಿನ ನಂಜುಂಡಪ್ಪ ಎಂಬುವವರಿಗೆ ಮದುವೆಯಾಗಿ 30 ವರ್ಷ ಕಳೆದಿದೆ. ಒಂದು ಗಂಡು, ಎರಡು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿದೆ. 7 ತಿಂಗಳ ಹಿಂದೆ ನಂಜುಂಡಪ್ಪ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಆ ಬಳಿಕ ನಂಜುಂಡಪ್ಪ ಒಂಟಿಯಾದರು. ಹೀಗಾಗಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದ ಅವರು ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಕನ್ನಡ ಮ್ಯಾಟ್ರಿಮೋನಿಯಲ್ಲಿ ಮೂರೂವರೆ ಸಾವಿರ ರೂ. ನೀಡಿ ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಬೆಂಗಳೂರಿನ ಯಲಹಂಕದ ಮಹಿಳೆಯೊಬ್ಬರು ನಂಜುಂಡಪ್ಪ ಅವರನ್ನು ವರಿಸಲು ಒಪ್ಪಿದ್ದರು. ಮಹಿಳೆ ಒಪ್ಪಿಗೆ ಸಿಕ್ಕ ನಂತರ ಮದುವೆಗೆ ಸಿದ್ಧತೆ ನಡೆಸಿ ದಿನವೂ ನಿಗದಿಯಾಗಿತ್ತು.
ಸಿಗಂದೂರು ದೇವಸ್ಥಾನದಲ್ಲಿ ಡಿ.15ರಂದು ವಿವಾಹ ನಡೆಯಬೇಕಿತ್ತು. ಆದರೆ ಮದುವೆಯಾಗಬೇಕಿದ್ದ ಮಹಿಳೆ ನಾಪತ್ತೆಯಾಗಿದ್ದಾಳೆ. ಊಟ ಮಾಡಿ ಬರ್ತಿನಿ ಅಂತಾ ಹೋದವಳು ವಾಪಸ್ ಬರಲೇ ಇಲ್ಲ. ಅಲ್ಲದೆ ಮದುವೆಗೆಂದು ತಂದಿದ್ದ ಚಿನ್ನದ ತಾಳಿಯೊಂದಿಗೆ ನಾಪತ್ತೆಯಾಗಿದ್ದು ಈ ಬಗ್ಗೆ ನಂಜುಂಡಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
You seem to have an Ad Blocker on.
To continue reading, please turn it off or whitelist Udayavani.