![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 11, 2022, 12:30 PM IST
ಬೆಂಗಳೂರು: ಎಲ್ಲಿ ಯಾರು ಬೇಕಾದರೂ ಸೋಂಕಿತರಾಗಬಹುದು. ಟೆಸ್ಟ್ ಮಾಡಿಸಿದಾಗ ಅದು ಗೊತ್ತಾಗುತ್ತದೆ. ಡಿಕೆ ಶಿವಕುಮಾರ್ ರವರು ತಮ್ಮ ಪಾದಯಾತ್ರೆ ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಭಂಡತನ ,ಬಂಡೆತನ ಬೇಡ, ಎಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡುತ್ತೇವೆ ಎಂದು ಸಚಿವ ಅಶ್ವತ್ಥ ನಾರಯಣ್ ಸರ್ಕಾರವೇ ಹೆಚ್ಚುವರಿ ಡಿಸಿ ಕಳುಹಿಸಿ ಸೋಂಕಿತನನ್ನಾಗಿ ಮಾಡುತ್ತಿದೆ ಎಂಬ ಡಿಕೆಶಿ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ಡಿಕೆಶಿ ಮೌನ ಪಾದಯಾತ್ರೆಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಾತನಾಡದಿದ್ದರೆ ಬಚಾವ್ ಆಗುತ್ತೇನೆ ಎಂದು ಅವರಿಗೆ ಅನಿಸಿದೆ. ಅದಕ್ಕೆ ಮೌನವಾಗಿದ್ದಾರೆ ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಜಾತ್ರೆಯಲ್ಲಿ ಪಾಲ್ಗೊಂಡ ವಿಚಾರವನ್ನು ಸಮರ್ಥನೆ ಮಾಡಿದ ಸಚಿವರು, ಅಲ್ಲಿ ರೇಣುಕಾಚಾರ್ಯ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಕ್ಷಮೆ ಕೋರಿದ್ದಾರೆ ಎಂದರು.
ಸಿಎಂ ಜತೆ ಇದ್ದ ತಾವು ಕ್ಯಾರಂಟೈನ್ ಯಾಕೆ ಆಗಿಲ್ಲ ಎಂಬ ವಿಚಾರಕ್ಕೆ ಉತ್ತರಿಸಿದ ಅಶ್ವಥ್ ನಾರಾಯಣ, ಸೋಮವಾರ ನಾನು ಸಿಎಂ ಜತೆ ಸಭೆಯಲ್ಲಿರಲಿಲ್ಲ. ಸಿಎಂ ಕಚೇರಿಗೆ ಹೋಗಿದ್ದೆ. ಭಾರತ ಸರ್ಕಾರದ ಗೈಡ್ಲೈನ್ಸ್ ಬಂದಿದೆ. ಸೋಂಕು ಇದ್ದಾಗ ಕ್ರಮ ವಹಿಸಬೇಕಾಗುತ್ತದೆ. ಸರ್ಕಾರದ ಕೆಲಸ ಮಾಡಲೇಬೇಕು. ನನಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಐಸೋಲೇಟ್ ಆಗುತ್ತೇನೆ ಎಂದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.