![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 1, 2022, 5:35 PM IST
ಪಣಜಿ: ಇತ್ತೀಚೆಗಷ್ಟೇ ಗೋವಾ ರಾಜ್ಯ ಸರ್ಕಾರ ಪ್ರಕಟಿಸಿರುವ ಗೋವಾ ಖನಿಜ ಡಂಪ್ ನೀತಿ ಸಂಪೂರ್ಣ ಅಕ್ರಮವಾಗಿದ್ದು, ಇದು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡುವುದಾಗಿದೆ. ಈ ಕುರಿತ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿದೆ. ಇದರ ವಿರುದ್ಧ ಪ್ರಬಲ ಹೋರಾಟ ನಡೆಸಬೇಕು ಎಂದು ಗೋವಾ ಫೌಂಡೇಶನ್ ನಿರ್ದೇಶಕ ಕ್ಲಾವುಡ್ ಅಲ್ವಾರೀಸ್ ಕರೆ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ವಿಧಾನಸಭೆ ಚುನಾವಣೆ 2022 ರ ಹಿನ್ನೆಲೆಯಲ್ಲಿ ಡಂಪ್ ನೀತಿ ಕಾಯ್ದೆಯಲ್ಲಿ ಬದಲಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಹೊಸ ನೀತಿಯನ್ನು ಪ್ರಕಟಿಸಿದೆ. ಹೊಸ ನೀತಿಯ ಪ್ರಕಾರ ರಾಜ್ಯದ ಖನಿಜ ವಲಯದ ಹೊರಗೆ ಜಮಾವಣೆ ಮಾಡಲಾಗಿರುವ ಅದಿರಿಗೆ ದಂಡ ಮತ್ತು ರಾಯಧನವನ್ನು ಪಾವತಿಸಿ ಖನಿಜ ಡಂಪ್ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಈ ಕುರಿತ ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಕ್ಲಾವುಡ್ ಅಲ್ವಾರೀಸ್ ನುಡಿದರು.
ಸರ್ಕಾರ ಕೇವಲ 230 ಕೋಟಿ ರೂಗಳ 25 ದಶಲಕ್ಷ ಟನ್ ಖನಿಜ ಮಾರಾಟ ಮಾಡುವುದಾಗಿ ಹೇಳುತ್ತಿದ್ದು, ಆದರೆ ಇದರ ನಿಜವಾದ ಮೌಲ್ಯ ಸಾವಿರಾರು ಕೋಟಿ ರೂಗಳಾಗಿದೆ. ಇದು ಸರ್ಕಾರದ ಬೊಕ್ಕಸದ ಲೂಟಿಯಾಗಿದೆ. ಇದು ದೊಡ್ಡ ಖನಿಜ ಹಗರಣವಾಗಿದೆ ಎಂದು ಕ್ಲಾವುಡ್ ಅಲ್ವಾರಿಸ್ ಆರೋಪಿಸಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.