ಬೇಲೂರು ದೇಗುಲದಿಂದ ಅಡ್ಡೆಗಾರರು ಹೊರಕ್ಕೆ: ದೂರು


Team Udayavani, Jan 31, 2022, 1:13 PM IST

ಬೇಲೂರು ದೇಗುಲದಿಂದ ಅಡ್ಡೆಗಾರರು ಹೊರಕ್ಕೆ: ದೂರು

ಬೇಲೂರು: ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿಗೆ ದೇಗುಲದಲ್ಲಿ ಉತ್ಸವ ಹೊರುವ ಅಡ್ಡೆಗಾರರನ್ನು ನೇಮಕ ಮಾಡದಿರುವ ಬಗ್ಗೆ ಧಾರ್ಮಿಕ ದತ್ತಿ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

ಜ. 21ರಂದು ದೂರು ಆಯುಕ್ತರೊಂದಿಗೆ, ಜಿಲ್ಲಾಧಿಕಾರಿಗಳು, ಶಾಸಕರಿಗೂ ದೂರು ನೀಡಲಾಗಿದ್ದು ಅಡ್ಡೆಗಾರರನ್ನು ಸಮಿತಿಯೊಳಗೆ ಸೇರಿಸುವಂತೆ ಆಗ್ರಹಿಸಲಾಗಿದೆ. ಒಂದೊಮ್ಮೆ ಸೇರಿಸದಿದ್ದರೆ ದೇಗುಲದ ಉತ್ಸವ ಹೊರುವುದಕ್ಕೆ ಹಿಂದೇಟು ಹಾಕುವ ಸಂಭವ ಕಂಡುಬರುತ್ತಿದೆ.

ಸಮಿತಿ ರಚನೆ ಸಂದರ್ಭ ಅಡ್ಡೆಗಾರರನ್ನು ಕೈಬಿಟ್ಟಿದ್ದರಿಂದ ಈ ಹಿಂದೆಯೂ ಹಲವು ಭಾರಿ ಉತ್ಸವ ಹೊರುವುದರಿಂದ ದೂರ ಉಳಿದಿದ್ದರು. ಆ ವೇಳೆ ಪಟ್ಟಣ ಪ್ರಮುಖರು ಮನವಿ ಮಾಡಿ ಉತ್ಸವ ಹೊರುವಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಇದೀಗ ಅದೆ ಸಮಸ್ಯೆ ಉದ್ಭವವಾಗುವ ಸಂಭವ ಕಾಣಬರುತ್ತಿದ್ದು, ಶೀಘ್ರ ಕ್ರಮಕೈಗೊಳ್ಳದೆ ಇದ್ದಲ್ಲಿ ಸಮಸ್ಯೆ ಎದುರಾಗಲಿದೆ.

ಈ ವರ್ಷ ರಚಿಸಿದ ಸಮಿತಿಯಲ್ಲಿ ಅಡ್ಡೆಗಾರರನ್ನು ಕೈಬಿಟ್ಟಿದ್ದರಿಂದ ಅಸಮಾಧಾನಗೊಂಡಿರುವ ಅಡ್ಡೆಗಾರರ ಬಳಗ ಧಾರ್ಮಿಕ ಧತ್ತಿ ಆಯುಕ್ತರಿಗೆ ದೂರುನೀಡಿದ್ದಾರೆ. ಅದರ ಪ್ರತಿಯನ್ನು ಶಾಸಕರು, ಜಿಲ್ಲಾಧಿಕಾರಿಗಳಿಗೂ ಸಲ್ಲಿಸಿ ಈವರಗಿನ ಎಲ್ಲಾ ಬೆಳವಣಿಗೆಗಳ ಮಾಹಿತಿ ಒದಗಿಸಿದ್ದಾರೆ. ಆದರೆಈಗಾಗಲೇ ರಚನೆಗೊಂಡಿರುವ ಸಮಿತಿಗೆ ಹೆಚ್ಚುವರಿ ಯಾಗಿ ಸದಸ್ಯರ ನೇಮಕ ಸಾಧ್ಯವಾಗದ ಮಾತು. ಇದು ನಿಯಮ ಬಾಹಿರ ಕೂಡ. ಈ ನಡುವೆಅಡ್ಡೆಗಾರರನ್ನು ವಿಶೇಷ ಆಹ್ವಾನಿತರು ಎಂಬಂತೆಬಿಂಬಿಸಿ ಸಭೆಗೆ ಕರೆಯುವ ಬಗ್ಗೆ ಆಲೋಚನೆ ಇದೆ ಎನ್ನಲಾಗಿದೆ.

ಇದೆ ರೀತಿ ಸಮಸ್ಯೆ ಹಿಂದೊಮ್ಮೆ ಉಂಟಾದಾಗ, ವಿಶೇಷ ಆಹ್ವಾನಿತರೆಂದು ಅಡ್ಡೆಗಾರರೊಬ್ಬರಿಗೆ ಸಭೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿತ್ತು. ಈಗಲೂ ಇದನ್ನೇ ಅನುಸರಿಸುವ ಲಕ್ಷಣಗಳುಕಂಡುಬರುತ್ತಿದೆ. ಈ ನಡುವೆ ಅಡ್ಡೆಗಾರರುಯಾವುದೇ ಕಾರಣಕ್ಕೂ ವಿಶೇಷ ಆಹ್ವಾನಿತರೆಂದುಪರಿಗಣಿಸುವುದಕ್ಕೆ ಒಪ್ಪಿಗೆ ನೀಡಬಾರದು, ಕಾಯಂಸದಸ್ಯರೆಂದು ಪಟ್ಟಿಯಲ್ಲಿ ಪರಿಗಣಿಸಬೇಕು ಎಂದು ಪಟ್ಟುಹಿಡಿದಿದ್ದಾರೆ.

ಈ ಬಗ್ಗೆ ದೇಗುಲದ ಕಾರ್ಯನಿರ್ವಹಣಾಧಿಕಾರಿವಿದ್ಯುಲ್ಲತಾ ಅವರನ್ನು ಸಂಪರ್ಕಿಸಿದಾಗ, ಅಡ್ಡೆಗಾರರು ದೂರು ನೀಡಿರುವುದು ನಿಜ. 2012 ರಲ್ಲಿ ಇದೆ ರೀತಿ ಸಮಸ್ಯೆ ಉಂಟಾದಾಗ ಅಂದಿನ ಜಿಲ್ಲಾಧಿಕಾರಿಗಳು ಸಂಧಾನಸಭೆ ನಡೆಸಿ ಸಮಿತಿಯಲ್ಲಿ ಕಾಯಂ ಆಗಿಅಡ್ಡೆಗಾರರ ಪೈಕಿ ಒಬ್ಬರನ್ನು ನೇಮಕ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದರು. ಆದರೆ ಏಕೋ ಏನೋ ಈ ವರ್ಷ ಸಮಿತಿಯಲ್ಲಿ ಅಡ್ಡೆಗಾರರನ್ನುಕೈಬಿಡಲಾಗಿದೆ. ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು.

ಅಡ್ಡೆಗಾರರಿಗೆ ಹಿಂದೆ ಸಿಕ್ಕಿತ್ತು ಪ್ರಾತಿನಿಧ್ಯ :

ಪ್ರಥಮ ದರ್ಜೆ ದೇಗುಲವಾದ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ ಆರಂಭದಿಂದ 9 ಸದಸ್ಯರನ್ನು ಒಳಗೊಂಡ ಧರ್ಮದರ್ಶಿ ಸಮಿತಿ ರಚನೆ ಮಾಡಲಾಗುತ್ತಿದ್ದು, ಅಲ್ಲಿಂದಲೂ ಉತ್ಸವ ಹೊರುವ 4 ಮೂಲೆಯ ಅಡ್ಡೆಗಾರರನ್ನು ಸಮಿತಿಗೆ ನೇಮಿಸಲಾಗುತ್ತಿತ್ತು. ಸಮಿತಿಯಲ್ಲಿ ಇಬ್ಬರು ಅಡ್ಡೆಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, 2012ರಲ್ಲಿ ಸಮಿತಿ ರಚನೆ ವೇಳೆ ಅಡ್ಡೆಗಾರರನ್ನು ಕಡೆಗಣಿಸಿದ್ದರಿಂದ ಉತ್ಸವ ಹೊರುವುದಿಲ್ಲವೆಂದು ಅಡ್ಡೆಗಾರರು ಪಟ್ಟು ಹಿಡಿದಿದ್ದರು. ಆ ವೇಳೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಸಮಿತಿಯಲ್ಲಿ ಅಡ್ಡೆಗಾರರಿಗೆ ಪ್ರಾತಿನಿಧ್ಯ ಕೊಡುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಅದರಂತೆ ಅಂದಿನಿಂದಲೂ ಸಮಿತಿಯಲ್ಲಿ ಅಡ್ಡೆಗಾರರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು.

ಟಾಪ್ ನ್ಯೂಸ್

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

Bee-Bite

Hosanagara: ಹೆಜ್ಜೇನು ದಾಳಿಯಿಂದ ಏಳು ಮಂದಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ

Sagara-HM

Sagara: ರೈತರ ಭೂಮಿ ಹಕ್ಕು ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಸರಕಾರ ಬದ್ಧ: ಜಿ.ಪರಮೇಶ್ವರ್

Kodagu-SP

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!

1-shabari

Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಬಹುದು

1-isreel

India ನಮ್ಮ ಆತ್ಮರಕ್ಷಣೆ ಹಕ್ಕನ್ನು ಬೆಂಬಲಿಸಿದೆ: ಇಸ್ರೇಲ್ ರಾಯಭಾರಿ ರುವೆನ್ ಅಜರ್

1-hockey

Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಹಾಸನಾಂಬೆ ದರ್ಶನ ಆರಂಭ: ದೇವಿಯ ಪವಾಡಕ್ಕೆ ಭಕ್ತರು ಪರವಶ

Hassan: ಹಾಸನಾಂಬೆ ದರ್ಶನ ಆರಂಭ: ದೇವಿಯ ಪವಾಡಕ್ಕೆ ಭಕ್ತರು ಪರವಶ

ಹಾಸನದಲ್ಲೂ ಮೂವರು ಬಾಂಗ್ಲಾ ವಲಸಿಗರ ಬಂಧನ

Hassan: ಮೂವರು ಬಾಂಗ್ಲಾ ವಲಸಿಗರ ಬಂಧನ

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

Bee-Bite

Hosanagara: ಹೆಜ್ಜೇನು ದಾಳಿಯಿಂದ ಏಳು ಮಂದಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ

Sagara-HM

Sagara: ರೈತರ ಭೂಮಿ ಹಕ್ಕು ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಸರಕಾರ ಬದ್ಧ: ಜಿ.ಪರಮೇಶ್ವರ್

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

14

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ಬಿಹಾರ ತತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.