ಅವಸಾನದತ್ತ ವೇಣುಗೋಪಾಲಸ್ವಾಮಿ ದೇಗುಲ


Team Udayavani, Dec 13, 2021, 2:43 PM IST

ದೇಗುಲದ ಅವಸಾನ

ಕಿಕ್ಕೇರಿ: ಹೋಬಳಿಯ ಗಡಿಯಂಚಿನಲ್ಲಿರುವ ಗೋವಿಂದನಹಳ್ಳಿ ಗ್ರಾಮದಲ್ಲಿ ಪಂಚಲಿಂಗೇಶ್ವರ ದೇಗುಲ ಮಾತ್ರ ತಿಳಿದಿದ್ದು, ಮತ್ತೂಂದು ಸುಂದರ ವೇಣುಗೋಪಾಲಸ್ವಾಮಿ ದೇಗುಲ ಇರುವುದು ಬಹುತೇಕರಿಗೆ ತಿಳಿದಿಲ್ಲದಂತಿದೆ. ಗ್ರಾಮದ ಒಳಗಿರುವ ದೇಗುಲ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದು, ನೋಡಲು ಮೋಹಕವಾಗಿದೆ.

ಸಮರ್ಪಕ ನಿರ್ವಹಣೆ ಇಲ್ಲದೇ ದೇಗುಲ ಕುಸಿಯುವ ಹಂತ ತಲುಪಿದೆ. ಮಳೆಗಾಲದಲ್ಲಿ ದೇಗುಲದೊಳಗೆ ನೀರು ಸೋರಿದರೆ, ಬಿಸಿಲುಗಾಲದಲ್ಲಿ ಪ್ರಖರ ಬೆಳಕು ದೇಗುಲದ ಒಳಗೆ ನುಸುಳುತ್ತಿದೆ.

ತಳಪಾಯಕ್ಕೆ ಅಪಾಯ: ದೇಗುಲದ ಸುತ್ತ, ದೇಗುಲದ ಗೋಪುರ, ಕಲ್ಲಿನ ಸಂಧುಗಳಲ್ಲಿ ಮರದ ಬೇರು ಬಿಟ್ಟಿದೆ. ಪರಿಣಾಮ ದೇಗುಲದ ಬೃಹತ್‌ ಕಲ್ಲುಗಳು ಒಂದೊಂದಾಗಿ ನೆಲಕ್ಕೆ ಉರುಳುತ್ತಿವೆ. ಕಲ್ಲಿನ ಮೇಲೆ ಕಲ್ಲು ಹೂವು ಬೆಳೆದು ಕಲ್ಲಿನ ಪುಡಿ ಉದುರುವಂತಾಗಿದೆ. ಪರಿಣಾಮ ಇಡೀ ದೇಗುಲ ಅವಸಾನದ ಹಾದಿ ತಲುಪುವಂತಾಗಿದೆ.

ಇದನ್ನೂ ಓದಿ;- ದಿಢೀರ್ ಬೆಳವಣಿಗೆ: ಸಂಸತ್ ಅಧಿವೇಶನ ರದ್ದುಗೊಳಿಸಿ ಸಿಂಗಾಪುರಕ್ಕೆ ತೆರಳಿದ ಅಧ್ಯಕ್ಷ ಗೋಟಬಯಾ

ದೇಗುಲದ ಕಲ್ಲುಗಳು ಒಂದೊಂದಾಗಿ ಬಾಗಿ ಕುಸಿಯುತ್ತ ತಳಪಾಯಕ್ಕೆ ಅಪಾಯ ತಟ್ಟುವಂತಾಗಿದೆ. ಬಿದ್ದ ಕಲ್ಲುಗಳು ಬಹುತೇಕ ಹಲವು ಕಿಡಿಗೇಡಿಗಳ ಪಾಲಾಗುತ್ತಿವೆ. ಮತ್ತೆ ಕೆಲವು ಸುಂದರ ಚಿತ್ತಾರ ಬಿಡಿಸಿರುವ ಕಲ್ಲುಗಳು ಜಾನುವಾರು ಕಟ್ಟಿಹಾಕುವ ಗೂಟವಾಗುತ್ತಿವೆ. ಕಲ್ಲಿನಲ್ಲಿನ ಮೋಹಕ ಶಿಲ್ಪಗಳನ್ನು ಕಿಡಿಗೇಡಿಗಳು ಕೆತ್ತಿ ಹಾಳು ಮಾಡಿರುವುದು ಕಂಡು ಬರುತ್ತಿದೆ. ಅಳಿದುಳಿ ದಿರುವ ವೇಣುಗೋಪಾಲಸ್ವಾಮಿ ಮೂರ್ತಿ ಪೂಜೆಗೆ ಅರ್ಹವಾಗಿರುವುದು ಪುಣ್ಯವೆನಿಸಿದೆ.

ಕಾಯಕಲ್ಪ ಬೇಕಿದೆ: ಜಿಲ್ಲೆಯಲ್ಲಿರುವ ಬೆರಳೆಣಿ ಕೆಯ ವೇಣುಗೋಪಾಲಸ್ವಾಮಿ ದೇವಾಲಯ ದಲ್ಲಿ ಇದು ಅಪರೂಪದ ಸುಂದರ ದೇಗುಲವಾಗಿದೆ. ಉಳಿವಿಗಾಗಿ ಸಾಕಷ್ಟು ಮನವಿ ಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ದೇಗುಲ ಜೀಣೊìದ್ಧಾರವಾದರೆ ರಾಜ್ಯದಲ್ಲಿಯೇ ಉತ್ತಮ ಪ್ರವಾಸಿ ಕೇಂದ್ರ ನಮ್ಮ ಗ್ರಾಮವಾಗಲಿದೆ ಎನ್ನುವುದು ನ್ಯಾಯಬೆಲೆ ಸೋಮಣ್ಣ ಅವರ ನುಡಿಯಾಗಿದೆ.

 ಕನಸಿನ ಮಾತಾದ ಜೀರ್ಣೋದ್ಧಾರ

ದೇಗುಲದ ಒಳಾಂಗಣದಲ್ಲಿನ ಗರ್ಭಗುಡಿ, ನವರಂಗದಲ್ಲಿನ ಚಿತ್ತಾರ ಮೋಹಕವಾಗಿದ್ದು ಹಾಳಾಗದೆ ಉಳಿದಿದೆ. ನೋಡುಗರ ಮನಸ್ಸಿಗೆ ಶಿಲ್ಪಕಲೆಯ ಸಣ್ಣ ಕುಸುರಿ ಕೆಲಸ ಬೆರಗುಗೊಳಿಸುವಂತಿದೆ. ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಪೂಜಾ ಕೈಂಕರ್ಯ ಮಾತ್ರ ನಡೆಯುತ್ತಿದ್ದು, ಜೀರ್ಣೋದ್ಧಾರ ಕನಸಿನ ಮಾತಾಗಿದೆ ಎನ್ನುವುದು ಗ್ರಾಮದ ಜನತೆ ನಿವೇದನೆಯಾಗಿದೆ.

ತುರ್ತು ದೇಗುಲ ಉಳಿವಿಗೆ ರಾಜ್ಯ, ಕೇಂದ್ರ ಪುರಾತತ್ವ ಇಲಾಖೆ ಮುಂದಾಗಬೇಕಿದೆ. ಇಲ್ಲವಾದರೆ ದೇಗುಲವನ್ನು ಮುಂದಿನ ದಿನಗಳಲ್ಲಿ ಚಿತ್ರಪಟದಲ್ಲಿ ನೋಡಬೇಕಾದ ಸಂದಿಗ್ಧತೆ ಕಾಣಬೇಕಾಗಬಹುದು ಎಂಬುದು ಸ್ಥಳೀಕರ ಮೌನ ವೇದನೆಯಾಗಿದೆ.

ಟಾಪ್ ನ್ಯೂಸ್

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.