ಅಸ್ಸಾಂನಲ್ಲೊಂದು ಸೃಷ್ಟಿ ವೈಚಿತ್ರ್ಯ; ಮನುಷ್ಯನ ಹೋಲುವ ಕುರಿ ಮರಿ ಜನನ
ಅಸ್ಸಾಂನಲ್ಲೊಂದು ವಿಚಿತ್ರ ಘಟನೆ, ಮನುಷ್ಯ ರೂಪಿ ಕುರಿ ಮರಿ ಜನನ
Team Udayavani, Dec 29, 2021, 6:28 PM IST
ಅಸ್ಸಾಂ:“ಸಾವಿರ ಕಾಲ ಬದುಕಿದರೆ ಸಾವಿರ ಚೋದ್ಯ ನೋಡಬಹುದುʼʼ ಎಂಬ ಮಾತಿದೆ. ಇದಕ್ಕೆ ಅನುಗುಣವಾದ ಘಟನೆಯೊಂದು ಆಸ್ಸಾಂನ ಚಾಹರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರೈತರೊಬ್ಬರ ಮನೆಯಲ್ಲಿ ಸಾಕಿದ್ದ ಕುರಿ ಮನುಷ್ಯನನ್ನು ಹೋಲುವ ಮರಿ ಹಾಕಿರುವುದು ಈ ಭಾಗದಲ್ಲಿ ತೀವ್ರ ವಿಸ್ಮಯ ಸೃಷ್ಟಿಸಿದೆ.
ದಹೋಲಿ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ವಿಚಿತ್ರ ಕುರಿಮರಿ ಜನಿಸಿದೆ. ಈ ಮರಿಯ ಕಣ್ಣು, ಮೂಗು , ಬಾಯಿ ಸೇರಿದಂತೆ ಮುಖದ ಭಾಗಕ್ಕೆ ಬಹುತೇಕ ಮನುಷ್ಯನ ಹೋಲಿಕೆ ಇದೆ. ಅದೇ ರೀತಿ ಎರಡೇ ಕಾಲುಗಳು ಇದೆ. ಜನಿಸುವಾಗಲೇ ಸತ್ತು ಹೋಗಿದ್ದರೂ ಈ ವಿಚಿತ್ರ ಕುರಿಮರಿಯನ್ನು ನೋಡುವುದಕ್ಕೆ ಜನ ಮುಗಿ ಬಿದ್ದು ಹಳ್ಳಿಗೆ ಆಗಮಿಸಿದ್ದರು.
ಪ್ರಪಂಚದಲ್ಲಿ ಆಗಾಗ ಈ ಬಗೆಯ ವಿಚಿತ್ರ ಸೃಷ್ಟಿಯ ಜನನವಾಗುತ್ತಲೇ ಇರುತ್ತದೆ. ಈ ಹಿಂದೆ ಇಂಡೋನೇಶಿಯಾದ ಮೀನುಗಾರನ್ನೊಬ್ಬ ಮಾನವ ಮುಖವನ್ನು ಹೋಲುವ ಶಾರ್ಕ್ ನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದ.
ಇಂಡೋನೇಶ್ಯಾದ ಅಬ್ದುಲ್ ನ್ಯೂರೇನ್ ಎಂಬ ಮೀನುಗಾರನ ಬಲೆಗೆ ಗರ್ಭ ಧರಿಸಿದ ಶಾರ್ಕ್ ಬಿದ್ದಿತ್ತು. ಅದನ್ನು ಕತ್ತರಿಸಿದಾಗ ಹೊಟ್ಟೆಯಲ್ಲಿ ಮೂರು ಮರಿಗಳಿದ್ದವು. ಎರಡು ಮರಿಗಳು ಶಾರ್ಕ್ ರೀತಿಯಲ್ಲೇ ಇದ್ದರೆ, ಒಂದು ಮಾತ್ರ ಮನುಷ್ಯನ ಮುಖವನ್ನು ಹೋಲುತ್ತಿತ್ತು.
ಮನುಷ್ಯಾಕೃತಿಯನ್ನು ಹೋಲುವ ಈ ಶಾರ್ಕ್ನ್ನು ಖರೀದಿಸುವುದಕ್ಕೆ ಜನರು ನನ್ನ ಮನೆಗೆ ಮುಗಿ ಬಿದ್ದಿದ್ದರು. ಆದರೆ ನಾನು ಮಾರಾಟ ಮಾಡಿರಲಿಲ್ಲ. ಇದು ನನಗೆ ಒಳ್ಳೆಯ ಅದೃಷ್ಟ ತರಲಿದೆ ಎಂದು ಸುರಕ್ಷಿತವಾಗಿ ಸಲಹುದಾಗಿ ಅಬ್ದುಲ್ ಶೇರ್ ಮಾಡಿದ ಶಾರ್ಕ್ ಪೋಟೋ ಜಾಲತಾಣದಲ್ಲಿ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಕೋರ್ಟ್ ತರಾಟೆ
Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್ ತಯಾರಿ
Bengaluru: ಉದ್ಯಮಿಗೆ ಹನಿಟ್ರ್ಯಾಪ್ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.