ಹಿಮದಿಂದಾಗಿ ಸಾವಿರಾರು ಪ್ರವಾಸಿಗರು ಅತಂತ್ರ :ಸಿಕ್ಕಿಂನ ನಥುಲಾ ಬಳಿ ಸಿಲುಕಿಕೊಂಡ ಟೂರಿಸ್ಟ್
ಭಾರತೀಯ ಸೇನೆಯಿಂದ ರಕ್ಷಣೆ ಕಾರ್ಯ
Team Udayavani, Dec 26, 2021, 8:17 PM IST
ಗ್ಯಾಂಗ್ಟಕ್: ಹಿಮವರ್ಷವನ್ನು ಕಣ್ತುಂಬಿಕೊಳ್ಳಲೆಂದು ಸಿಕ್ಕಿಂ ಕಡೆ ಪ್ರವಾಸ ಬೆಳೆಸಿದ್ದ ಸಾವಿರಕ್ಕೂ ಅಧಿಕ ಮಂದಿ ಅದೇ ಹಿಮವರ್ಷದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನೆಯು ಅವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಶನಿವಾರ ಹೆಚ್ಚು ಪ್ರಮಾಣದಲ್ಲಿ ಹಿಮವರ್ಷವಾಗಿದ್ದರಿಂದಾಗಿ ಸಿಕ್ಕಿಂನ ನಾಥುಲಾ ಬಳಿಯ ಜವಹರಲಾಲ್ ನೆಹರು ರಸ್ತೆ ಸಂಪೂರ್ಣವಾಗಿ ಹಿಮಾವೃತವಾಗಿದೆ. ಪ್ರವಾಸಿಗರ ವಾಹನ ಸಂಚಾರಕ್ಕೆ ತಡೆಯಾಗಿದೆ. 120 ವಾಹನಗಳಲ್ಲಿದ್ದ 1,027 ಪ್ರವಾಸಿಗರು ರಸ್ತೆಯಲ್ಲೇ ಸಿಲುಕಿದ್ದು, ಕೊರೆವ ಚಳಿಯಲ್ಲಿ ಕಾರಿನಿಂದ ಕೆಳಗಿಳಿಯಲೂ ಆಗದೆ ಒದ್ದಾಡಿದ್ದಾರೆ. ಅವರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದು, ಅಲ್ಲಿಂದ 17 ಮೈಲು ದೂರವಿರುವ ಸೇನೆಯ ಕ್ಯಾಂಪ್ಗೆ ಕರೆದೊಯ್ದು ಅಲ್ಲಿಯೇ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಭಾನುವಾರ ಅವರನ್ನು ಗ್ಯಾಂಗ್ಟಕ್ಗೆ ಕಳುಹಿಸಿಕೊಡಲಾಗಿದೆ. ನಾಥುಲಾ ಪ್ರದೇಶದಲ್ಲಿ ಭಾನುವಾರ ಮೈನಸ್ 8 ಡಿಗ್ರಿ ಸೆ. ಉಷ್ಣಾಂಶ ವರದಿಯಾಗಿದೆ.
ಹಿಮಗಡ್ಡೆಯಾದ ಜಮ್ಮು:
ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಶನಿವಾರ ರಾತ್ರಿ ಉಷ್ಣಾಂಶ ಅತ್ಯಂತ ಕಡಿಮೆಯಾಗಿದ್ದು, ಜನರು ಚಳಿಯಿಂದ ಪರದಾಡುವಂತಾಗಿತ್ತು. ಶ್ರೀನಗರದಲ್ಲಿ ಉಷ್ಣಾಂಶ ಮೈನಸ್ 1.8 ಡಿಗ್ರಿಗೆ ತಲುಪಿತ್ತು. ಕಜಿಗುಂದ್ನಲ್ಲಿ ಮೈನಸ್ 1.2 ಡಿಗ್ರಿ, ಕುಪ್ವಾರದಲ್ಲಿ ಮೈನಸ್ 1.5 ಡಿಗ್ರಿ, ಕೊಕೆರಂಗ್ನಲ್ಲಿ ಮೈನಸ್ 0.2 ಡಿಗ್ರಿ ಉಷ್ಣಾಂಶ ವರದಿಯಾಗಿದೆ. ಗುಲ್ಮರ್ಗ್ನಲ್ಲಿ ಮೈನಸ್ 7.5ಡಿಗ್ರಿ, ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ಆಗಿರುವ ಪಹಲ್ಗಮ್ನಲ್ಲಿ ಮೈನಸ್ 3.8 ಡಿಗ್ರಿ ಉಷ್ಣಾಂಶ ವರದಿಯಾಗಿದೆ.
ಇದನ್ನೂ ಓದಿ : ಮಂಗಳೂರು : ಬಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತರಿಂದ ಶ್ಲಾಘನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.