ಕೋವಿಡ್ ನಡುವೆಯೂ ವಾಹನ ನೋಂದಣಿ ಹೆಚ್ಚಳ


Team Udayavani, Feb 3, 2022, 7:17 AM IST

ಕೋವಿಡ್ ನಡುವೆಯೂ ವಾಹನ ನೋಂದಣಿ ಹೆಚ್ಚಳ

ಉಡುಪಿ: ಕೊರೊನಾ ಸಂಕಷ್ಟದ ನಡುವೆಯೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೊಸ ವಾಹನಗಳ ಖರೀದಿ ಹಾಗೂ ನೋಂದಣಿ ಹೆಚ್ಚಳವಾಗಿದೆ.

2020-21ರಲ್ಲಿ (ಮಾರ್ಚ್‌ ವರೆಗೆ) 19,424 ವಾಹನಗಳು ಉಡುಪಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದ್ದವು. 2021-22ರಲ್ಲಿ (2021ರ ಡಿಸೆಂಬರ್‌ ಅಂತ್ಯ) ಈಗಾಗಲೇ 11,202 ವಾಹನಗಳು ನೋಂದಣಿಯಾಗಿವೆ. ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ 2022ರಲ್ಲಿ 4,213, 2021ರಲ್ಲಿ 35,751, 2020ರಲ್ಲಿ 32,052 ವಾಹನಗಳು ನೋಂದಣಿ  ಯಾಗಿವೆ.

ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ 2022ರಲ್ಲಿ 1,256, 2021ರಲ್ಲಿ 10,875 ಹಾಗೂ 2020ರಲ್ಲಿ 10,013 ನೋಂದಣಿಯಾಗಿವೆ.

ಬಂಟ್ವಾಳದಲ್ಲಿ  2022ರಲ್ಲಿ 772, 2021ರಲ್ಲಿ 6,299, 2020ರಲ್ಲಿ 6,103 ಈ ವರ್ಷದ ನೋಂದಣಿ ಪ್ರಕ್ರಿಯೆ ಈಗಷ್ಟೇ ಆರಂಭವಾಗಿರುವುದರಿಂದ ಇನ್ನಷ್ಟು ನೋಂದಣಿ ಯಾಗುವ ಸಾಧ್ಯತೆಯಿದೆ ಎಂದು ಆರ್‌ಟಿಒ ಅಧಿಕಾರಿ ಮಾಹಿತಿ ನೀಡಿದ್ದಾರೆ.

2021ರ ಮೇ ಮತ್ತು ಜೂನ್‌ನಲ್ಲಿ ಅತೀ ಕಡಿಮೆ ನೋಂದಣಿಯಾಗಿದೆ. ಈ ಎರಡು ತಿಂಗಳು ಹೊರತುಪಡಿಸಿ ಉಳಿದೆಲ್ಲ ತಿಂಗಳಲ್ಲಿ ಸರಾಸರಿ ಸಾವಿರಕ್ಕೂ ಅಧಿಕ ವಾಹನಗಳು ನೋಂದಣಿ ಯಾಗಿವೆ. ಕೊರೊನಾ ಲಾಕ್‌ಡೌನ್‌ ಹೊರತುಪಡಿಸಿ, ಉಳಿದ ತಿಂಗಳಲ್ಲಿ ವಾಹನ ನೋಂದಣಿ ಸರಾಸರಿಯಲ್ಲಿ ನಡೆದಿದೆ. ಸ್ಥಳೀಯವಾಗಿ ವಾಹನ ಖರೀದಿಯೂ ಹೆಚ್ಚಾಗಿದೆ.

ಅಡ್ಡಿಯಾಗದ ಕೊರೊನಾ
2019-20ರಲ್ಲಿ 4,774, 2020-21ರಲ್ಲಿ 4,840 ಹಾಗೂ 2021-22ರಲ್ಲಿ 4,005 ಲಘು ವಾಹನಗಳು ನೋಂದಣಿಯಾಗಿವೆ. ಕೊರೊನಾ ಕಾಲದಲ್ಲಿ ಹಲವು ರೀತಿಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಹೊಸ ವಾಹನ ಖರೀದಿ, ನೋಂದಣಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ.

ಸರಕುಗಳ ಸಾಗಾಟಕ್ಕೆ ಬಳಸುವ ವಾಹನಗಳ (ಬೃಹತ್‌ ವಾಹನ) ನೋಂದಣಿಯಲ್ಲೂ ಏರಿಕೆಯಾಗಿದೆ. 2020-21ರಲ್ಲಿ 1,729 ವಾಹನ ನೋಂದಣಿಯಾಗಿದ್ದರೆ, 2021-22ರಲ್ಲಿ ಈವರೆಗೆ 1,575 ವಾಹನ ನೋಂದಣಿಯಾಗಿದೆ. ಪ್ರತೀ ವರ್ಷ ಮೇ ಮತ್ತು ಜೂನ್‌ನಲ್ಲಿ ಹೊಸ ವಾಹನ ಖರೀದಿ ಹಾಗೂ ನೋಂದಣಿ ಕಡಿಮೆಯಿರುತ್ತದೆ. ಉಳಿದೆಲ್ಲ ತಿಂಗಳಲ್ಲಿ ನೋಂದಣಿ ಪ್ರಕ್ರಿಯೆ ಹೆಚ್ಚಿರು ತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಇದನ್ನೂ ಓದಿ:ಪ್ರತಿ ಮದುವೆಯೂ ಹಿಂಸಾತ್ಮಕ ಎನ್ನಲಾಗದು: ಸಚಿವೆ ಸ್ಮತಿ ಇರಾನಿ

2022ರ ಜ. 27ರ ಅಂತ್ಯಕ್ಕೆ ಈ ವರ್ಷ 134 ವಾಹನ ಸರೆಂಡರ್‌ ಆಗಿದೆ. ಇದರಲ್ಲಿ 21 ಬಸ್‌, 11 ಕ್ಯಾಬ್‌ ಸೇರಿಕೊಂಡಿವೆ. 2015-16ರಿಂದ ಇಲ್ಲಿಯವರೆಗೆ 329 ವಾಹನಗಳು ಸರೆಂಡರ್‌ ಆಗಿವೆ. ತೆರಿಗೆ ಬಾಕಿ ಇಟ್ಟುಕೊಂಡಿದ್ದ 558 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2.66 ಕೋಟಿ ರೂ. ತೆರಿಗೆ ಬರಬೇಕಿದ್ದು, 372 ವಾಹನ ಮಾಲಕರು 1.31 ಕೋಟಿ ರೂ. ತೆರಿಗೆ ಪಾವತಿಸಿದ್ದು, 186 ವಾಹನ ಮಾಲಕರಿಂದ 1.34 ಕೋಟಿ ರೂ. ತೆರಿಗೆ ಪಾವತಿಗೆ ಬಾಕಿಯಿದೆ.

ಎಲ್ಲಿ? ಎಷ್ಟು? ನೋಂದಣಿ
ಉಡುಪಿ ಆರ್‌ಟಿಒ
2020-21ರಲ್ಲಿ
(ಮಾರ್ಚ್‌ ವರೆಗೆ) 19,424
2021-22ರಲ್ಲಿ
(2021ರ ಡಿಸೆಂಬರ್‌ ಅಂತ್ಯ) 11,202

ಮಂಗಳೂರು ಆರ್‌ಟಿಒ
2020ರಲ್ಲಿ 32,052
2021ರಲ್ಲಿ 35,751
2022ರಲ್ಲಿ 4,213

ಪುತ್ತೂರು ಆರ್‌ಟಿಒ
2022ರಲ್ಲಿ 1,256
2021ರಲ್ಲಿ 10,875
2020ರಲ್ಲಿ 10,013

ಬಂಟ್ವಾಳ ಆರ್‌ಟಿಒ
2022ರಲ್ಲಿ 772
2021ರಲ್ಲಿ 6,299
2020ರಲ್ಲಿ 6,103

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

12-epson

Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.