ರೈಲ್ವೇ ಟಿಕೆಟ್ ಕೌಂಟರ್ ತೆರೆಯಲು ಆಗ್ರಹ; ಕೊಂಕಣ ರೈಲ್ವೇ ಜನರಲ್ ಕೌಂಟರ್ ಬಂದ್
ಉಡುಪಿ, ಮಂಗಳೂರು ಪ್ರಯಾಣಿಕರಿಂದ ಕೌಂಟರ್ ಸೇವೆಗೆ ಮನವಿ
Team Udayavani, Feb 2, 2022, 8:00 AM IST
ಉಡುಪಿ: ಕೊರೊನಾ ನಿಯಮ ಸಡಿಲಗೊಂಡಿದ್ದರೂ ರೈಲು ನಿಲ್ದಾಣದಲ್ಲಿ ಜನರಲ್ ಟಿಕೆಟ್ ಕೌಂಟರ್ ಮತ್ತೆ ಆರಂಭಿಸದೇ ಇರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
2020ರ ಮೊದಲ ಕೋವಿಡ್ ಅವಧಿಯ ಸಂದಿಗ್ಧತೆಯ ಅನಂತರ ಕೊಂಕಣ ರೈಲ್ವೇ ಹೊರಡಿಸಿದ ಕಟ್ಟುನಿಟ್ಟಿನ ಮಾರ್ಗಸೂಚಿಯಲ್ಲಿ ರೈಲು ನಿಲ್ದಾಣಗಳಲ್ಲಿ ಜನರಲ್ ಟಿಕೆಟ್ ಕೌಂಟರ್ನ್ನು ಬಂದ್ ಮಾಡಲಾಗಿತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆ ಗೊಳಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಈ ಕ್ರಮ ಅನುಸರಿಸಲಾಗಿತ್ತು. ಮತ್ತು ರೈಲ್ವೇ ಕಚೇರಿಯಲ್ಲಿಯೂ ಶೇ. 50 ಸಿಬಂದಿ ಕಾರ್ಯನಿರ್ವಹಣೆ ದೃಷ್ಟಿಯಿಂದ ಬುಕ್ಕಿಂಗ್, ಜನರಲ್ ಟಿಕೆಟ್, ವಿಚಾರಣೆ ಕೌಂಟರ್ಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸಾರ್ವಜನಿಕರು ಉಡುಪಿ, ಮಂಗಳೂರು ಭಾಗದಿಂದ ರಾಜ್ಯ ಮತ್ತು ದೇಶದ ಯಾವುದೇ ಭಾಗಕ್ಕೆ ತೆರಳಲು ಆನ್ಲೈನ್ನಲ್ಲಿ ಟಿಕೆಟ್ ಕಾದಿರಿಸಬೇಕಿತ್ತು.
ಮಂಗಳೂರು – ಮಡಗಾಂವ್ ಪ್ಯಾಸೆಂಜರ್ ರೈಲು ಮಾತ್ರ ಹೊರತುಪಡಿಸಿ ಬೇರೆ ಯಾವುದೇ ಸ್ಥಳಕ್ಕೆ ತೆರಳಲು ಕೌಂಟರ್ನಲ್ಲಿ ಟಿಕೆಟ್ ನೀಡಲಾಗುವುದು. ಬೆಂಗಳೂರು, ಮುಂಬಯಿ ಸಹಿತ ಬೇರೆ ಕಡೆಗಳಿಗೆ ರೈಲುಗಳಲ್ಲಿ ತುರ್ತು ಪ್ರಯಾಣಿಸಲು ಇದರಿಂದ ಸಮಸ್ಯೆಯಾಗುತ್ತದೆ.
ಹೆಚ್ಚುವರಿ ದಂಡ
ತುರ್ತು ಪ್ರಯಾಣದ ಅಗತ್ಯವಿರುವ ಪ್ರಯಾಣಿಕರು ರೈಲು ನಿಲ್ದಾಣದ ಟಿಸಿ ಬಳಿ ತೆರಳಿ ಪ್ರಯಾಣ ದರಕ್ಕೆ ಹೆಚ್ಚುವರಿ ದಂಡ ಪಾವತಿಸಿ ರೈಲಿನಲ್ಲಿ ಪ್ರಯಾಣ ಮಾಡುವ ಸ್ಥಿತಿ ಇದೆ. ಉಡುಪಿ, ಮಂಗಳೂರಿನಲ್ಲಿ ಕೋವಿಡ್ ಅನಂತರ ಕೌಂಟರ್ ಸಂಪೂರ್ಣ ಬಂದ್ ಇವೆ. ಶೀಘ್ರ ಹಿಂದಿನಂತೆ ವಿಚಾರಣೆ, ಬುಕ್ಕಿಂಗ್, ಜನರಲ್ ಟಿಕೆಟ್ ಕೌಂಟರ್ಗಳನ್ನು ಪ್ರತ್ಯೇಕ ತೆರೆದು ಸೇವೆ ಒದಗಿಸಬೇಕು ಎಂದು ಉಡುಪಿ ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಅಶೋಕ್ ಕೋಟ್ಯಾನ್, ಕಾರ್ಯದರ್ಶಿ ಮಂಜುನಾಥ ಮಣಿಪಾಲ ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಜನರಲ್ ಟಿಕೆಟ್ ಕೌಂಟರ್ ಬಂದ್ ಮಾಡಲಾಗಿತ್ತು. ಕೋವಿಡ್ ಪರಿಸ್ಥಿತಿ ಸುಧಾರಣೆಯಾಗದ ಕಾರಣ ಈ ನಿಯಮ ಈಗಲೂ ಮುಂದುವರಿದಿದೆ.
– ರಾಜೇಶ್ ನಾಯ್ಕ ,
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣ ರೈಲ್ವೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.