ಸಿರಿಧಾನ್ಯಕ್ಕೆ ಬಜೆಟ್ನಲ್ಲೂ ಸಿಕ್ತು ಸಿರಿ!
Team Udayavani, Feb 5, 2022, 3:40 PM IST
ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಮಂಡಿಸಿರುವ ಪ್ರಸಕ್ತ ಸಾಲಿನಬಜೆಟ್ನ ನೇರ ಲಾಭ ರಾಜ್ಯದ ದಾವಣಗೆರೆಜಿಲ್ಲೆಗೆ ದೊರೆತಿದ್ದು, ಸಿರಿಧಾನ್ಯ ಕ್ಷೇತ್ರದಲ್ಲಿ ಕ್ಷಿಪ್ರಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ.ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ “ಆತ್ಮನಿರ್ಭರಭಾರತ’ಕ್ಕೆ ಬಲ ನೀಡುವ ನಿಟ್ಟಿನಲ್ಲಿ ಈಗಾಗಲೇ”ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ರೂಪಿಸಿದಾವಣಗೆರೆ ಜಿಲ್ಲೆಯಲ್ಲಿ ಸಿರಿಧಾನ್ಯಉತ್ಪನ್ನಗಳಿಗೆವಿಶೇಷ ಪ್ರೋತ್ಸಾಹ ನೀಡುತ್ತಿದೆ.
ಈಗ ಕೇಂದ್ರಸರ್ಕಾರ ಮುಂದಿನ 2023ನೇ ವರ್ಷವನ್ನು”ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದುಬಜೆಟ್ನಲ್ಲಿ ಘೋಷಿಸಿದೆ. ಇದರಿಂದ ಸಿರಿಧಾನ್ಯಕ್ಕೆಕೋಯ್ಲೋತ್ತರ ಮೌಲ್ಯವರ್ಧನೆಗೆ ಆದ್ಯತೆ, ವಿದೇಶಿಮಾರುಕಟ್ಟೆ, ಬ್ರಾÂಂಡಿಂಗ್ಗೆ ಉತ್ತೇಜನ ಸಿಗಲಿದೆ.ಹೀಗಾಗಿ ಜಿಲ್ಲೆಯ ಸಿರಿಧಾನ್ಯ ಕೃಷಿ ಹಾಗೂಸಿರಿಧಾನ್ಯ ಆಧಾರಿತ ಉತ್ಪನ್ನಗಳ ಉದ್ಯಮಕ್ಕೆ ಆನೆಬಲ ಬಂದಂತಾಗಿದೆ.
ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳುಸಿರಿಧಾನ್ಯ ವಿಚಾರದಲ್ಲಿ ವಿಶೇಷ ಆಸಕ್ತಿ, ಪ್ರೋತ್ಸಾಹನೀಡುತ್ತಿರುವುದರಿಂದ ದಾವಣಗೆರೆ ಜಿಲ್ಲೆಯಸಿರಿಧಾನ್ಯ ಉತ್ಪನ್ನದ ಮೇಲೆ ಹೆಚ್ಚಿನ ಭರವಸೆಮೂಡಿದೆ. ಸಿರಿಧಾನ್ಯ ಉತ್ಪನ್ನಗಳ ಉದ್ಯಮದಲ್ಲಿಏನೆಲ್ಲ ಸಾಧನೆ ಮಾಡಬಹುದು ಎಂಬಕುತೂಹಲವೂ ಹೆಚ್ಚಿದೆ.ಡಬಲ್ ಧಮಾಕಾ: ಸಿರಿಧಾನ್ಯಕ್ಕೆ ಕೇಂದ್ರಹಾಗೂ ರಾಜ್ಯ ಎರಡೂ ಸರ್ಕಾರಗಳು ವಿಶೇಷಪ್ರೋತ್ಸಾಹ ನೀಡುತ್ತಿರುವುದರಿಂದ ದಾವಣಗೆರೆಜಿಲ್ಲೆಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಕೇಂದ್ರಸರ್ಕಾರದ ಕ್ಲಸ್ಟರ್ ಯೋಜನೆ ಮೂಲಕ ಈಗಾಗಲೇಜಿಲ್ಲೆಯಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರ (ಕಾಮನ್ಫೆಸಿಲಿಟಿ ಸೆಂಟರ್) ಸ್ಥಾಪನೆಯಾಗುತ್ತಿದೆ.
ಈಕೇಂದ್ರ ಸ್ಥಾಪನೆಗಾಗಿ ಕೇಂದ್ರದಿಂದ ಏಳೂವರೆಕೋಟಿ ರೂ. ಮಂಜೂರಾಗಿದ್ದು ದಾವಣಗೆರೆತಾಲೂಕಿನ ಮಲ್ಲಶೆಟ್ಟಿಹಳ್ಳಿಯಲ್ಲಿ ಒಂದು ಎಕರೆಜಾಗವನ್ನೂ ಪಡೆಯಲಾಗಿದೆ. ಕಟ್ಟಡ ನಿರ್ಮಾಣಕಾರ್ಯವೂ ಆರಂಭವಾಗಿದೆ. ಜಿಲ್ಲೆಯಲ್ಲಿರುವಅಂದಾಜು 40ಕ್ಕೂ ಹೆಚ್ಚು ಸಿರಿಧಾನ್ಯ ಸಂಬಂಧಿತಉದ್ದಿಮೆಗಳಿಗೆ ಈ ಕೇಂದ್ರದಲ್ಲಿ ಒಂದೇ ಕಡೆಮೂಲಸೌಕರ್ಯ ಕಲ್ಪಿಸುವ ಯೋಚನೆ ಇದೆ. ಇಲ್ಲಿಸಿರಿಧಾನ್ಯ ಸಂಸ್ಕರಣೆ, ಮೌಲವರ್ಧನೆ, ಪ್ಯಾಕಿಂಗ್ಸೇರಿದಂತೆ ಇನ್ನಿತರ ಕೈಗಾರಿಕಾ ಚಟುವಟಿಕೆ ನಡೆಯಲಿವೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.