![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 18, 2022, 7:20 AM IST
ನ್ಯೂಯಾರ್ಕ್: ಜಗತ್ತಿನ ನಾನಾ ದೇಶಗಳಲ್ಲಿ ಹ್ಯೂಮನ್ ಇಮ್ಯುನೋಡೆಫಿಷಿಯನ್ಸಿ ವೈರಾಣು (ಎಚ್ಐವಿ) ನಿರ್ಮೂಲನೆ ಕುರಿತಂತೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಯುಸಿಎಲ್ಎ) ವಿಜ್ಞಾನಿಗಳು ಕಿಕ್ ಆ್ಯಂಡ್ ಕಿಲ್ ಎಂಬ ಹೊಸ ತಂತ್ರಗಾರಿಕೆಯೊಂದನ್ನು ರೂಪಿಸಿದೆ.
ಮನುಷ್ಯನ ದೇಹದಲ್ಲಿ ಅಡಗಿರಬಹುದಾದ ಎಚ್ಐವಿ ಸೋಂಕಿತ ಜೀವಕಣಗಳನ್ನು ಹುಡುಕಿ ನಾಶಪಡಿಸುವಂಥ ವಿಶಿಷ್ಟ ತಂತ್ರಗಾರಿಕೆ ಇದಾಗಿದೆ. “ನೇಚರ್ ಕಮ್ಯೂನಿಕೇಷನ್ಸ್’ ಎಂಬ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕೆಯಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ.
ಏನಿದರ ವಿಶೇಷ?
ಇದೊಂದು ರೀತಿಯಲ್ಲಿ ಮುಳ್ಳನ್ನು ಮುಳ್ಳಿನಿಂದಲೇ ತಗೆಯುವಂಥ ಪ್ರಕ್ರಿಯೆ. ನಿರ್ದಿಷ್ಟ ಮಾನವನ ದೇಹದ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯಡಿ ಸಹಜವಾಗಿ ಉತ್ಪತ್ತಿಯಾಗುವ ಆರೋಗ್ಯವಂತ ಜೀವಕಣಗಳನ್ನು ಸೂಕ್ತ ಔಷಧಿಗಳ ಮೂಲಕ ಹುರಿಗೊಳಿಸಿ, ಅದೇ ದೇಹದ ನಾನಾ ಅಂಗಾಂಗಗಳಲ್ಲಿ ಹುದುಗಿಕೊಂಡಿರುವ ಎಚ್ಐವಿ ಸೋಂಕಿತ ಜೀವಕಣಗಳನ್ನು ಪತ್ತೆ ಹಚ್ಚಿ ಕೊಲ್ಲುವಂಥ ತಂತ್ರಗಾರಿಕೆ ಇದಾಗಿದೆ. ಸದ್ಯಕ್ಕಿದು ಸೈದ್ಧಾಂತಿಕ ಮಾದರಿಯಲ್ಲಿದ್ದು, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಂದುಕೊಂಡಂತೆ ಇದು ಯಶಸ್ವಿಯಾದರೆ ಎಚ್ಐವಿ ನಿರ್ಮೂಲನೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ.
ಈ ಹೊಸ ತಂತ್ರಗಾರಿಕೆಯಿಂದ ಎಚ್ಐವಿ ಸೋಂಕಿತರಲ್ಲಿನ ಎಚ್ಐವಿ ವೈರಾಣುಗಳನ್ನು ಗಣನೀಯ ಮಟ್ಟದಲ್ಲಿ ಇಳಿಕೆ ಮಾಡಲು ಸಹಾಯವಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ವೈರಾಣುಗಳನ್ನು ನಾಶಪಡಿಸಲು ಪ್ರಾಯಶಃ ಇದರಿಂದ ಸಾಧ್ಯವಿದೆ. ಈ ತಂತ್ರಗಾರಿಕೆ ಭವಿಷ್ಯದಲ್ಲಿ ಮತ್ತಷ್ಟು ಹೊಸ ವೈದ್ಯಕೀಯ ತಂತ್ರಗಾರಿಕೆಗಳ ಆವಿಷ್ಕಾರಕ್ಕೆ ನಾಂದಿ ಹಾಡಬಹುದು.
– ಡಾ. ಜೋಸ್ಲೀನ್ ಕಿಮ್,
ಸಹಾಯಕ ಪ್ರಾಧ್ಯಾಪಕ, ಕ್ಯಾಲಿಫೋರ್ನಿಯಾ ವಿವಿ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.