![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 6, 2022, 12:41 PM IST
ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳಲ್ಲಿ ವಿದ್ಯುತ್ ಬಳಕೆ ಜವಾಬ್ದಾರಿ ಹಾಗೂ ಬಿಲ್ ಕಳ್ಳಾಟ ತಪ್ಪಿಸುವುದಕ್ಕಾಗಿ “ಇ-ಬೆಳಕು’’ ಎಂಬ ಯೋಜನೆ ರೂಪಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಇಲಾಖೆ ನಿರ್ಧರಿಸಿದ್ದು, ಬಳಕೆಯಲ್ಲಿ ಇಲ್ಲದ ಆದರೆ ಬಿಲ್ ಸೃಷ್ಟಿಯಾಗುತ್ತಲೇ ಇರುವ 50 ಲಕ್ಷ ಸಂಪರ್ಕಗಳಿಗೆ ಕತ್ತರಿ ಹಾಕಲು ಮುಂದಾಗಿದೆ.
ಇದಕ್ಕಾಗಿ ಆನ್ಲೈನ್ ಆಧರಿತ ಸಂಪರ್ಕ ದೃಢೀಕರಣ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ.ನಿಷ್ಕ್ರಿಯಗೊಂಡ, ಆರ್.ಆರ್.ನಂಬರ್ ಇಲ್ಲದ ಪಂಚಾಯಿತಿ ಸ್ವತ್ತಿಗೆ ಇನ್ನು ಮುಂದೆ ಸಂಪರ್ಕ ಇರುವುದಿಲ್ಲ. ಇಲಾಖೆಯ “ಇ-ಬೆಳಕು’’ ಪೋರ್ಟಲ್ನಲ್ಲಿ ನೋಂದಾಯಿತ ಸ್ವತ್ತುಗಳು ಮಾತ್ರ ಬೆಳಕು ಕಾಣಲಿವೆ.
ರಾಜ್ಯದ 5962 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪ, ಕೊಳವೆ ಬಾವಿಗಳು, ಕುಡಿಯುವ ನೀರಿನ ಘಟಕಗಳು ಸೇರಿದಂತೆ 1.50 ಲಕ್ಷ ಸಂಪರ್ಕ ಕಲ್ಪಿಸಲಾಗಿದೆ. ಈ ಪೈಕಿ 50 ಲಕ್ಷ ಸಂಪರ್ಕಗಳು ಬಳಕೆಯಲ್ಲಿ ಇಲ್ಲ. ಆದರೆ ಬಿಲ್ ಪಾವತಿ ಮಾತ್ರ ಮುಂದುವರಿದಿದೆ. ಇದಕ್ಕಾಗಿ ಇಲಾಖೆ ವಾರ್ಷಿಕ 1000 ಕೋಟಿ ರೂ. ನಷ್ಟವಾಗುತ್ತಿದೆ. 2015ರಲ್ಲಿ ಈ ಮೊತ್ತ 5000 ಕೋಟಿ ರೂ. ತಲುಪಿದ್ದು, ಅಂದಿನ ಸರಕಾರ 1000 ಕೋಟಿ ರೂ. ಮನ್ನಾ ಮಾಡಿತ್ತು. ಒಟ್ಟಾರೆಯಾಗಿ 4000 ಕೋಟಿ ರೂ. ವಿದ್ಯುತ್ ಬಾಕಿ ಗ್ರಾಮ ಪಂಚಾಯಿತಿಯ ಸ್ವತ್ತುಗಳಿಂದ ಸರಕಾರಕ್ಕೆ ಸಂದಾಯ ಮಾಡಬೇಕಿದೆ. ಹೀಗಾಗಿ ಅನಗತ್ಯ ಸಂಪರ್ಕಗಳನ್ನು ಕಿತ್ತು ಹಾಕಿ ಇ-ಬೆಳಕು ಪೋರ್ಟಲ್ ಮೂಲಕ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸರಕಾರ ನಿರ್ಧರಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.