ಅವಸಾನದತ್ತ ವೇಣುಗೋಪಾಲಸ್ವಾಮಿ ದೇಗುಲ
Team Udayavani, Dec 13, 2021, 2:43 PM IST
ಕಿಕ್ಕೇರಿ: ಹೋಬಳಿಯ ಗಡಿಯಂಚಿನಲ್ಲಿರುವ ಗೋವಿಂದನಹಳ್ಳಿ ಗ್ರಾಮದಲ್ಲಿ ಪಂಚಲಿಂಗೇಶ್ವರ ದೇಗುಲ ಮಾತ್ರ ತಿಳಿದಿದ್ದು, ಮತ್ತೂಂದು ಸುಂದರ ವೇಣುಗೋಪಾಲಸ್ವಾಮಿ ದೇಗುಲ ಇರುವುದು ಬಹುತೇಕರಿಗೆ ತಿಳಿದಿಲ್ಲದಂತಿದೆ. ಗ್ರಾಮದ ಒಳಗಿರುವ ದೇಗುಲ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದು, ನೋಡಲು ಮೋಹಕವಾಗಿದೆ.
ಸಮರ್ಪಕ ನಿರ್ವಹಣೆ ಇಲ್ಲದೇ ದೇಗುಲ ಕುಸಿಯುವ ಹಂತ ತಲುಪಿದೆ. ಮಳೆಗಾಲದಲ್ಲಿ ದೇಗುಲದೊಳಗೆ ನೀರು ಸೋರಿದರೆ, ಬಿಸಿಲುಗಾಲದಲ್ಲಿ ಪ್ರಖರ ಬೆಳಕು ದೇಗುಲದ ಒಳಗೆ ನುಸುಳುತ್ತಿದೆ.
ತಳಪಾಯಕ್ಕೆ ಅಪಾಯ: ದೇಗುಲದ ಸುತ್ತ, ದೇಗುಲದ ಗೋಪುರ, ಕಲ್ಲಿನ ಸಂಧುಗಳಲ್ಲಿ ಮರದ ಬೇರು ಬಿಟ್ಟಿದೆ. ಪರಿಣಾಮ ದೇಗುಲದ ಬೃಹತ್ ಕಲ್ಲುಗಳು ಒಂದೊಂದಾಗಿ ನೆಲಕ್ಕೆ ಉರುಳುತ್ತಿವೆ. ಕಲ್ಲಿನ ಮೇಲೆ ಕಲ್ಲು ಹೂವು ಬೆಳೆದು ಕಲ್ಲಿನ ಪುಡಿ ಉದುರುವಂತಾಗಿದೆ. ಪರಿಣಾಮ ಇಡೀ ದೇಗುಲ ಅವಸಾನದ ಹಾದಿ ತಲುಪುವಂತಾಗಿದೆ.
ಇದನ್ನೂ ಓದಿ;- ದಿಢೀರ್ ಬೆಳವಣಿಗೆ: ಸಂಸತ್ ಅಧಿವೇಶನ ರದ್ದುಗೊಳಿಸಿ ಸಿಂಗಾಪುರಕ್ಕೆ ತೆರಳಿದ ಅಧ್ಯಕ್ಷ ಗೋಟಬಯಾ
ದೇಗುಲದ ಕಲ್ಲುಗಳು ಒಂದೊಂದಾಗಿ ಬಾಗಿ ಕುಸಿಯುತ್ತ ತಳಪಾಯಕ್ಕೆ ಅಪಾಯ ತಟ್ಟುವಂತಾಗಿದೆ. ಬಿದ್ದ ಕಲ್ಲುಗಳು ಬಹುತೇಕ ಹಲವು ಕಿಡಿಗೇಡಿಗಳ ಪಾಲಾಗುತ್ತಿವೆ. ಮತ್ತೆ ಕೆಲವು ಸುಂದರ ಚಿತ್ತಾರ ಬಿಡಿಸಿರುವ ಕಲ್ಲುಗಳು ಜಾನುವಾರು ಕಟ್ಟಿಹಾಕುವ ಗೂಟವಾಗುತ್ತಿವೆ. ಕಲ್ಲಿನಲ್ಲಿನ ಮೋಹಕ ಶಿಲ್ಪಗಳನ್ನು ಕಿಡಿಗೇಡಿಗಳು ಕೆತ್ತಿ ಹಾಳು ಮಾಡಿರುವುದು ಕಂಡು ಬರುತ್ತಿದೆ. ಅಳಿದುಳಿ ದಿರುವ ವೇಣುಗೋಪಾಲಸ್ವಾಮಿ ಮೂರ್ತಿ ಪೂಜೆಗೆ ಅರ್ಹವಾಗಿರುವುದು ಪುಣ್ಯವೆನಿಸಿದೆ.
ಕಾಯಕಲ್ಪ ಬೇಕಿದೆ: ಜಿಲ್ಲೆಯಲ್ಲಿರುವ ಬೆರಳೆಣಿ ಕೆಯ ವೇಣುಗೋಪಾಲಸ್ವಾಮಿ ದೇವಾಲಯ ದಲ್ಲಿ ಇದು ಅಪರೂಪದ ಸುಂದರ ದೇಗುಲವಾಗಿದೆ. ಉಳಿವಿಗಾಗಿ ಸಾಕಷ್ಟು ಮನವಿ ಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ದೇಗುಲ ಜೀಣೊìದ್ಧಾರವಾದರೆ ರಾಜ್ಯದಲ್ಲಿಯೇ ಉತ್ತಮ ಪ್ರವಾಸಿ ಕೇಂದ್ರ ನಮ್ಮ ಗ್ರಾಮವಾಗಲಿದೆ ಎನ್ನುವುದು ನ್ಯಾಯಬೆಲೆ ಸೋಮಣ್ಣ ಅವರ ನುಡಿಯಾಗಿದೆ.
ಕನಸಿನ ಮಾತಾದ ಜೀರ್ಣೋದ್ಧಾರ
ದೇಗುಲದ ಒಳಾಂಗಣದಲ್ಲಿನ ಗರ್ಭಗುಡಿ, ನವರಂಗದಲ್ಲಿನ ಚಿತ್ತಾರ ಮೋಹಕವಾಗಿದ್ದು ಹಾಳಾಗದೆ ಉಳಿದಿದೆ. ನೋಡುಗರ ಮನಸ್ಸಿಗೆ ಶಿಲ್ಪಕಲೆಯ ಸಣ್ಣ ಕುಸುರಿ ಕೆಲಸ ಬೆರಗುಗೊಳಿಸುವಂತಿದೆ. ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಪೂಜಾ ಕೈಂಕರ್ಯ ಮಾತ್ರ ನಡೆಯುತ್ತಿದ್ದು, ಜೀರ್ಣೋದ್ಧಾರ ಕನಸಿನ ಮಾತಾಗಿದೆ ಎನ್ನುವುದು ಗ್ರಾಮದ ಜನತೆ ನಿವೇದನೆಯಾಗಿದೆ.
ತುರ್ತು ದೇಗುಲ ಉಳಿವಿಗೆ ರಾಜ್ಯ, ಕೇಂದ್ರ ಪುರಾತತ್ವ ಇಲಾಖೆ ಮುಂದಾಗಬೇಕಿದೆ. ಇಲ್ಲವಾದರೆ ದೇಗುಲವನ್ನು ಮುಂದಿನ ದಿನಗಳಲ್ಲಿ ಚಿತ್ರಪಟದಲ್ಲಿ ನೋಡಬೇಕಾದ ಸಂದಿಗ್ಧತೆ ಕಾಣಬೇಕಾಗಬಹುದು ಎಂಬುದು ಸ್ಥಳೀಕರ ಮೌನ ವೇದನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕೌನ್ ಬನೇಗಾ ಕರೋಡ್ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.