ಪಾಕಿಸ್ಥಾನಿಗಳು-ತಾಲಿಬಾನ್‌ಗಳ ನಡುವೆ ಬೇಲಿಗಾಗಿ ಕಾದಾಟ!


Team Udayavani, Dec 26, 2021, 6:30 AM IST

ಪಾಕಿಸ್ಥಾನಿಗಳು-ತಾಲಿಬಾನ್‌ಗಳ ನಡುವೆ ಬೇಲಿಗಾಗಿ ಕಾದಾಟ!

ಕಾಬೂಲ್‌/ಇಸ್ಲಾಮಾಬಾದ್‌: ಅಫ್ಘಾನಿಸ್ಥಾನ ವನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಂಡ ಬಳಿಕ ಮೊದಲು ಸಂತಸ ವ್ಯಕ್ತಪಡಿಸಿದ್ದು ಪಾಕಿ ಸ್ಥಾನ. ಮೊದಲಿನಿಂದಲೂ ಕೂಡ ಉಗ್ರ ಸಂಘಟ ನೆಯ ಜತೆಗೆ ಸ್ನೇಹ ಹಸ್ತ ಚಾಚುತ್ತಾ ಬಂದಿದೆ. ಆ ಗಾಢ ಮಿತ್ರರ ನಡುವೆ ಗುಂಡಿನ ಹಾರಾಟ ನಡೆದಿದೆ. ಪಾಕಿಸ್ಥಾನದ ಖೈಬರ್‌ ಪಖ್ತಂಖ್ವಾ ಪ್ರಾಂತ್ಯದ ಬಜೌರ್‌ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ತಾಲಿಬಾನ್‌ ಉಗ್ರರು ಮತ್ತು ಪಾಕ್‌ ಯೋಧರ ನಡುವೆ ಅರ್ಧ ಗಂಟೆ ಕಾಲ ಗುಂಡಿನ ಚಕಮಕಿ ನಡೆದಿದೆ.  ಗಂಜ್ಗಾ, ಸಾರ್ಕನೋ ಮತ್ತು ಕುನಾರ್‌ ಎಂಬಲ್ಲಿ ಈ ಘಟನೆ ನಡೆದಿದೆ. ಆದರೆ ತಾಲಿಬಾನ್‌ ಮತ್ತು ಪಾಕಿಸ್ಥಾನ ಮಾತ್ರ ಬಾಯಿಬಿಟ್ಟಿಲ್ಲ ಎನ್ನುವುದು ಗಮನಾರ್ಹ.  ಆದರೆ ಸ್ಥಳೀಯ ಮಾಧ್ಯಮಗಳಲ್ಲಿ ಘಟನೆಯ ಫೋಟೋ ಸಹಿತ ವರದಿಯಾಗಿವೆ. ಜತೆಗೆ ವೀಡಿಯೋಗಳೂ ಕೂಡ ಹರಿದಾಡುತ್ತಿವೆ.

ಸರಿಯಾಯಿತು ಎಂದಿದ್ದರು: ಗಡಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಗೊಂದಲ ಗಳು ಇವೆ. ಕೆಲವು ದಿನಗಳ ಹಿಂದೆಯೇ ಅದರ ಬಗ್ಗೆ ಸಭೆ ನಡೆಸಿ ಬಿಕ್ಕಟ್ಟು ಪರಿಹಾರ ಮಾಡಿ ಕೊಂಡಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿ ಕೊಂಡಿದ್ದವು. ತೆಹ್ರೀಕ್‌-ಎ-ತಾಲಿಬಾನ್‌ ಉಗ್ರ ಸಂಘಟನೆ ಪಾಕಿ ಸ್ಥಾನದೊಂದಿಗೆ ಮಾಡಿಕೊಂಡಿದ್ದ ಕದನ ವಿರಾಮವನ್ನು ಮುರಿಯುವುದಾಗಿಯೂ ಹೇಳಿತ್ತು. ಅದರ ಬೆನ್ನಲ್ಲೇ ಈ ಕಾಳಗ ನಡೆದಿದೆ.

ಅಫ್ಘಾನಿಸ್ಥಾನ ಜತೆಗೂ ಗಡಿ ತಗಾದೆ: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತದ ಜತೆಗೆ ಕಾಲುಕೆರೆದು ಪಾಕಿಸ್ಥಾನ ಜಗಳಕ್ಕೆ ಬರುತ್ತದೆ. ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ನಡುವೆ 2,600 ಕಿಮೀ ದೂರದ ಅಂತಾರಾಷ್ಟ್ರೀಯ ಗಡಿ ಇದೆ. ಎರಡೂ ರಾಷ್ಟ್ರಗಳ ಮಧ್ಯೆ ಇರುವ ದುರಂದ್‌ ರೇಖೆಯನ್ನೇ ಅಂತಾರಾಷ್ಟ್ರೀಯ ಗಡಿಯೆಂದು ಹೇಳಲಾಗುತ್ತದೆ. ಅಫ್ಘಾನ್‌ನಿಂದ ಉಗ್ರರ ಒಳನು ಸುಳುವಿಕೆ ತಪ್ಪಿಸುವ ನಿಟ್ಟಿನಲ್ಲಿ ಪಾಕಿಸ್ಥಾನ 2017ರಿಂದ ತನ್ನ ಗಡಿಗೆ ಬೇಲಿ ಹಾಕಿಕೊಳ್ಳ ಲಾರಂಭಿಸಿದೆ. ಅದರಲ್ಲಿ ಶೇ. 90ರಷ್ಟು ಕೆಲಸ ಈಗಾಗಲೇ ಮುಗಿದಿದೆ.

ಬೇಲಿ ಹಾಕುವ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿ ರುವ ತಾಲಿಬಾನಿಯರು, ಬುಧವಾರ ನಂಗರ ಹಾರ್‌ನ ಪೂರ್ವ ಪ್ರಾಂತ್ಯದಲ್ಲಿರುವ ಗುಷ್ಟಾ ಜಿಲ್ಲೆಯಲ್ಲಿ ಪಾಕ್‌ನ ಬೇಲಿಯನ್ನು ಹಾಳುಗೆಡವಿ ದ್ದಾರೆ. ಅಲ್ಲಿದ್ದ ತಂತಿಯನ್ನೆಲ್ಲ ತುಂಡರಿಸಿದ್ದಾರೆ.  ಬೇಲಿ ಕೆಲಸಕ್ಕೆ ಅಡ್ಡ ಪಡಿಸಿದ್ದಲ್ಲದೆ, ಬೇಲಿಗೆಂದು ಇಟ್ಟಿದ್ದ ತಂತಿಯನ್ನೇ ಎತ್ತುಕೊಂಡು ಹೋಗಿದ್ದ ರೆಂದು ಡಾನ್‌ ಪತ್ರಿಕೆ ವರದಿ ಮಾಡಿತ್ತು.

ಟಾಪ್ ನ್ಯೂಸ್

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

Donald-Trumph

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

1-trew

Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು

Hatti: ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.