ಬೇಕಾಬಿಟ್ಟಿ ಟೋಲ್‌ ಸಂಗ್ರಹಿಸಿದರೂ ಬೀದಿ ದೀಪ ಉರಿಸುವುದಿಲ್ಲ

ಸರ್ವಿಸ್‌ ರಸ್ತೆ ಪೂರ್ತಿಯಾಗಿಲ್ಲ ; ಬಸ್‌ ನಿಲ್ದಾಣವೂ ಇಲ್ಲ ; ಮೂಲ ಸೌಕರ್ಯ ಕೇಳುವಂತಿಲ್ಲ

Team Udayavani, Dec 12, 2021, 7:50 AM IST

ಬೇಕಾಬಿಟ್ಟಿ ಟೋಲ್‌ ಸಂಗ್ರಹಿಸಿದರೂ ಬೀದಿ ದೀಪ ಉರಿಸುವುದಿಲ್ಲ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಯುಗ ಕಂಪೆನಿ ಸೌಲಭ್ಯ ಒದಗಿಸದೆ ಹಲವು ವರ್ಷಗಳಿಂದ ಟೋಲ್‌ ಸಂಗ್ರಹಿಸು ತ್ತಿದ್ದು, ಬೀದಿ ದೀಪ ಉರಿಸಲು ಮಾತ್ರ ಪಿಳ್ಳೆ ನೆಪ ಹೇಳಿ ದಿನ ದೂಡುತ್ತಿದೆ. ಕಂಪೆನಿಯು ಮೊಂಡುತನ ತೋರಿ ಉರಿಯಲು ಸಿದ್ಧವಾಗಿರುವ ಹೆದ್ದಾರಿ ಫ್ಲೈಓವರ್‌ನ ಬೀದಿ ದೀಪಗಳನ್ನು ಎರಡು ವರ್ಷಗಳಿಂದ ಬಂದ್‌ ಮಾಡಿ ಕುಳಿತಿದೆ.

ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಫ್ಲೈಓವರ್‌, ಪಡುಬಿದ್ರಿ ಪೇಟೆ ಮತ್ತು ಉಡುಪಿಯ ಕರಾವಳಿ ಸರ್ಕಲ್‌ ಸಹಿತ
ಹಲವೆಡೆ ಬೀದಿ ದೀಪ ಅಳವಡಿಸಿ ಪರೀಕ್ಷಾರ್ಥ ಉರಿಸಿ ನೋಡಿ ಎರಡು ವರ್ಷಗಳಾಗಿವೆ. ಆದರೆ ಅನಂತರ ಅದು
ತುಕ್ಕು ಹಿಡಿಯುತ್ತಿದೆ. ಹೆದ್ದಾರಿ ಗುತ್ತಿಗೆ ವಹಿಸಿರುವ ನವಯುಗ ಕಂಪೆನಿಗೆ ಕೇಳಿದರೆ ಅದಕ್ಕೆ ಪ್ರತ್ಯೇಕ ಟೋಲ್‌ ನಿಗದಿ
ಯಾಗಬೇಕೆಂಬ ಉತ್ತರ ಬರುತ್ತಿದೆ. ಈಗಾಗಲೇ ಟೋಲ್‌ ಸಂಗ್ರಹಿಸುವ ಪ್ರದೇಶದಲ್ಲಿ ಹಲವಾರು ರೀತಿಯ ಮೂಲ ಸೌಕರ್ಯಗಳು ಇಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವಾಗಿದೆ.

ಈಗ ಸಂಗ್ರಹಿಸುತ್ತಿರುವ ಶುಲ್ಕದಲ್ಲಿ ಈ ಬೀದಿ ದೀಪಗಳ ನಿರ್ವಹಣೆ ಸೇರಿಲ್ಲ; ಅವು ಉರಿಯ ಬೇಕಾದರೆ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಬೇಕು ಎಂದು ಹೆದ್ದಾರಿ ಅಭಿವೃದ್ಧಿ ಮತ್ತು 25 ವರ್ಷಗಳ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಎಂಜಿನಿಯರಿಂಗ್‌ ಕಂಪೆನಿಯು ರಾ.ಹೆ. ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲಿಂದ ಟೋಲ್‌ ಏರಿಕೆಗೆ ಅನುಮೋದನೆ ಸಿಕ್ಕಿದರೆ ಮಾತ್ರ ಈ ಬೀದಿ ದೀಪಗಳು ಉರಿಯುತ್ತದೆ ಎಂಬುದು ಅಧಿಕಾರಿಗಳ ಉತ್ತರ.

ಮೂಲ ಸೌಕರ್ಯಕ್ಕೆ
ಅನ್ವಯಿಸುವುದಿಲ್ಲ!
ತಲಪಾಡಿ- ಕುಂದಾಪುರ ನಡುವಣ 90 ಕಿ.ಮೀ. ಹೆದ್ದಾರಿಯ 80 ಕಿ.ಮೀ.ಯ ಪ್ರಮುಖ ರಸ್ತೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಾಗ ಸಂಚಾರಕ್ಕೆ ಮುಕ್ತಗೊಳಿಸಿ ಟೋಲ್‌ ವಿಧಿಸ ಲಾಗಿತ್ತು. ನಾಲ್ಕು ಕಡೆಗಳ ಒಟ್ಟು 10 ಕಿ.ಮೀ.ಗೆ ಟೋಲ್‌ವಿಧಿಸಿಲ್ಲ. ಈಗ ಅದು ಪೂರ್ಣಗೊಂಡಿದೆ ಎಂಬುದು ಕಂಪೆನಿಯ ವಾದ. ಆದರೆ ಒಟ್ಟು 90 ಕಿ.ಮೀ. ರಸ್ತೆಯಲ್ಲಿ ಇನ್ನೂ ಹಲವೆಡೆ ಸರ್ವೀಸ್‌ ರಸ್ತೆ ಕಾಮಗಾರಿ ಆಗಿಲ್ಲ. ಬಸ್‌ ನಿಲ್ದಾಣಗಳು ಆಗಿಲ್ಲ. ಟೋಲ್‌ ಗ‌ಳಲ್ಲಿ ಆ್ಯಂಬುಲೆನ್ಸ್‌, ಕ್ರೇನ್‌ ಸವಲತ್ತು ಸರಿಯಾಗಿಲ್ಲ. ಸಾರ್ವಜನಿಕರಿಗೆ ಕುಡಿಯುವ ನೀರಿಲ್ಲ, ಹೆದ್ದಾರಿಯಲ್ಲಿ ಅವಘಡವಾದರೆ ತಿಳಿಸುವುದಕ್ಕೆಂದು ಇರಿಸಲಾಗಿರುವ ಫೋನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹೆದ್ದಾರಿ ಗುಂಡಿ ಗಳನ್ನು ಮುಚ್ಚುವವರಿಲ್ಲ. ಇವುಗಳೆಲ್ಲ ಇಲ್ಲದಿದ್ದರೂ ಟೋಲ್‌ ವಿಧಿಸಲಾಗುತ್ತಿದೆ. ಆದರೆ ಬೀದಿ ದೀಪ ಉರಿಸುವುದಕ್ಕೆ ಮಾತ್ರ ಟೋಲ್‌ ಹೆಚ್ಚಿಸಬೇಕೆಂಬ ಮೊಂಡುವಾದ.

ಇದನ್ನೂ ಓದಿ:ಜೂಜು ಅಡ್ಡೆಯ ಮೇಲೆ ಕೋಳಾಲ ಪೋಲೀಸರ ದಾಳಿ : ಮೂವರು ವಶಕ್ಕೆ

ಜೀವ ಹೋದರೂ
ದೀಪ ಉರಿಸುವುದಿಲ್ಲ
ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಫ್ಲೈಓವರ್‌ಗಳಲ್ಲಿ ಬೀದಿ ದೀಪ ಅಳ ವಡಿಸಿ 2 ವರ್ಷ ಸಮೀಪಿಸಿದರೂ ಅದನ್ನು ಉರಿಸುತ್ತಿಲ್ಲ. ಪಂಪ್‌ವೆಲ್‌ ಫ್ಲೈಓವರ್‌ನ ಮಧ್ಯ ಭಾಗ ತಿರುವಿನಿಂದ ಕೂಡಿದ್ದು ಹಲವು ಅಪಘಾತಗಳು ಸಂಭವಿಸಿವೆ. ತೊಕ್ಕೊಟ್ಟು ಫ್ಲೈ ಓವರ್‌ನಲ್ಲಿಯೂ ಅವಘಡಗಳಾಗಿವೆ. ರಾತ್ರಿ ವೇಳೆಯಲ್ಲಿ “ರಾಷ್ಟ್ರೀಯ ಹೆದ್ದಾರಿ ಯಲ್ಲವೆ’ ಎಂಬ ಧೈರ್ಯದಿಂದ ಚಾಲಕರು ವಾಹನಗಳನ್ನು ವೇಗವಾಗಿ ಚಲಾಯಿಸಿ ಅಪಘಾತಕ್ಕೊಳ
ಗಾಗುತ್ತಾರೆ. ಜೀವ ಹೋದರೂ ಕಂಪೆನಿಯವರು.

ತಲಪಾಡಿಯಿಂದ ಕುಂದಾಪುರ ತನಕದ ಹೆದ್ದಾರಿಯನ್ನು ಸಂಚಾರಕ್ಕೆ ಬಿಟ್ಟು ಕೊಡುವಾಗ ಕಾಮಗಾರಿ ಪರಿಪೂರ್ಣವಾಗಿರದ ಕಾರಣ 80 ಕಿ.ಮೀ. ಮಾತ್ರ ಪರಿಗಣಿಸಿ ಟೋಲ್‌ ನಿಗದಿ ಪಡಿಸಲಾಗಿತ್ತು. 90 ಕಿ.ಮೀ. ರಸ್ತೆಯನ್ನು ಪರಿಗಣಿಸಿ ಟೋಲ್‌ ಶುಲ್ಕ ಪರಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ಮೂಲ ಸೌಕರ್ಯ ಒದಗಿಸುವುದು ನವಯುಗ ಕಂಪೆನಿಯ ಜವಾಬ್ದಾರಿ.
– ಎ.ಕೆ. ಜಾನ್‌ಬಾಸ್‌,
ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ನಿಯಮ
ಮೀರಿ ಸಂಗ್ರಹ
ಟೋಲ್‌ಗೇಟ್‌ಗಳ ನಡುವಿನ ಅಂತರ 60 ಕಿ.ಮೀ. ಇರಬೇಕೆಂಬ ನಿಯಮ ಇದ್ದರೂ 5-6 ಕಿ.ಮೀ. ಅಂತರದ ಸುರತ್ಕಲ್‌ ಮತ್ತು ಹೆಜಮಾಡಿಯಲ್ಲಿ ಗೇಟ್‌ಗಳಿವೆ. ಈ ಬಗ್ಗೆ ಜನಪ್ರತಿ ನಿಧಿಗಳಾಗಲಿ, ಅಧಿಕಾರಿಗಳಾಗಲಿ ಮಾತನಾ ಡುತ್ತಿಲ್ಲ ಏಕೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್‌ ಪ್ರಶ್ನಿಸಿದರೆ, ಈ ವಿಚಾರದಲ್ಲಿ ಜನ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸಾಮಾಜಿಕ ಹೋರಾಟ ಗಾರ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Chess Olympiad: ಭಾರತದ ಗೆಲುವಿಗೆ ಬ್ರೇಕ್‌

Chess Olympiad: ಭಾರತದ ಗೆಲುವಿಗೆ ಬ್ರೇಕ್‌

17

ಪೋಕ್ಸೋ ಪ್ರಕರಣ: “ಬಿ’ ವರದಿ ತಿರಸ್ಕರಿಸಿ ಪ್ರಕರಣಕ್ಕೆ ಮರುಜೀವ ನೀಡಿದ ನ್ಯಾಯಾಲಯ

14

Siddapura: ಪತ್ನಿಯ ಮೇಲೆ ಪತಿ ಹಲ್ಲೆ; ಕೊಲೆ ಬೆದರಿಕೆ

12

Udupi: ಕೆಲಸಕ್ಕೆ ಸೇರಿದ ವ್ಯಕ್ತಿಯಿಂದ ಚಿನ್ನ ಕಳವು

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.