ಲಸಿಕೆ ಪಡೆಯದಿದ್ರೂ ಬಂದಿದೆ ಮೆಸೇಜ್
Team Udayavani, Dec 19, 2021, 3:53 PM IST
ತೇರದಾಳ: ಸರಕಾರಿ ಆಸ್ಪತ್ರೆ ಸಿಬ್ಬಂದಿ ಅವಾಂತರದಿಂದ ಕೊರೊನಾ ಮೊದಲ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪೂರ್ಣಗೊಂಡಿದೆ ಎಂಬ ಸಂದೇಶ ಬಂದಿದೆ.
ತೇರದಾಳ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಮೊದಲ ಲಸಿಕೆ ಪಡೆದು ಮೂರು ತಿಂಗಳು ಗತಿಸಿದ ಹಲವರಿಗೆ ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೂ ತಮ್ಮ ಡೋಸ್ಪೂರ್ಣಗೊಂಡಿದೆ ಎಂಬ ಸಂದೇಶ ಅವರ ಮೊಬೈಲ್ ಗೆ ಬರುತ್ತಿವೆ. ಇದು ಅಷ್ಟೇ ಅಲ್ಲ ಬೇರೆಯವರ ಹೆಸರಿನ ಎರಡನೇ ಡೋಸ್ ಲಸಿಕೆ ಪೂರ್ಣಗೊಂಡಿದೆಎಂಬ ಸಂದೇಶಗಳು ಕೂಡ ಇನ್ನೊಬ್ಬರಿಗೆ ಬರುತ್ತಿವೆ.ಇದರಿಂದ ಸಾರ್ವಜನಿಕರು ಸರಕಾರಿ ಆಸ್ಪತ್ರೆಗೆ ಅಲೆದಾಡುವಂತಾಗಿದೆ.
ನಾನು ಮೂರು ತಿಂಗಳ ಹಿಂದೆ 1ನೇ ಡೋಸ್ ಲಸಿಕೆ ಪಡೆದಿರುವೆ. ಡಿ.16ಕ್ಕೆ 2ನೇ ಡೋಸ್ಲಸಿಕೆ ಪಡೆಯಬೇಕಿತ್ತು. ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯುವವನಿದ್ದೇನೆ. ಆದರೆ ಡಿ.16ರ ಮಧ್ಯಾಹ್ನ 2:35ಕ್ಕೆ 2ನೇ ಡೋಸ್ ಲಸಿಕೆ ಪಡೆದ ಬಗ್ಗೆ ಮೆಸೇಜ್ ಬಂದಿದೆ. ಈಗ ಲಸಿಕೆ ಪಡೆಯಲು ಹೇಗೆಹೋಗುವುದು ತಿಳಿಯದಾಗಿದೆ. ಅಲ್ಲದೆ 2ನೇ ಡೋಸ್ಲಸಿಕೆ ಪಡೆದ ಬಗ್ಗೆ ನನಗೆ ಪರಿಚಯವಿಲ್ಲದವರೊಬ್ಬರಹೆಸರಿನ(ಸವಿತಾ ಪಟ್ಟಣಶೆಟ್ಟಿ) ಮೆಸೇಜ್ ಕೂಡ ನನಗೆಬಂದಿದ್ದು ಆಶ್ಚರ್ಯವಾಗಿದೆ ಎನ್ನುತ್ತಾರೆ ತೇರದಾಳದ ಅಲ್ಲಪ್ಪ ಯಾದವಾಡ
ಜಮಖಂಡಿ ತಾಲೂಕಿನಲ್ಲಿ ಕೋವಿಡ್ ಮೊದಲ ಡೋಸ್ ಪಡೆದವರು ಶೇ.95, 2ನೇ ಡೋಸ್ ಪಡೆದವರು ಶೇ.75 ಎಂದು ಅಂದಾಜಿಸಲಾಗಿದೆ. ಕಳೆದ 8-10ದಿನಗಳಿಂದ ಲಸಿಕೆ ಪಡೆಯಲು ಬರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಿತ್ಯ 2ರಿಂದ 5 ಸಾವಿರ ಜನ ಲಸಿಕೆ ಪಡೆಯುತ್ತಿದ್ದಾರೆ. 2-3 ತಿಂಗಳಲ್ಲಿಶೇ.100ರ ಸಾಧನೆ ಸಾಧ್ಯವಿದೆ. ಆದರೆ ಡೋಸ್ ಪಡೆಯದಿದ್ದರೂ ಅಥವಾಬೇರೊಬ್ಬರ ಮೊಬೈಲ್ಗೆ ಇನ್ನೊಬ್ಬರ ಸಂದೇಶ ಹೋಗುತ್ತಿದ್ದು, ಆಸ್ಪತ್ರೆಗಳಲ್ಲಿನ ಕಂಪ್ಯೂಟರ್ ಆಪರೇಟರ್ ಅವರ ಅವಾಂತರವೇ ಕಾರಣವಾಗಿರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಯಾವುದೆ ಭಯ ಪಡೆಯದೆ ಲಸಿಕೆ ಪಡೆಯಬೇಕು. -ಡಾ|ಜಿ.ಎಚ್. ಗಲಗಲಿ, ತಾಲೂಕು ವೈದ್ಯಾಧಿ ಕಾರಿ, ಜಮಖಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ
MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ
Muda ಸೈಟ್ ಹಿಂತಿರುಗಿಸಿರುವ ಸಿದ್ದರಾಮಯ್ಯ ಪತ್ನಿಯ ಕ್ರಮಕ್ಕೆ ತಿಮ್ಮಾಪುರ ಪ್ರತಿಕ್ರಿಯೆ
Mudhol: ಪ್ರಕರಣ ಹಿಂಪಡೆಯದಿದ್ದರೆ ಹಿಂದೂ ಪರ ಸಂಘಟನೆಯಿಂದ ಜಿಲ್ಲಾದ್ಯಂತ ಹೋರಾಟದ ಎಚ್ಚರಿಕೆ
Rabkavi Banhatti: ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು: ಶಾಸಕ ಸಿದ್ದು ಸವದಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ
Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.