ಪರವಾನಗಿ ಮುಗಿದ್ರೂ ಓಲಾ, ಉಬರ್‌ ಓಡಾಟ


Team Udayavani, Feb 1, 2022, 12:27 PM IST

ಪರವಾನಗಿ ಮುಗಿದ್ರೂ ಓಲಾ, ಉಬರ್‌ ಓಡಾಟ

ಬೆಂಗಳೂರು: ಆ್ಯಪ್‌ ಆಧಾರಿತ ಸಾರಿಗೆ ಸೇವೆಗಳನ್ನು ಕಲ್ಪಿಸುತ್ತಿರುವ ಅಗ್ರಿಗೇಟರ್‌ ಕಂಪನಿಗಳಾದ ಓಲಾ ಮತ್ತು ಉಬರ್‌ ಪರವಾನಗಿ ಅವಧಿ ತಿಂಗಳುಗಳ ಹಿಂದೆಯೇ ಮುಗಿದಿದೆ. ಆದರೆ, ನವೀಕರಣಗೊಳಿಸಿಕೊಳ್ಳದೆ ಎಂದಿನಂತೆ ರಾಜಾರೋಷವಾಗಿ ಕಾರ್ಯಾಚರಣೆ ಮಾಡುತ್ತಿವೆ.

ಅಷ್ಟೇ ಅಲ್ಲದೆ, ಲೈಸೆನ್ಸ್‌ ಪಡೆಯುವಾಗ ನೀಡಿದ ವಿಳಾಸದಲ್ಲಿ ಈಗ ಆ ಕಂಪನಿಗಳೇ ಇಲ್ಲ. ಅಸಹಾಯಕವಾದ ಸಾರಿಗೆ ಇಲಾಖೆ ಅಧಿಕಾರಿಗಳು, ಅದರಲ್ಲಿ ನೋಂದಣಿ ಮಾಡಿಕೊಂಡ ಚಾಲಕರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

2017ರಲ್ಲಿ ಕಾರ್ಯಾಚರಣೆಗಾಗಿ ಅಗ್ರಿಗೇಟರ್‌ ಲೈಸೆನ್ಸ್‌ ಪಡೆದಿದ್ದ ಓಲಾ ಕಂಪನಿಯದ್ದು 2021ರ ಜೂನ್‌ ನಲ್ಲೇ ಅವಧಿ ಮುಗಿದಿದೆ. ಇದು ಮುರುಗೇಶಪಾಳ್ಯದ ವಿಳಾಸ ನೀಡಿತ್ತು. ಅದೇ ವರ್ಷ ಪರವಾನಗಿ ಪಡೆದಿದ್ದ ಉಬರ್‌ ಕಂಪನಿಯ ಅವಧಿ 2021ರ ಡಿಸೆಂಬರ್‌ನಲ್ಲಿ ಮುಗಿದಿದೆ. ಈ ಕಂಪನಿ ಕೂಡ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ವಿಳಾಸ ನೀಡಿತ್ತು. ಸಾಮಾನ್ಯವಾಗಿ ಅವಧಿ ಮುಗಿದ 30ರಿಂದ 60 ದಿನಗಳಲ್ಲಿ ಲೈಸೆನ್ಸ್‌ ನವೀಕರಿಸಿ ಕೊಳ್ಳಬೇಕು. ಇದಕ್ಕೆ ಹತ್ತಾರು ಷರತ್ತುಗಳಿರುತ್ತವೆ. ಅವುಗಳನ್ನು ಪೂರೈಸುವುದು ಕಂಪನಿಗಳ ಹೊಣೆಯಾಗಿರುತ್ತದೆ.

ಕಂಪನಿಗಳು ನೀಡಿದ ವಿಳಾಸಕ್ಕೆ ಸಾರಿಗೆ ಅಧಿಕಾರಿಗಳು ಭೇಟಿ ನೀಡಿದಾಗ, ಅಂತಹ ಯಾವುದೇ ಅಗ್ರಿಗೇಟರ್‌ ಕಂಪನಿಗಳು ಸ್ಥಳದಲ್ಲಿ ಇರಲಿಲ್ಲ. ಜತೆಗೆ ಸಂಬಂಧಪಟ್ಟ ಕಂಪನಿ ಅಧಿಕಾರಿಗಳು, ಉದ್ಯೋಗಿಗಳಾರೂ ಪತ್ತೆ ಇಲ್ಲ. ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದು ಅಧಿಕಾರಿಗಳ ನಿದ್ದೆಗೆಡಿಸಿದ್ದು, ಈಗ ಈ ಅಗ್ರಿಗೇಟರ್‌ಗಳಲ್ಲಿ ನೋಂದಣಿ ಮಾಡಿಸಿಕೊಂಡ ಕಾರು, ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ. ಈಗಾಗಲೇ ಜ. 29ರಂದು ಸುಮಾರು 80 ಓಲಾ-ಉಬರ್‌ ಟ್ಯಾಕ್ಸಿಗಳನ್ನು ಜಪ್ತಿ ಮಾಡಲಾಗಿದೆ.

ಕಾರಣಾಂತರಗಳಿಂದ ಕ್ರಮ ಕೈಗೊಂಡಿಲ್ಲ; ಅಧಿಕಾರಿ: ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಆಯುಕ್ತ (ಕಾರ್ಯಾಚರಣೆ) ನರೇಂದ್ರ ಹೋಳ್ಕರ್‌, “ಓಲಾ-ಉಬರ್‌ ಎರಡೂ ಕಂಪನಿಗಳ ಅಗ್ರಿಗೇಟರ್‌ ಲೈಸೆನ್ಸ್‌ ಅವಧಿ ಮುಗಿದಿದೆ. ನವೀಕರಣ ಮಾಡಿಕೊಂಡಿಲ್ಲ. ಆದರೂ, ಅವುಗಳೊಂದಿಗೆ ಲಿಂಕ್‌ ಮಾಡಿಕೊಂಡ ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ.ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕಂಪನಿಗಳ ವಿರುದ್ಧ ತಾಂತ್ರಿಕ ಕಾರಣಗಳಿಂದಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ಪ್ರತಿಭಟನೆ ಎಚ್ಚರಿಕೆ : “ಕಂಪನಿಗಳ ಅಧಿಕಾರಿಗಳು ಸಿಗಲಿಲ್ಲವೆಂದಾದರೆ,ಆಫೀಸ್‌ ಜಪ್ತಿ ಮಾಡಲಿ. ಮಾಧ್ಯಮಗಳ ಮೂಲಕ ಆಕಂಪನಿಗಳ ಇಮೇಜ್‌ ಏನಿದೆ ಎಂಬುದನ್ನು ಪ್ರದರ್ಶಿಸಿದರೆ, ಸಂಬಂಧಪಟ್ಟವರು ತಾವಾಗಿಯೇ ಮುಂದೆಬರುತ್ತಾರೆ. ಅದುಬಿಟ್ಟು, ಸಾಲ ಮಾಡಿ ಟ್ಯಾಕ್ಸಿ ತೆಗೆದುಕೊಂಡು, ಬಾಡಿಗೆ ಓಡಿಸುವ ಚಾಲಕರ ಮೇಲೆಗದಾಪ್ರಹಾರ ಮಾಡುತ್ತಿರುವುದು ಎಷ್ಟು ಸರಿ? ಈ ಕುರಿತು ಶೀಘ್ರ ಸಾರಿಗೆ ಆಯುಕ್ತರನ್ನು ಭೇಟಿ ಮಾಡಿಗಮನಸೆಳೆಯಲಾಗುವುದು. ಒಂದು ವೇಳೆ ಸಮಸ್ಯೆಮುಂದುವರಿದರೆ, ಪ್ರತಿಭಟನೆ ಅನಿವಾರ್ಯ’ ಎಂದು ಓಲಾ-ಉಬರ್‌ ಟ್ಯಾಕ್ಸಿ ಮಾಲಿಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ತಿಳಿಸಿದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.