ಮಾರುಕಟ್ಟೆಯಲ್ಲಿ ಕಾಣುತ್ತಿಲ್ಲಅವರೆಕಾಯಿ


Team Udayavani, Dec 17, 2021, 10:18 AM IST

avrekai

ಬೆಂಗಳೂರು: ಚಳಿಗಾಲ ಆರಂಭವಾಯಿತೆಂದರೆ “ಸೊಗಡು ಅವರೆಕಾಯಿ’ ಸೊಬಗು ಎಲ್ಲೆಂದರಲ್ಲಿ ಕಾಣುತ್ತದೆ. ಹಾಗೆಯೇ ಅವರೆ ಕಾಯಿ ಮೇಳಗಳು ಶುರುವಾಗುತ್ತವೆ. ಆದರೆ ಈ ಬಾರಿ ಡಿಸೆಂಬರ್‌ ಅರ್ಧ ಮುಗಿಯುತ್ತಾ ಬಂದರೂ ಇನ್ನೂ ಮಾರುಕಟ್ಟೆಯಲ್ಲಿ ಅವರೆ ಕಾಯಿಯೇ ಕಾಣುತ್ತಿಲ್ಲ.

ನವೆಂಬರ್‌ನಲ್ಲೆ ನಗರದವಿವಿಪುರ,ಮಲ್ಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೊಗಡು ಅವರೆ ಕಾಯಿಯ ಮೇಳ ಆರಂಭವಾಗುತ್ತಿತ್ತು. ಅವರೆಕಾಯಿಂದ ಅಣಿಗೊಳಿಸಿದ ತಾಜಾತನದ ತರೇವಾರಿ ಉತ್ಪನ್ನಗಳು ಆಹಾರ ಪ್ರಿಯರಿಗೆ ದೊರಕುತ್ತಿತ್ತು. ಖಾದ್ಯ ಪ್ರಿಯರು ಕೂಡ ಅವರೆ ಮೇಳವನ್ನು ಎದುರು ನೋಡುತ್ತಿದ್ದರು. ಆದರೆ ಈ ಬಾರಿ ಅವರೆ ಮೇಳ ನಡೆಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ.ಇತ್ತೀಚೆಗೆ ಸುರಿದ ಮಳೆ ಅವರೆಕಾಯಿಫ‌ಸಲಿಗೆಹಾನಿಉಂಟುಮಾಡಿದೆ.

ಆ ಹಿನ್ನೆಲೆಯಲ್ಲಿಯೇ ಬೇಡಿಕೆಯಿರುವಷ್ಟು ಪೊರೈಕೆ ಆಗುತ್ತಿಲ್ಲ. ಅಳಿದುಳಿದ ಅವರೆಕಾಯಿಗಳು ಮಾರುಕಟ್ಟೆಗೆ ಬಾರದೇ ಹೊಲಗಳಲ್ಲೆ ಮಾರಾಟವಾಗುತ್ತಿದೆ ಎಂದು ಅವರೆಕಾಯಿ ವ್ಯಾಪಾರಿಗಳು ಹೇಳುತ್ತಾರೆ. ಅವರೆಕಾಯಿ ಬೆಳೆಗೆ ಇಬ್ಬನಿ ಇರಬೇಕು: ಕಳೆದ ವರ್ಷ ಅವರೆಕಾಯಿಯ ಉತ್ತಮ ಫ‌ಸಲು ಬಂದಿತ್ತು ಪೂರೈಕೆ ಹೇರಳವಾಗಿತ್ತು. ಆದರೆ ಈ ಸಲ ಅವರೆಕಾಯಿ ಬೆಳೆ, ಹೂವು ಬಿಡುವ ಸಂದರ್ಭದಲ್ಲಿ ಮಳೆ ಸುರಿಯಿತು.

ಆ ಹಿನ್ನೆಲೆಯಲ್ಲಿ ನೆಲದಲ್ಲಿ ತೇವಾಂಶ ಕೂಡ ಅಧಿಕವಾಯಿತು. ಸೂರ್ಯನ ಬಿಸಿಲಿಲ್ಲದ ಹಿನ್ನೆಲೆಯಲ್ಲಿ ಇಳುವರಿ ಕೂಡ ಕೈ ಕೊಟ್ಟಿತು ಎಂದು ಮಾಗಡಿಯ ಅವರೆಕಾಯಿ ವ್ಯಾಪಾರಿ ತಿಮ್ಮೇಗೌಡ ಹೇಳುತ್ತಾರೆ. ಸೊಗಡಿನ ಅವರೆಗೆ ಇಬ್ಬನಿ ಇರಬೇಕು ಹಾಗೆಯೇ ಸೂರ್ಯನ ಬಿಸಿಲು ಬೆಳೆಗಳ ಮೇಲೆ ಬೀಳಬೇಕು.ಆದರೆ ಈ ಬಾರಿ ಅಧಿಕ ಮಳೆಯ ಹಿನ್ನೆಲೆಯಲ್ಲಿ ಅವರೆ ಬೆಳೆ ಕೂಡ ಹಾನಿಗೊಳ ಗಾಯಿತು ಎಂದು ಮಾಹಿತಿ ನೀಡುತ್ತಾರೆ. ಅವರೆಕಾಯಿಬೇಳೆ ಬೆಲೆ ದುಪ್ಪಟ್ಟು: ಕಳೆದ ವರ್ಷ ಮಾರುಕಟ್ಟೆಯಲ್ಲಿ ಹೇಳರವಾಗಿ ಅವರೆ ಕಾಯಿ ಸಿಗುತ್ತಿತ್ತು.

ಹೀಗಾಗಿ ಅವರೆಕಾಯಿ ಕೆಜಿಗೆ 20 ರೂ.ದಿಂದ 30ರೂ.ಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಕಳೆದ ಬಾರಿಯ ವಾತಾವರಣ ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕೆಜಿಗೆ 40 ರೂ.ದಿಂದ 50ರೂ. ವರೆಗೂ ಅವರೆಕಾಯಿ ಮಾರಾಟವಾಗುತ್ತಿದೆ ಎಂದು ಕೆ.ಆರ್‌.ಮಾರುಕಟ್ಟೆಯ ಅವರೆಕಾಯಿ ವ್ಯಾಪಾರಿ ಮೂರ್ತಿ ಹೇಳುತ್ತಾರೆ. ಹಾಗೆಯೇ ಕಳೆದ ಸಲ ಅವರೆಬೇಳೆ ಕೆಜಿಗೆ 120ರೂ ದಿಂದ 130ರೂ.ಗೆ ಖರೀದಿ ಆಗುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಪೊರೈಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ 180 ರೂ.ದಿಂದ 200 ರೂ.ವರೆಗೂ ಮಾರಾಟವಾಗುತ್ತಿದೆ ಎಂದು ತಿಳಿಸುತ್ತಾರೆ.

ಇದನ್ನೂ ಓದಿ;- ಉತ್ತಮ ಇಳುವರಿ ಬಂದ್ರೂ ಬಾಳೆಹಣ್ಣಿಗೆ ಬರಲಿಲ್ಲ ಬೆಲೆ

ಮಹಾರಾಷ್ಟ್ರ ಕೂ R ಪೂರೈಕೆ ಆಗುತ್ತಿದೆ ನವೆಂಬರ್‌-ಡಿಸೆಂಬರ್‌ ತಿಂಗಳು ಅವರೆಕಾಯಿ ಸೀಜನ್‌.ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಜ್ಯವ್ಯಾಪಿ ಅವರೆಕಾಯಿ ಫ‌ಸಲು ನಷ್ಟವಾಗಿದೆ. ಮಹಾರಾಷ್ಟ್ರದಲ್ಲೂ ಅವರೆಕಾಯಿಗೆ ಬೇಡಿಕೆ ಇದೆ.ಆ ಹಿನ್ನೆಲೆಯಲ್ಲಿ ಚಿತ್ರದುರ್ಗ ಭಾಗದ ರೈತರು ಹೆಚ್ಚಿನ ಬೆಲೆಗಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟಮಾಡುತ್ತಿದ್ದಾರೆ. ಕೆ.ಆರ್‌.ಮಾರುಕಟ್ಟೆಗೆಈಗ ದಿನಕ್ಕೆ 30ರಿಂದ 40 ಮೂಟೆ ಅವರೆಕಾಯಿ ಪೂರೈಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಮಾರುಕಟ್ಟೆಗೆ ಪೂರೈಕೆ ಆಗುತ್ತಿರುವ ಅವರೆಕಾಯಿ ಕ್ಷಣಮಾತ್ರದಲ್ಲಿ ಮಾರಾಟವಾಗುತ್ತಿದೆ. ಅವರೆಖಾದ್ಯ ತಯಾರಿಸಲೆಂದೇ ಅಧಿಕ ಸಂಖ್ಯೆಯಲ್ಲಿ ವ್ಯಾಪಾರಸ್ಥರುಖರೀದಿ ಮಾಡುತ್ತಾರೆ ಎನ್ನುತ್ತಾರೆ.

ಎಲ್ಲೆಲ್ಲಿ ಅವರೆ ಕಾಯಿಬೆಳೆಯುತ್ತಾರೆ? ಅತಿ ಹೆಚ್ಚು ಅವರೆಯನ್ನು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ , ಮೈಸೂರು, ಚಿತ್ರದುರ್ಗ ಭಾಗಗಳಲ್ಲಿ ಬೆಳೆಯಲಾಗುತ್ತದೆ.ಅವರೆಯಲ್ಲಿ ಬಹಳ ವಿಧಗಳಿವೆ ಸೋನೆ ಅವರೆ, ಮಣಿ ಅವರೆ, ಕಡ್ಲೆ ಅವರೆ, ದಪ್ಪ ಅವರೆ ಎಲ್ಲವೂ ಚಳಿಗಾದಲ್ಲಿ ಬೆಳೆಯುವಂತದ್ದಾದರೂ ಸೋನೆ ಅವರೆಗಿರುವ ಬೇಡಿಕೆ, ರುಚಿ ಮತ್ತಾವುದಕ್ಕೂ ಬರುವುದಿಲ್ಲ.ಹೀಗಾಗಿಯೇ ಇದಕ್ಕೆ ಬೇಡಿಕೆ ಹೆಚ್ಚು.

“ಚಳಿಗಾಲಬಂತೆಂದರೆಅವರೆಕಾಯಿ ಸೀಜನ್‌ಆರಂಭ ವಾಗುತ್ತದೆ. ಆದರೆ ಇತ್ತೀಚೆಗೆ ಸುರಿದ ಮಳೆಯು ಅವರೆಕಾಯಿ ಬೆಳೆ ನಷ್ಟಕ್ಕೆಕಾರಣವಾಗಿದೆ.ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ಅವರೆಕಾಯಿ ಪೂರೈಕೆ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಅವರೆಕಾಯಿ ಬೆಲೆಯಲ್ಲಿಕೂಡ ಏರಿಕೆಯಾಗಿದೆ.” ●ಉಮೇಶ್‌ಮಿರ್ಜಿ,ಹಾಪ್‌ಕಾಮ್ಸ್‌ನವ್ಯವಸ್ಥಾಪಕ ನಿರ್ದೇಶಕ

– ದೇವೇಶ ಸೂರುಗುಪ್ಪ

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.