ಭೂ ಸರ್ವೇ ತ್ವರಿತ ಮಾಡಲು ಆಗ್ರಹ
Team Udayavani, Dec 17, 2021, 5:24 PM IST
ರಾಯಚೂರು: ಪೋಡಿ, ಹದ್ದು ಬಸ್ತು, 11ಇ ಸರ್ವೇ ಕಾರ್ಯವನ್ನು ಅನಗತ್ಯ ವಿಳಂಬ ಮಾಡುತ್ತಿದ್ದು, ತ್ವರಿತವಾಗಿ ಮಾಡಿ ಮುಗಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಗುರುವಾರ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಭೂ ಕಂದಾಯ ಅನಿಯಮಗಳ ಪ್ರಕಾರ ಪೋಡಿ, ಹದ್ದುಬಸ್ತು, ತಾತ್ಕಾಲ್ ಪೋಡಿ, 11ಇ ಸರ್ವೇ ಮಾಡಲು ಸಾಕಷ್ಟು ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯಾದ ಮೇಲೆ ಸಾಕಷ್ಟು ದಿನಗಳಾದರೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಅಲ್ಲದೇ, ನಿಯಮ ಬಾಹಿರವಾಗಿ ಸರ್ವೇ ಮಾಡುತ್ತಿದ್ದು, ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಸ್ಯೆ ವಿವರಿಸಿದರು.
ಭೂ ಮಾಪಕರು ಜಮೀನುಗಳಿಗೆಬಂದುಅಳತೆಮಾಡದೇ ಕೇವಲ ಹಳೆ ನಕ್ಷೆಗಳನ್ನು ಸಿದ್ಧಪಡಿಸಿ ರೈತರಿಗೆ ನೀಡುತ್ತಿದ್ದಾರೆ. ನೋಟಿಸ್ ನೀಡದೇ ಅಳತೆ ಮಾಡುತ್ತಿದ್ದಾರೆ. ಸರ್ವೇ ಕಾರ್ಯದಲ್ಲೂ ಅಕ್ರಮ ನಡೆಯುತ್ತಿದೆ. ಹಣ ಕೊಟ್ಟರೆ ಬೇಗ ಸರ್ವೇ ಮಾಡುತ್ತಿದ್ದು, ಹಣನೀಡದಿದ್ದರೆ ಅರ್ಜಿಗಳನ್ನೇ ತಿರಸ್ಕರಿಸಲಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಲಂಚ ಮುಕ್ತಗೊಳಿಸಬೇಕು. ಪೋಡಿ, ಹದ್ದುಬಸ್ತು, ತಾತ್ಕಲ್ ಪೋಡಿ, 11ಇ ಸರ್ವೇ ಪ್ರಕರಣಗಳಲ್ಲಿ ಸಂಬಂಧಿಸಿದ ಎಲ್ಲ ರೈತರಿಗೂ ನೋಟಿಸ್ ಜಾರಿಗೊಳಿಸಿ ಸರ್ವೇ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು.
ಪರವಾನಗಿ ಭೂ ಮಾಪಕರು ಕಡ್ಡಾಯವಾಗಿ ಕರ್ನಾಟಕ ಭೂ ಕಂದಾಯ ನಿಯಮ ಪಾಲಿಸಬೇಕು, ತಪ್ಪಿತಸ್ಥ ಪರವಾನಗಿ ಭೂ ಮಾಪಕರ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಪಡಿಸಬೇಕು ಹಾಗೂ ಸರ್ಕಾರದ ಆದೇಶದ ಪ್ರಕಾರ ಸರ್ವೇಗೆ ಸಂಬಂಧಿಸಿದ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಬೇಕು. ದಾಖಲಾದ ಮೇಲ್ಮನವಿಗಳನ್ನು ಎರಡು ತಿಂಗಳ ಒಳಗೇ ವಿಚಾರಣೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಂಗನಾಥ ಪಾಟೀಲ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ದಳವಾಯಿ, ಸದಸ್ಯರಾದ ಕೊಂಡರಾಜು ಹೀರಾಪುರ, ರಮೇಶ ಶಕ್ತಿನಗರ, ಶಂಕರಗೌಡ ಹೀರಾಪುರ ಸೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ
Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು
Raichur: ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ: ಸಚಿವ ಭೋಸರಾಜು
Raichur: ಬೆಟ್ಟದ ಪರಮೇಶ್ವರ ದೇವಸ್ಥಾನದ ಅರ್ಚಕಿ ನೇಣು ಬಿಗಿದು ಆತ್ಮಹತ್ಯೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.