ನಗರದಲ್ಲಿ ಗಿಡ ನೆಡಲು ಆಸಕ್ತಿ ತೋರದ ಸರಕಾರ !

ಅಭಿವೃದ್ಧಿ ಧಾವಂತದಲ್ಲಿ ಹಸುರು ಮಾಯ

Team Udayavani, Dec 18, 2021, 5:43 PM IST

ನಗರದಲ್ಲಿ ಗಿಡ ನೆಡಲು ಆಸಕ್ತಿ ತೋರದ ಸರಕಾರ !

ಮಹಾನಗರ: ಪರಿಸರದ ಹಸುರೀಕರಣಕ್ಕೆ ಒತ್ತು ನೀಡುತ್ತೇವೆ ಎಂಬ ರಾಜ್ಯ ಸರಕಾರವು ನಗರ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸಲು ಅರಣ್ಯ ಇಲಾಖೆಗೆ ಇನ್ನೂ ನಿಗದಿತ ಗುರಿ ನೀಡಿಲ್ಲ.

ನಗರದಲ್ಲಿ ಎಷ್ಟು ಕಿ.ಮೀ.ವರೆಗೆ, ಎಷ್ಟು ಗಿಡ ನೆಡಬೇಕು ಎಂಬ ಗುರಿಯನ್ನು ಅರಣ್ಯ ಇಲಾಖೆಗೆ ರಾಜ್ಯ ಸರಕಾರ ಪ್ರತೀ ವರ್ಷ ನೀಡಬೇಕು. ಅದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ಗಿಡ ಬೆಳೆಸಲಾಗುತ್ತದೆ. ನಿರ್ವಹಣೆಗೆಂದು ಹಂತ ಹಂತವಾಗಿ ಅನುದಾನ ಕೂಡ ಬಿಡುಗಡೆಯಾಗುತ್ತದೆ. ಆದರೆ, ಕೊರೊನಾ ನೆಪವೊಡ್ಡಿ ಕಳೆದ ಎರಡು ವರ್ಷ ಜಿಲ್ಲೆಗೆ ಯಾವುದೇ ಗುರಿ ನಿಗದಿಪಡಿಸಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲು ಸಾಧ್ಯವಾಗಿಲ್ಲ. ಸರಕಾರದ ಈ ನೀತಿಯಿಂದಾಗಿ ಜಿಲ್ಲೆಯ ಹಸುರೀಕಣಕ್ಕೆ ಧಕ್ಕೆ ಉಂಟಾಗಿದೆ.
ಮಂಗಳೂರು ನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ಪ್ರತೀ ವರ್ಷ ಸುಮಾರು 5ರಿಂದ 6 ಕಿ.ಮೀ. ವ್ಯಾಪ್ತಿ ರಸ್ತೆ ಬದಿಗಳಲ್ಲಿ, ಡಿವೈಡರ್‌ಗಳಲ್ಲಿ ಗಿಡ ನೆಡಲಾಗುತ್ತದೆ. ಕೆಲವು ಗಿಡಗಳನ್ನು ಪ್ರೋತ್ಸಾಹ ಧನದೊಂದಿಗೆ ಸಾರ್ವಜನಿಕರಿಗೆ, ಸಂಘ – ಸಂಸ್ಥೆಗಳಿಗೆ ವಿತರಿಸಲಾಗುತ್ತದೆ.

ನಗರ ಕೇಂದ್ರೀಕೃತವಾಗಿ ಈ ಹಿಂದೆ ನಡೆಸಿದ ಸಂಶೋಧನೆ ಯೊಂದರ ಪ್ರಕಾರ ಮಂಗಳೂರಿನ ಬಂದರು, ಕುದ್ರೋಳಿ ವಾರ್ಡ್‌ಗಳಲ್ಲಿ ಅತೀ ಕಡಿಮೆ ಹಸುರು ಪ್ರದೇಶ ಇದೆ ಎಂಬ ಅಂಶ ಕಂಡುಬಂದಿದೆ. ಅಭಿವೃದ್ಧಿ ಉದ್ದೇಶಕ್ಕೆ ನಗರದಲ್ಲಿ ಹಸುರು ಮಾಯವಾಗುತ್ತಿದ್ದು, ಮತ್ತೆ ಗಿಡ ನೆಟ್ಟು ಸಮತೋಲನ ಕಾಯ್ದುಕೊಳ್ಳಬೇಕಿದೆ. ಪ್ರೋತ್ಸಾಹ ನೀಡಬೇಕಾದ ರಾಜ್ಯ ಸರಕಾರವು ಇದೀಗ ಅನುದಾನ ಮತ್ತು ಗಿಡ ನೆಡಲು ಗುರಿ ನೀಡದ ಪರಿಣಾಮ ಅರಣ್ಯ ಇಲಾಖೆಯು ಸಿ.ಎಸ್‌.ಆರ್‌. ಅನುದಾನ ನಂಬಿ ಕೂತಿದೆ. ನಗರ ವ್ಯಾಪ್ತಿಯಲ್ಲಿರುವ ಕೆಲವೊಂದು ಕೈಗಾರಿಕೆ ಸಂಸ್ಥೆಗಳ ಸಹಯೋಗದೊಂದಿಗೆ ಸಿಎಸ್‌ಆರ್‌ ಅನುದಾನ ಕ್ರೋಡೀಕರಿಸಿ ನಗರದಲ್ಲಿ ಗಿಡ ನೆಡಲು ಇಲಾಖೆ ಮುಂದಾಗಿದೆ.

ವಲಯ ವ್ಯಾಪ್ತಿಗೂ ಸಿಗದ ಗುರಿ
ನಗರ ಹೊರತುಪಡಿಸಿ, ಜಿಲ್ಲಾ ವ್ಯಾಪ್ತಿಯ ಇತರ ವಲಯಗಳಿಗೂ ಇನ್ನೂ ನಿಗದಿತ ಗುರಿಯನ್ನು ರಾಜ್ಯ ಸರಕಾರ ನೀಡಲಿಲ್ಲ. ದ.ಕ. ಜಿಲ್ಲಾ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಪಂಜ, ಸುಳ್ಯ, ಸುಬ್ರಹ್ಮಣ್ಯ ವಲಯಗಳಿವೆ. ಈ ವ್ಯಾಪ್ತಿಯಲ್ಲಿ ರಾಮಪತ್ರೆ, ಉಂಡೆಹುಳಿ, ದಾಲಿcನಿ, ಹಲಸು, ಹೆಬ್ಬಲಸು ಸಹಿತ ಇತರ ಹಣ್ಣಿನ ಗಿಡಗಳನ್ನು ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿಯೂ ಹೆಚ್ಚಿನ ಹಣ್ಣಿನ ಗಿಡಗಳನ್ನು ನೆಡಲಾಗುತ್ತದೆ. ಆದರೆ, ಸದ್ಯ ಈ ಎಲ್ಲ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ.

ಗುರಿ ಸಿಕ್ಕಿಲ್ಲ
ನಗರ ವ್ಯಾಪ್ತಿಯಲ್ಲಿ ಸಹಿತ ಜಿಲ್ಲೆಯಲ್ಲಿ ಗಿಡ ನೆಡುವುದಕ್ಕೆ ರಾಜ್ಯ ಸರಕಾರದಿಂದ ಇನ್ನೂ, ಯಾವುದೇ ರೀತಿಯ ಗುರಿ ಸಿಕ್ಕಿಲ್ಲ. ಕೊರೊನಾ ಕಾರಣ ದಿಂದ ಕಳೆದ ವರ್ಷವೂ ಟಾರ್ಗೆಟ್‌ ನೀಡಿರ ಲಿಲ್ಲ. ಇದೇ ಕಾರಣಕ್ಕೆ, ಸದ್ಯ ಗಿಡ ನೆಡಲು ಅನು ದಾನದ ಕೊರತೆ ಇದೆ. ಸಿ.ಎಸ್‌.ಆರ್‌. ಅನುದಾನ ಬಳಸಿಕೊಂಡು ಗಿಡ ನೆಡಲು ಆದ್ಯತೆ ನೀಡುತ್ತೇವೆ.
 -ಡಾ| ದಿನೇಶ್‌ ಕುಮಾರ್‌,
ಉಪ ಸಂರಕ್ಷಣಾಧಿಕಾರಿ ದ.ಕ. ಜಿಲ್ಲೆ

ಟಾಪ್ ನ್ಯೂಸ್

BY-Vijayendra

CM: ಸಿದ್ದುಗೆ ಮಾದರಿ ಕೇಜ್ರಿವಾಲೋ, ರಾಮಕೃಷ್ಣ ಹೆಗಡೆಯೋ?: ಬಿ.ವೈ.ವಿಜಯೇಂದ್ರ

Modi 2

PM Modi; 10 ವರ್ಷದಲ್ಲಿ ಕಾಂಗ್ರೆಸ್‌ ಸಮರ್ಥ ವಿಪಕ್ಷವೂ ಆಗಲಿಲ್ಲ

ISREL

Israel; ಬೈರುತ್‌ ಮೇಲೆ ಕ್ಷಿಪಣಿದಾಳಿ: ಹೆಜ್ಬುಲ್ಲಾ ಕಮಾಂಡರ್‌ ಹ*ತ್ಯೆ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ

Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Mangaluru: ಅಕ್ರಮ ಮರಳುಗಾರಿಕೆಗೆ ತಡೆ; ದ.ಕ. ಜಿಲ್ಲಾಧಿಕಾರಿ

Mangaluru: ಅಕ್ರಮ ಮರಳುಗಾರಿಕೆಗೆ ತಡೆ; ದ.ಕ. ಜಿಲ್ಲಾಧಿಕಾರಿ

Dakshina Kannada: ಆಹಾರ ಸಂಸ್ಕರಣೆ ತಾಣವಾಗಿಸಲು ಸಂಸದ ಚೌಟ ಮನವಿ

Dakshina Kannada: ಆಹಾರ ಸಂಸ್ಕರಣೆ ತಾಣವಾಗಿಸಲು ಸಂಸದ ಚೌಟ ಮನವಿ

Surathkal: ನಿಗೂಢ ಸ್ಫೋಟ; ಬೆಚ್ಚಿ ಬಿದ್ದ ಜನತೆ; ನಿಟ್ಟುಸಿರು

Surathkal: ನಿಗೂಢ ಸ್ಫೋಟ; ಬೆಚ್ಚಿ ಬಿದ್ದ ಜನತೆ; ನಿಟ್ಟುಸಿರು

Mangaluru: ಸೇಲ್ಸ್‌ ಎಕ್ಸಿಕ್ಯೂಟಿವ್‌ ನಾಪತ್ತೆ

Mangaluru: ಸೇಲ್ಸ್‌ ಎಕ್ಸಿಕ್ಯೂಟಿವ್‌ ನಾಪತ್ತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BY-Vijayendra

CM: ಸಿದ್ದುಗೆ ಮಾದರಿ ಕೇಜ್ರಿವಾಲೋ, ರಾಮಕೃಷ್ಣ ಹೆಗಡೆಯೋ?: ಬಿ.ವೈ.ವಿಜಯೇಂದ್ರ

police USA

California: ದೇಗುಲ ಧ್ವಂಸ ಮಾಡಿದ ದುಷ್ಕರ್ಮಿಗಳು

Supreme Court

Supreme; ಎಲ್ಲ ಮಹಿಳೆಯರಿಗೂ ಕೌಟುಂಬಿಕ ದೌರ್ಜನ್ಯತಡೆ ಕಾಯ್ದೆ ಅನ್ವಯ

Modi 2

PM Modi; 10 ವರ್ಷದಲ್ಲಿ ಕಾಂಗ್ರೆಸ್‌ ಸಮರ್ಥ ವಿಪಕ್ಷವೂ ಆಗಲಿಲ್ಲ

ISREL

Israel; ಬೈರುತ್‌ ಮೇಲೆ ಕ್ಷಿಪಣಿದಾಳಿ: ಹೆಜ್ಬುಲ್ಲಾ ಕಮಾಂಡರ್‌ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.