ಹಿಂಗಾರು ಬಿಳಿಜೋಳ ಇಳುವರಿ ಹೆಚ್ಚುವ ಹಿಗ್ಗು


Team Udayavani, Dec 25, 2021, 3:30 PM IST

13corn

ವಾಡಿ: ಮಹಾ ಮಳೆ ಬೇಸಾಯಗಾರರಿಗೆ ಪ್ರಸಕ್ತ ವರ್ಷವೂ ಆಘಾತ ತಂದೊಡ್ಡಿದ್ದು, ಕಾಳು ನಾಶದಿಂದ ತೊಗರಿ ಗಿಡಗಳು ಬರಗೆಟ್ಟು ನಿಂತಿವೆ. ಸತತ ಬರಗಾಲದ ಹೊಡೆತ ಅನುಭವಿಸುತ್ತಿರುವ ಅನ್ನದಾತರ ಬದುಕಿಗೆ ಆಸರೆ ಆಗಬೇಕಿದ್ದ ಮುಂಗಾರು ಬೆಳೆಗಳೆಲ್ಲವೂ ಕೈಬಿಟ್ಟಿವೆ.

ಈ ಭಾಗದ ಹಿಂಗಾರು ಬೆಳೆ ಬಿಳಿಜೋಳ ಹುಲುಸಾಗಿ ಫಸಲು ನೀಡಿದ್ದು, ಇಳುವರಿ ಹೆಚ್ಚುವ ಭರವಸೆ ಮೂಡಿಸಿದೆ. ಸೈನಿಕ ಹುಳುಗಳ ಕಾಟದ ಭೀತಿ ನಡುವೆ ಬೆಳೆ ಸಂರಕ್ಷಣೆ ಮಹತ್ವ ಪಡೆದುಕೊಂಡಿದ್ದು, ಒಂದೂವರೆ ತಿಂಗಳ ಜೋಳದ ಬೆಳೆಗೆ ಹುಳು ಬಾಧೆ ತಡೆಯುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹುಳುಗಳು ಎಲೆಗಳನ್ನು ತಿಂದು ಹಾಕದಂತೆ ಎಚ್ಚರವಹಿಸುತ್ತಿದ್ದಾರೆ. ಜೋಳದ ಸುಳಿ ಕೀಟಗಳ ಬಾಯಿಗೆ ಆಹಾರವಾದರೆ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ.

ಬಳವಡಗಿ, ಕೊಂಚೂರು, ನಾಲವಾರ, ಕೊಲ್ಲೂರು, ಹಳಕರ್ಟಿ, ರಾವೂರ, ಸನ್ನತಿ, ಬನ್ನೇಟಿ, ಮಾರಡಗಿ, ಮಳಗ, ಕುಂದನೂರು, ಇಂಗಳಗಿ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲಿ ಮುಗ್ಗರಿಸಿದ ತೊಗರಿ, ಹತ್ತಿ ನಡುವೆ ಜೋಳ ಹಿಗ್ಗಿನಿಂದ ಬೆಳೆಯುತ್ತಿದೆ. ಡಿಸೆಂಬರ್‌ ತಿಂಗಳ ಕೊರೆಯುವ ಚಳಿಯ ಶೀತಕ್ಕೆ ಬೆಳೆಯುವ ಹಸಿರೆಲೆಯ ಮಾಲ್ದಂಡಿ ಬಿಳಿಜೋಳದ ಫಸಲು, ರೈತರ ಪಾಲಿನ ಸಂಕಷ್ಟದ ದಿನಗಳಲ್ಲಿ ಸಂಗಾತಿಯಾಗುವ ಬೆಳೆಯಾಗಿದೆ. ಮೊದಲೇ ಬರಗಾಲದಿಂದ ಬಳಲಿ ಬೆಂಡಾಗಿರುವ ರೈತರಿಗೆ ಹುಳು ಬಾಧೆ ನುಂಗಲಾರದ ತುತ್ತಾಗಿದೆ.

ಇದರ ನಡುವೆಯೂ ಕೃಷಿಕರು ಜೋಳ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಹೆಣ್ಣುಚಿಟ್ಟೆ ಆರಂಭದಲ್ಲಿ ನೂರರಿಂದ ಇನ್ನೂರು ಮೊಟ್ಟೆಗಳನ್ನು ಗುಂಪುಗುಂಪಾಗಿ ಎಲೆಗಳ ಕೆಳಭಾಗದಲ್ಲಿ ಇಡುತ್ತದೆ. ಹುಳಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾದರೆ ಸರಿಸುಮಾರು 1500ರಿಂದ 2000ರ ವರೆಗೆ ಮೊಟ್ಟೆ ಇಡುವ ಸಾಮರ್ಥ್ಯವನ್ನು ಹೆಣ್ಣು ಚಿಟ್ಟೆ ಹೊಂದಿದೆ. ಪ್ರಾಥಮಿಕ ಹಂತದ ಹುಳುಗಳು ಎಲೆಯ ತೆರೆದ ಮೇಲ್ಭಾಗ ತಿನ್ನುತ್ತವೆ. ಪರಿಣಾಮ ತೆರೆದ ಭಾಗವು ಬೆಳಗ್ಗೆ ಕಾಣುತ್ತದೆ. ನಂತರದ ದಿನಗಳಲ್ಲಿ ಗಿಡಗಳ ಸುಳಿಯಲ್ಲಿ ಸೇರಿಕೊಂಡು ಒಳಗಿನಿಂದ ಕಾಂಡ ಕೊರೆಯುತ್ತದೆ. ಇದರಿಂದ ಬೆಳೆಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾಗುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಜೋಳ ಬಿತ್ತನೆ ಮಾಡಿರುವ ತಾಲೂಕಿನ ಕೃಷಿಕರು, ಎತ್ತರಕ್ಕೆ ಬೆಳೆದಿರುವ ಬೆಳೆ ತೆನೆಕಟ್ಟುವುದನ್ನೇ ಎದುರು ನೋಡುತ್ತಿದ್ದಾರೆ. ಬೆಳೆಗೆ ಮಾರಕವಾಗದ ಪೂರಕ ತೇವಾಂಶ ವಾತಾವರಣ ಸೃಷ್ಟಿಯಾಗಿದರೆ ಮಾತ್ರ ಜೋಳ ಕೈಸೇರುವ ಸಾಧ್ಯತೆಯಿದೆ. ನೇಗಿಲಯೋಗಿ ನಷ್ಟದ ಕೂಪಕ್ಕೆ ಮೈಯೊಡ್ಡುವ ಮೊದಲು ಕೃಷಿ ವಿಜ್ಞಾನಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದಾಗಬೇಕಿದೆ.

ಹಿಂದಿನ ವರ್ಷದಂತೆ ಪ್ರಸಕ್ತ ವರ್ಷವೂ ಬಹಳ ನಿರೀಕ್ಷೆ ಹುಟ್ಟಿಸಿದ ತೊಗರಿ ಮತ್ತು ಶೇಂಗಾ ಸಂಪೂರ್ಣ ಹಾಳಾಗಿದೆ. ಇಷ್ಟುದಿನ ಜೋಳ ಬೆಳೆಯ ಸುಳಿಗೆ ಸೈನಿಕ ಹುಳುಗಳ ಕಾಟವಿತ್ತು. ಅದೀಗ ನಿವಾರಣೆಯಾಗಿದೆ. ಭೂಮಿ ತೇವಾಂಶ ಕಾಯ್ದುಕೊಂಡಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಇಬ್ಬನಿ ಬೆಳೆ ಬೆಳವಣಿಗೆಗೆ ಸಹಕಾರಿಯಾಗಿದೆ. ಸದ್ಯಕ್ಕಂತೂ ಜೋಳ ಚೆನ್ನಾಗಿದೆ. ತೆನೆಯಾಗಿ ಕಾಳು ಕಟ್ಟಿದರೆ ಮಾತ್ರ ರೈತ ಉಳಿಯುತ್ತಾನೆ. -ಶರಣಪ್ಪ ಗಂಜಿ, ಲಾಡ್ಲಾಪುರ ರೈತ

-ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.