ಗ್ರಾಮದೇವತೆ ಜಾತ್ರೆಗೆ ಪೂರ್ಣಕುಂಭ ಮೆರಗು : ಗ್ರಾಮ ದೇವಿಯರ ಭವ್ಯ ಮೆರವಣಿಗೆ
Team Udayavani, Dec 21, 2021, 2:49 PM IST
ಬಾಗಲಕೋಟೆ: ಸುಮಾರು 30 ವರ್ಷಗಳ ಬಳಿಕ ನಗರದಲ್ಲಿ ನಡೆಯುತ್ತಿರುವ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಆರಂಭಗೊಂಡಿದ್ದು, ಇಳಕಲ್ಲ ಸೀರೆಯುಟ್ಟ
ಮಹಿಳೆಯರು, ಡೊಳ್ಳು ಕುಣಿತ, ಹಲವು ವಾದ್ಯಗಳ ಸಂಗೀತ ಗಮನ ಸೆಳೆಯಿತು. ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಈ ಬಾರಿಯ ಅದ್ಧೂರಿ ಚಾಲನೆ ದೊರೆತಿದೆ. ಬೆಳಿಗ್ಗೆ ಕಿಲ್ಲೆಯ ಶ್ರೀ ದ್ಯಾಮವ್ವ -ದುರ್ಗವ್ವ ದೇವಿ ದೇವಸ್ಥಾನದಿಂದ ಗ್ರಾಮ ದೇವಿಯರ ಭವ್ಯ ಪೂರ್ಣಕುಂಭದ ಮೆರವಣಿಗೆಗೆ ಶಾಸಕ ಡಾ| ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡ ಮತ್ತಿತರರು ಚಾಲನೆ ನೀಡುತ್ತಿದ್ದಂತೆ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು. ಹೂವಿನಿಂದ
ಅಲಂಕೃತಗೊಂಡ ಟ್ರಾಕ್ಟರ್ನಲ್ಲಿ ದೇವಿಯು ವಿರಾಜಮಾನಗಳಾಗಿ ಕಂಗೊಳಿಸಿದಳು. ನಾಲ್ಕು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.
ಸಾಂಪ್ರದಾಯಿಕ ಇಳಕಲ್ಲ ಸೀರೆ ತೊಟ್ಟಿದ್ದ ಸುಮಂಗಲಿಯರು ಕುಂಭ ಹೊತ್ತು ಶ್ರೀ ಗ್ರಾಮದೇವಿಯರ ಭವ್ಯ ಮೆರವಣಿಗೆ ಸಾಗಿದಾಗ ಜೈ ಕಾರಗಳು ಮೊಳಗಿದವು. ಮೆರವಣಿಗೆಯುದ್ದಕ್ಕೂ ಆಂಜನೇಯ, ಶ್ರೀರಾಮ, ಸೀತಾಮಾತೆ ವೇಷಧಾರಿಗಳ ಗೊಂಬೆ ಕಲಾವಿದರು ಹೆಜ್ಜೆ ಹಾಕಿದರು. ಮಹಿಳಾ ಕಲಾವಿದರ ಡೊಳ್ಳು ಕುಣಿತ, ಜಾಂಜ್ ಪಾತಾಕ, ಕರಡಿ ಮಜಲು, ವೀರಗಾಸೆ,
ಬ್ಯಾಂಡ್ ನಾದ ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಿತು. ಮೆರವಣಿಗೆಯು ನಗರದ ಪಂಕಾ ಮಸೀದಿ, ಹಳಪೇಟ, ಶಾರದಾ ಪ್ರಿಟಿಂಗ್ ಪ್ರಸ್, ಟೆಂಗಿನಮಠ, ಬಿವಿವಿ ಸಂಘದ ಮುಖ್ಯದ್ವಾರ, ಕಾಲೇಜು ರಸ್ತೆ ಮೂಲಕದ ಬಸವೇಶ್ವರ ವೃತ್ತ ತಲುಪುತ್ತಿದ್ದಂತೆ ಜಯ-ಘೋಷಣೆಗಳು ಮುಗಿಲು ಮುಟ್ಟಿದವು.
ನಂತರ ಎಂ.ಜಿ ರಸ್ತೆ, ವಲ್ಲಭಾಯಿ ಚೌಕ, ದುರ್ಗಾದೇವಿ ದೇವಸ್ಥಾನ, ಪಾದಗಟ್ಟಿ ಮೂಲಕ ಮರಳಿ ದೇವಸ್ಥಾನಕ್ಕೆ ತಲುಪಿತು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಂಡೇರಾವ್ ಸರದೇಸಾಯಿ, ಉಪಾಧ್ಯಕ್ಷ ಅಶೋಕ ಲಿಂಬಾವಳಿ, ಪ್ರಮುಖರಾದ ಸಂಗಯ್ಯ ಸರಗಣಾಚಾರಿ, ಸುರೇಶ ಕುದರಿಕಾರ, ಸದಾನಂದ ನಾರಾ, ಕಾಂತು ಪತ್ತಾರ, ಶ್ರೀನಾಥ ಸಜ್ಜನ, ಸಂಗಪ್ಪ ಸಜ್ಜನ, ರಮೇಶ ಕೋಟಿ, ನಾಗರಾಜ ಹದ್ಲಿ, ಗುಂಡುರಾವ್ ಶಿಂಧೆ, ಶ್ರೀಶೈಲ ಗಿರಗಾಂವಿ, ಪರಶುರಾಮ ದಾವಣಗೇರಿ, ಮಲ್ಲಿಕಾರ್ಜುನ ಶಹಾಪುರ, ತಾನಾಜಿ ಜಮಖಂಡಿ, ಮಂಜುನಾಥ ಬಡಿಗೇರ, ಅಶೋಕ ಪವಾರ, ಸುರೇಶ ಮಜ್ಜಗಿ, ಸುಧಾ ದೇಸಾಯಿ, ಶಶಿಕಲಾ ಮಜ್ಜಗಿ, ಪಾರ್ವತಿ ಬಡಿಗೇರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.