![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 22, 2022, 7:52 PM IST
ಗಂಗಾವತಿ : ನಗರದ ಹಿರೇಜಂತಕಲ್ ಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ವಿರುಪಾಪುರ ಸ್ಮಶಾನ ಭೂಮಿಯಲ್ಲಿ ವೀರಮಾಸ್ತಿಗಲ್ಲು ಪತ್ತೆಯಾಗಿದೆ .
ಸ್ಮಶಾನ ಜಾಗವನ್ನು ಸ್ಥಳೀಯರು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವೀರ ಮಾಸ್ತಿಗಲ್ಲು ದೊರಕಿದ್ದು ಸ್ಮಾರಕವನ್ನು ವಿರುಪಾಪುರದ ಆಂಜನೇಯ ದೇವಾಲಯದ ಬಳಿ ಇರಿಸಲಾಗಿದೆ .
ವೀರ ಮಾಸ್ತಿಗಲ್ಲಿನ ಶಿಲ್ಪವನ್ನು ಪರಿಶೀಲಿಸಿದ ಇತಿಹಾಸ ಸಂಶೋಧಕ ಡಾ। ಶರಣಬಸಪ್ಪ ಕೋಲ್ಕಾರ್ ಅವರು ಇದು ಹದಿಮೂರನೆಯ ಶತಮಾನಕ್ಕೆ ಸೇರಿದ ವೀರ ಮಾಸ್ತಿಗಲ್ಲು ಕೆಂಪು ಕಣಶಿಲೆಯಲ್ಲಿ ಕೆತ್ತಲಾಗಿದೆ.
ಈ ಶಿಲ್ಪದ ಮೇಲ್ಭಾಗದಲ್ಲಿ ಈಶ್ವರಲಿಂಗ ಅದರ ಎರಡೂ ಬದಿಗೆ ಸೂರ್ಯ ಚಂದ್ರರ ಬಿಂಬಗಳಿವೆ. ಶಿಲ್ಪ ಭಾಗದಲ್ಲಿ ವೀರನ ಶಿಲ್ಪ ಪ್ರಧಾನವಾಗಿದೆ. ಹೋರಾಟದಲ್ಲಿ ತೊಡಗಿದ ಸಂದರ್ಭವನ್ನು ಸೂಚಿಸುತ್ತದೆ. ವೀರನು ಎಡಗೈಯಲ್ಲಿ ಬಿಲ್ಲು ಹಿಡಿದು ಬಲಗೈಯಿಂದ ಬಾಣಗಳನ್ನು ಸೆಳೆಯುತ್ತಿರುವ ರೀತಿಯಲ್ಲಿದೆ ಅವನ ಮುಂಭಾಗದಲ್ಲಿ ಶತ್ರುವೊಬ್ಬ ಎರಡು ಬಾಣಗಳು ತಾಗಿ ನೆಲಕ್ಕೆ ಕುಸಿದಿದ್ದಾನೆ ವೀರನ ಹಿಂಭಾಗದಲ್ಲಿ ಆತನ ಸತಿ ಶಿಲ್ಪವಿದೆ .ಯುದ್ಧದಲ್ಲಿ ಹೋರಾಡಿದ ವೀರ ಹಾಗೂ ವೀರನ ಕಳೇಬರದ ಜೊತೆ ಸತಿ ಹೋದ ಆತನ ಮಡದಿಯ ನೆನಪಿಗಾಗಿ ವೀರಮಾಸ್ತಿ ಕಲ್ಲನ್ನು ಹಾಕಿಸಲಾಗಿದೆ. ಶಿಲ್ಪ ಅಷ್ಟು ಕಲಾತ್ಮಕವಾಗಿಲ್ಲ. ಆದರೆ ಆದರಿಂದ ಗಂಗಾವತಿ ಪ್ರದೇಶದ14ನೇ ಶತಮಾನದ ಸೈನಿಕ ಹಾಗೂ ಸಾಮಾಜಿಕ ಘಟನೆಯೊಂದು ತಿಳಿದುಬರುತ್ತದೆ ಎಂದು ಕೋಲ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.