![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 24, 2021, 2:00 PM IST
ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನಿರ್ದೇಶಕರು ಬರುತ್ತಿದ್ದಾರೆ. ಹೀಗೆ ಬರುವ ನಿರ್ದೇಶಕರು ತಮ್ಮ ಸಿನಿಮಾದ ಟೈಟಲ್ ವಿಭಿನ್ನವಾಗಿರಬೇಕೆಂದು ಕನಸು ಕಂಡು ಅಂತಹ ಟೈಟಲ್ ಮೊರೆ ಹೋಗುತ್ತಾರೆ. ಈಗ ನವ ನಿರ್ದೇಶಕ ಶ್ರೀವತ್ಸ “ದ್ವಿಪಾತ್ರ’ ಎಂಬ ಸಿನಿಮಾವನ್ನು ಸದ್ದಿಲ್ಲದೇ ಮಾಡಿ ಮುಗಿಸಿದ್ದಾರೆ.
ಚಿತ್ರದಲ್ಲಿ ಬರುವ ಮುಖ್ಯ ಪಾತ್ರಧಾರಿಗಳ ದ್ವಂದ್ವ ವ್ಯಕ್ತಿತ್ವವೇ ದ್ವಿಪಾತ್ರ ಎಂಬ ಶೀರ್ಷಿಕೆಗೆ ಸ್ಫೂರ್ತಿ ಎನ್ನುತ್ತಾರೆ ನಿರ್ದೇಶಕ ಶ್ರೀವತ್ಸ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳನ್ನು ತನಿಖೆ ಮಾಡುತ್ತಿರುವ ಪಾತ್ರಧಾರಿಗಳೇ ಕಥೆ ಸಾಗುತ್ತಾ ಅಪರಾಧಿಗಳಾಗಿ ಗೋಚರಿಸುತ್ತಾರೆ. ಹಾಗಾದರೆ ನಿಜವಾದ ಅಪರಾಧಿಗಳು ಯಾರು ಪ್ರತಿ ಪಾತ್ರಕ್ಕೂ ಎರಡು ವ್ಯಕ್ತಿತ್ವವಿದ್ದು, ಇದೇ ದ್ವಿಪಾತ್ರ ಚಿತ್ರದ ಮುಖ್ಯ ಸಾರಾಂಶ.
ಇದನ್ನೂ ಓದಿ:ಸನ್ನಿ ಲಿಯೋನ್ ಮಧುಬನ್ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ನೆಟ್ಟಿಗರ ಆಕ್ರೋಶ ಯಾಕೆ
ಚಿತ್ರದ ಮುಖ್ಯಭೂಮಿಕೆಯಲ್ಲಿ ಚಂದು ಗೌಡ, ಸತ್ಯಾಶ್ರಯ, ಅವಿನಾಶ್, ಮಾಳವಿಕಾ ಅವಿನಾಶ್, ಸುಚೇಂದ್ರಪ್ರಸಾದ್ ಅವರು ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್ ಕೊಣನೂರು, ಪ್ರಶಾಂತ್ ಸಿದ್ದಿ, ರಘುಗೌಡ ಪಾಯಲ್ ಚಂಗಪ್ಪ, ಚನ್ನಕೇಶವ, ಸಂದೀಪ್ ನಾರಾಯಣ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಸತ್ಯಾಶ್ರಯ, ಹೆಬ್ಬಗೋಡಿ ಮಧುಸೂಧನ್, ಜಯಶ್ರೀ ಅವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು, ಸಕಲೇಶಪುರ, ಹಾಸನ, ಚಿಕ್ಕಬಳ್ಳಾಪುರ ಮತ್ತು ಗುಲ್ಬರ್ಗ ಹಾಗೂ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಲಿದೆ ಚಿತ್ರತಂಡ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.