![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 18, 2021, 12:28 PM IST
ಶ್ರೀರಂಗಪಟ್ಟಣ : ಇಲ್ಲಿನ ಪವಿತ್ರ ಸ್ಥಳ ಗೋಸಾಯಿಘಾಟ್ ಬಳಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಪ್ರದೀಪ್ ಕುಮಾರ್ ಎಂಬುವರ ಪತ್ನಿ ಭಾರ್ಗವಿ (30) ಹಾಗೂ ದೀಕ್ಷ ( 3) ಮೃತರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಖೆ ಪೊಲೀಸರಿಂದ ವ್ಯಕ್ತವಾಗಿದೆ. ಇವರು ಮೈಸೂರಿನ ಊಟಗಹಳ್ಳಿ ಗ್ರಾಮದಲ್ಲಿ ಸದ್ಯ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಭಾರ್ಗವಿಯನ್ನು ದೇವೇಗೌಡನ ಕೊಪ್ಪಲಿನಿಂದ ಲಕ್ಷ್ಮಿ ಸಾಗರ ಪ್ರದೀಪ್ ಕುಮಾರ್ ಗೆ ವಿವಾಹಮಾಡಿ ಕೊಡಲಾಗಿತ್ತು. ಶುಕ್ರವಾರ ಸಂಜೆಯಲ್ಲಿ ಗಂಜಾಮ್ ನ ಗೋಸಾಯಿಘಾಟ್ ಗೆ ಬಂದು ಕಾವೇರಿ ನದಿ ತೀರದಲ್ಲಿ ಚ ಪ್ಪಲಿ ,ಮೊಬೈಲ್ ಬಿಟ್ಟು ನೀರಲ್ಲಿ ಮುಳುಗಿದ್ದಾರೆ ಎಂದು ಮೂಲಗಳು ತಿಳುಸಿವೆ.
ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತಾಯಿ ಮಗುವಿನ ಶವಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಮೇಲಕ್ಕೆತ್ತಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.