ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಳಕ್ಕೆ ಒತ್ತಾಯ
Team Udayavani, Feb 5, 2022, 3:43 PM IST
ದಾವಣಗೆರೆ: ವೇತನ ಹೆಚ್ಚಿಸಲು ಪುನರ್ಪರಿಶೀಲನೆ ಮಾಡುವಂತೆ ಒತ್ತಾಯಿಸಿಶುಕ್ರವಾರ ರಾಜ್ಯ ಅಕ್ಷರ ದಾಸೋಹಬಿಸಿಯೂಟ ತಯಾರಕರ ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟತಯಾರಕರು ಜಿಲ್ಲಾಡಳಿತದ ಎದುರುಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದಬಜೆಟ್ನಲ್ಲಿ ಬಿಸಿಯೂಟ ತಯಾರಕರಿಗೆವೇತನ ಹೆಚ್ಚಿಸದೆ ಅನ್ಯಾಯ ಮಾಡಿದೆ.ಇಂದಿನ ಅಗತ್ಯ ವಸ್ತುಗಳ ಬೆಲೆ, ಜೀವನನಿರ್ವಹಣೆ ಆಧಾರದಲ್ಲಿ ವೇತನ ನೀಡಬೇಕು.
ಕೇಂದ್ರ ಸರ್ಕಾರ ವೇತನ ಹೆಚ್ಚಿಸಲು ಪುನರ್ಪರಿಶೀಲನೆ ಮಾಡುವಂತಾಗಬೇಕು ಎಂದುಒತ್ತಾಯಿಸಿದರು.ಕಳೆದ ಜನವರಿಯಲ್ಲಿ ಫೆಡರೇಷನ್ನೇತೃತ್ವದಲ್ಲಿ ಹೋರಾಟ ನಡೆಸಿ 2022ರಬಜೆಟ್ನಲ್ಲಿ ಬಿಸಿಯೂಟ ತಯಾರಕರಿಗೆವೇತನ ಹೆಚ್ಚಳ ಮಾಡಬೇಕು ಎಂದುಮನವಿ ಮಾಡಲಾಗಿತ್ತು. ರಾಜ್ಯದ್ಯಾಂತ ಎಲ್ಲತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.
ಮಹಿಳೆಯರ ಬಗ್ಗೆ ಪುಂಖಾನುಪುಂಖವಾಗಿಮಾತನಾಡುವ ಕೇಂದ್ರ ಸರ್ಕಾರ,ಬಿಸಿಯೂಟ ತಯಾರಿಕೆಯಲ್ಲಿತೊಡಗಿಸಿಕೊಂಡಿರುವ ಮಹಿಳೆಯರನ್ನುಕಡೆಗಣಿಸಿದೆ ಎಂದು ದೂರಿದರು.ಕಳೆದ 19 ವರ್ಷಗಳಲ್ಲಿ ಶಾಲೆಗಳಲ್ಲಿಬಿಸಿಯೂಟ ತಯಾರಕರಾಗಿ ಕೆಲಸಮಾಡುತ್ತಿರುವ ಮುಖ್ಯ ಅಡುಗೆಯವರಿಗೆಮಾಸಿಕ 2,700 ರೂ. ಹಾಗೂ ಸಹಾಯಕಅಡುಗೆಯವರಿಗೆ 2,600 ರೂ. ಮಾತ್ರನೀಡಲಾಗುತ್ತಿದೆ. ಬರುವ ವೇತನದಲ್ಲಿಜೀವನ ನಿರ್ವಹಣೆ ದುಸ್ತರವಾಗುತ್ತಿದೆ.ಅತ್ಯಲ್ಪ ವೇತನದಲ್ಲಿ ಜೀವನ ನಿರ್ವಹಣೆಬಹಳ ಕಷ್ಟವಾಗುತ್ತಿರುವುದರಿಂದ ವೇತನಹೆಚ್ಚಿಸಬೇಕು.
ಕೇಂದ್ರ ಸರ್ಕಾರವೇರೂಪಿಸಿರುವಂತೆ ಬಿಸಿಯೂಟ ತಯಾರಕರಿಗೆಕನಿಷ್ಠ ವೇತನ ಜಾರಿಗೊಳಿಸಬೇಕು.ಬಿಸಿಯೂಟ ತಯಾರಕರಿಗೆ ಇದೇ ಬಜೆಟ್ನಲ್ಲಿ ವೇತನ ಹೆಚ್ಚಿಸುವಂತೆ ಪುನರ್ ಪರಿಶೀಲನೆಮಾಡಿ ಕನಿಷ್ಠ ವೇತನ ಜಾರಿಗೊಳಿಸುವಂತೆಒತ್ತಾಯಿಸಿ ಬಿಸಿಯೂಟ ತಯಾರಕರುಜಿಲ್ಲಾಧಿಕಾರಿ ಮಹಂತೇಶ ಬೀಳಗಿ ಅವರಮೂಲಕ ಮೂಲಕ ಪ್ರಧಾನಮಂತ್ರಿಗಳಿಗೆಮನವಿ ಸಲ್ಲಿಸಿದರು.ಬಿಸಿಯೂಟ ತಯಾರಕರ ಫೆಡರೇಷನ್ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ತಾಲೂಕುಅಧ್ಯಕ್ಷೆ ಮಳಲ್ಕೆರೆ ಜಯಮ್ಮ, ಪದ್ಮಾ, ರಾಜ್ಯಖಜಾಂಚಿ ಬೆಳಲಗೆರೆ ರುದ್ರಮ್ಮ, ಸರೋಜಾ,ಸಿ. ರಮೇಶ್, ಮಂಜುಳಾ, ಗೀತಾ, ಚೆನ್ನಮ್ಮ,ಸುವರ್ಣಮ್ಮ, ಎಐಟಿಯುಸಿ ಮುಖಂಡನರೇಗಾ ರಂಗನಾಥ್ ಮತ್ತಿತರರುಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
Multi level parking ಇನ್ನೆಷ್ಟು ವರ್ಷ ಬೇಕು? ಬರೀ ಪಾರ್ಕಿಂಗಲ್ಲ, ಶಾಪಿಂಗ್ ಮಾಲೂ ಇದೆ!
Shirva: ಬಂಟಕಲ್ ತಾಂತ್ರಿಕ ಕಾಲೇಜು ಪದವಿ ಪ್ರದಾನ ಕಾರ್ಯಕ್ರಮ
Karkala: ವಿದ್ಯಾರ್ಥಿನಿ ರೂಪಿಸಿದ ವಿಜ್ಞಾನ ಮಾದರಿಗೆ ರಾಷ್ಟ್ರ ಪ್ರಶಸ್ತಿ ಗರಿ
Kundapura-ಬೈಂದೂರು ಹೆದ್ದಾರಿ: ಬೆಳಗದ ಬೀದಿ ದೀಪಗಳು
Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.